ಬ್ರೇಕಿಂಗ್ ನ್ಯೂಸ್
03-10-24 10:17 pm Mangalore Correspondent ಕರಾವಳಿ
ಮಂಗಳೂರು, ಅ.3: ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು, ಆರಂಭಗೊಂಡ ಎರಡೇ ವರ್ಷದಲ್ಲಿ ಅಗಾಧ ಮಟ್ಟಿಗೆ ಬೆಳೆದು ನಿಂತಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡುಬಿದ್ರೆ ಸೇರಿದಂತೆ ಎಂಟು ಕಡೆ ಕಚೇರಿಗಳನ್ನು ಹೊಂದಿದ್ದು, ಇದೀಗ ಒಂದೇ ದಿನ ಮತ್ತೆರಡು ಕಚೇರಿಗಳನ್ನು ಆರಂಭಿಸುತ್ತಿದೆ.
ಸುರತ್ಕಲ್ ಮತ್ತು ಬಂಟ್ವಾಳ ತಾಲೂಕಿನ ಮೆಲ್ಕಾರಿನಲ್ಲಿ ಅ.5ರಂದು ಒಂದೇ ದಿನ ಬೆಳಗ್ಗೆ ಮತ್ತು ಸಂಜೆ ಎರಡು ಕಚೇರಿಗಳ ಉದ್ಘಾಟನೆ ನಡೆಯಲಿದೆ. ಸುರತ್ಕಲ್ ನಲ್ಲಿ ಮಾರ್ಕೆಟ್ ರಸ್ತೆಯಲ್ಲಿರುವ ಆರೋಗ್ಯ ಕೇಂದ್ರದ ಬಳಿಯ ಕಟ್ಟಡದಲ್ಲಿ ಮತ್ತು ಮೆಲ್ಕಾರಿನ ಪ್ರತಿಷ್ಠಿತ ಬಿರ್ವ ಸೆಂಟರ್ ಕಟ್ಟಡದಲ್ಲಿ ನಿಧಿ ಸಂಸ್ಥೆಯ ಕಚೇರಿ ಆರಂಭಗೊಳ್ಳಲಿದೆ. ಎರಡೂ ಕೇಂದ್ರದಲ್ಲಿ ಪ್ರತ್ಯೇಕವಾಗಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆ 10.30ಕ್ಕೆ ಸುರತ್ಕಲ್ ಶಾಖೆ ಮತ್ತು ಸಂಜೆ 5.30ಕ್ಕೆ ಮೆಲ್ಕಾರ್ ಶಾಖೆ ಉದ್ಘಾಟನೆಯಾಗಲಿದೆ.



ಎರಡೂ ಶಾಖೆಗಳನ್ನು ದಕ್ಷಿಣ ಕನ್ನಡ ಮ್ಯೂಚ್ವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಲ್ವಿನ್ ಜೋಯಲ್ ನೊರೊನ್ಹಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ ಕುಚ್ಚಿಗುಡ್ಡೆ ಸಂಜೀವ ಪೂಜಾರಿ, ಸದಾಶಿವ ಪೂಜಾರಿ ಬೊಂಡಾಲ, ನೇಹ ಇಲೆಕ್ಟ್ರಿಕಲ್ಸ್ ಮಾಲಕ ಸತೀಶ್, ಸಿಟಿ ಪರ್ಲ್ ಕಾಂಪ್ಲೆಕ್ಸ್ ಮಾಲಕ ಐಬರ್ಟ್ ಜೆರಾಲ್ಡ್ ಡಿಸೋಜ, ಉದ್ಯಮಿ ರಮಾನಾಥ ಶೆಟ್ಟಿ, ಕೇಶವ ಪೂಜಾರಿ, ನಿಧಿ ಲಿಮಿಟೆಡ್ ಸಂಸ್ಥೆಯ ಕಡಬ ಶಾಖೆಯ ಅಧ್ಯಕ್ಷ ಎಸ್. ಸತೀಶ್ ನಾಯಕ್, ಸುಳ್ಯ ಶಾಖೆಯ ಅಧ್ಯಕ್ಷ ವೆಂಕಟರಮಣ, ಮಂಗಳೂರಿನ ಪಿವಿಎಸ್ ಶಾಖೆ ಜನರಲ್ ಮ್ಯಾನೇಜರ್ ಹರ್ಷಿತ್ ಸಾಲ್ಯಾನ್, ಕಾರ್ಕಳ ಶಾಖಾಧ್ಯಕ್ಷ ಕಿರಣ್ ಬಂಗೇರ ಉಪಸ್ಥಿತಿ ಇರಲಿದ್ದಾರೆ.
ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ಬ್ಯಾಂಕ್ ಮಾದರಿಯಲ್ಲೇ ಹಣಕಾಸು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಾಗಿದ್ದು, ಆರಂಭಗೊಂಡ ನಾಲ್ಕೇ ವರ್ಷದಲ್ಲಿ ಹತ್ತು ಶಾಖೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಮಾಡಿದೆ. ಮೂಡುಬಿದ್ರೆಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಮಂಗಳೂರಿನ ಪಿವಿಎಸ್ ವೃತ್ತದಲ್ಲಿ ಎರಡನೇ ಶಾಖೆ, ಆನಂತರ ಹಂಪನಕಟ್ಟೆ, ಅಸೈಗೋಳಿ, ಕಡಬ, ಕಾರ್ಕಳ, ಗುತ್ತಿಗಾರು, ಪುತ್ತೂರಿನಲ್ಲಿ ಶಾಖೆಗಳನ್ನು ಆರಂಭಿಸಿದೆ. ಇದೀಗ ಮತ್ತೆರಡು ಕಚೇರಿಗಳನ್ನು ಸುರತ್ಕಲ್ ಮತ್ತು ಮೆಲ್ಕಾರಿನಲ್ಲಿ ಆರಂಭಿಸುತ್ತಿದ್ದು, ಜಿಲ್ಲೆಯಾದ್ಯಂತ ಜನಸಾಮಾನ್ಯರ ಬಳಿಗೆ ತಲುಪುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Mangalore Dakshina Kannada Mutual benefit Nidhi Company to inaugurate 10th branch at surathkal and Melkar in just span of 4 years. DKMBNL is a one of India's leading Mutual Nidhi Company. DKMBNL describes itself as a one-stop financial service provider.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm