ಬ್ರೇಕಿಂಗ್ ನ್ಯೂಸ್
14-10-24 01:54 pm Mangalore Correspondent ಕರಾವಳಿ
ಮಂಗಳೂರು, ಅ.14: ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಖಾಸಗಿ ಬಸ್ ಸಿಬಂದಿ ಪರಸ್ಪರ ಹೊಡೆದಾಟ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಘಟನೆ ಸಂಬಂಧಿಸಿ ಇದೀಗ ಎರಡೂ ಬಸ್ಸಿನ ಸಿಬಂದಿ ಆಸ್ಪತ್ರೆಗೆ ದಾಖಲಾಗಿ ದೂರು- ಪ್ರತಿದೂರು ನೀಡಿದ್ದು ಕದ್ರಿ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ಎಂದು ಒಂದು ತಂಡ ದೂರಿದ್ದರೆ, ಮತ್ತೊಂದರಲ್ಲಿ ಉಗಿದು ಅವಾಚ್ಯ ನಿಂದನೆ ಮಾಡಿದ್ದಕ್ಕಾಗಿ ಹಲ್ಲೆಯೆಂದು ದೂರಿತ್ತಿದ್ದಾರೆ.
ವಿಟ್ಲ – ಮಂಗಳೂರು ರೂಟಿನಲ್ಲಿ ಓಡಾಡುವ ಸೆಲಿನಾ ಬಸ್ಸಿನ ಸಿಬಂದಿ ಮತ್ತು ಮತ್ತೊಂದು ಖಾಸಗಿ ಬಸ್ ಧರಿತ್ರಿ ಬಸ್ ಸಿಬಂದಿ ಮಂಗಳೂರಿನ ಕಂಕನಾಡಿ ವೃತ್ತದ ಬಳಿ ಬಸ್ಸಿನ ಒಳಗಡೆಯೇ ಹೊಡೆದಾಡಿದ್ದರು. ಅ.10ರಂದು ಘಟನೆ ನಡೆದಿದ್ದು, ಒಂದು ಬಸ್ಸಿನ ಸಿಬಂದಿ ಉಗಿದ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು ಎಂದು ಹೇಳಲಾಗಿತ್ತು. ಇದೀಗ ಸೆಲಿನಾ ಬಸ್ಸಿನ ಚಾಲಕ ಸಂದೀಪ್ ನೀಡಿದ ದೂರಿನಲ್ಲಿ ಅ.10ರಂದು ವಿಟ್ಲದಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ತೆರಳಿದ್ದ ಬಸ್ ಮರಳುತ್ತಿದ್ದಾಗ ಕಂಕನಾಡಿ ಸಿಗ್ನಲ್ ಬಳಿ ಧರಿತ್ರಿ ಬಸ್ಸಿನ ಚಾಲಕ ಸುರೇಶ್ ಮತ್ತು ನಿರ್ವಾಹಕ ರಾಕೇಶ್ ಬಸ್ಸನ್ನು ಅಡ್ಡಹಾಕಿದ್ದು, ಬಳಿಕ ತನಗೆ ಮತ್ತು ನಿರ್ವಾಹಕ ಭುವನೇಶ್ವರ್ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿಸಿದ್ದಾರೆ. ಚಾಲಕ ಸಂದೀಪ್ ಆಸ್ಪತ್ರೆಗೆ ದಾಖಲಾಗಿದ್ದು, ಬಿಸಿ ರೋಡ್ ಬಳಿ ಬಸ್ಸನ್ನು ಓವರ್ ಟೇಕ್ ಮಾಡಿದ್ದ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಧರಿತ್ರಿ ಬಸ್ಸಿನ ಚಾಲಕ ಸುರೇಶ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪ್ರತಿ ದೂರು ನೀಡಿದ್ದಾರೆ. ಸೆಲಿನಾ ಬಸ್ಸಿನ ನಿರ್ವಾಹಕ ಭುವನೇಶ್ವರ್ ಜ್ಯೋತಿ ವೃತ್ತದ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತನಾಡಿದ್ದಾನೆ, ಉಗಿದು ನಿಂದಿಸಿದ್ದಾನೆ. ಬಳಿಕ ಕಂಕನಾಡಿ ಸಿಗ್ನಲ್ ಬಳಿ ತಮ್ಮ ಬಸ್ಸನ್ನು ಅಡ್ಡಹಾಕಿ ಗಾಡಿ ತೊಳೆಯುವ ಬ್ರಶ್ ನಲ್ಲಿ ಹಲ್ಲೆ ನಡೆಸಿದ್ದಾಗಿ ದೂರಿದ್ದಾರೆ. ಎರಡು ದೂರನ್ನು ಗಮನಿಸಿದರೆ ಕ್ಷುಲ್ಲಕ ವಿಚಾರದಲ್ಲಿ ಬಸ್ ಸಿಬಂದಿ ಪ್ರಯಾಣಿಕರ ಎದುರಲ್ಲೇ ಹೊಡೆದಾಡಿದ್ದು ಕಂಡುಬರುತ್ತದೆ. ವಿಡಿಯೋ ಕೊನೆಯಲ್ಲಿ ಭುವನೇಶ್ವರ್ ಪ್ರಯಾಣಿಕರನ್ನು ಇಳಿಯಲು ಹೇಳಿ ಬಸ್ಸನ್ನು ಪೊಲೀಸ್ ಠಾಣೆಗೆ ಒಯ್ಯುವುದಾಗಿ ಹೇಳುವುದು ದಾಖಲಾಗಿದೆ.
ಬಸ್ ಸಿಬಂದಿಯ ಹೊಡೆದಾಟದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಎದುರಲ್ಲೇ ಬಸ್ಸನ್ನು ನಿಲ್ಲಿಸಿ ಬೀದಿ ಕಾಳಗ ನಡೆಸಿರುವುದನ್ನು ಖಂಡಿಸಿದ್ದಲ್ಲದೆ ಬಸ್ ಸಿಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನಿಜಕ್ಕಾದರೆ ಈ ಘಟನೆ ಬಗ್ಗೆ ವಿಡಿಯೋ ಆಧರಿಸಿ ಪೊಲೀಸರೇ ಕೇಸು ದಾಖಲಿಸಿ ಕ್ರಮ ಜರುಗಿಸಬೇಕಿತ್ತು. ಇದೀಗ ಎರಡೂ ಬಸ್ಸಿನ ಸಿಬಂದಿಯೇ ಪೊಲೀಸ್ ದೂರು ನೀಡಿದ್ದು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
Mangalore Private bus drivers fight in broad daylight, police take no action even after counter complaint. The reckless behaviour of private bus drivers in Dakshina Kannada and Udupi districts is not a new phenomenon. Hundreds of private buses have long been operating in blatant disregard of transportation rules, with little to no action from the authorities, despite their awareness of the issue.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm