ಬ್ರೇಕಿಂಗ್ ನ್ಯೂಸ್
08-09-24 09:06 pm Mangalore Correspondent ಕರಾವಳಿ
Photo credits : CatholicTime
ಮಂಗಳೂರು, ಸೆ.8: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಗಣೇಶೋತ್ಸವ ಜೊತೆ ಜೊತೆಗೆ ಕ್ರೈಸ್ತರ ಮೋಂತಿ ಹಬ್ಬವೂ ಬಂದಿದೆ. ಭಾನುವಾರ ಉಭಯ ಜಿಲ್ಲೆಗಳ ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಮೋಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮದರ್ ಮೇರಿಯ ಜನ್ಮದಿನದ ಹೆಸರಲ್ಲಿ ಮೋಂತಿ ಹಬ್ಬ ಆಚರಿಸಲಾಗುತ್ತದೆ. ಇದರ ಜೊತೆಗೆ ಕ್ರೈಸ್ತರ ಕೃಷಿ ಹಿನ್ನೆಲೆ ಬಿಂಬಿಸುವ ವಿವಿಧ ಆಚರಣೆಗಳನ್ನೂ ಮಾಡಲಾಗುತ್ತದೆ. ಭತ್ತದ ತೆನೆಯನ್ನು ತಂದು ಪೂಜಿಸಿ ಚರ್ಚ್ ಪಾದ್ರಿಗಳೇ ಭಕ್ತರಿಗೆ ವಿತರಣೆ ಮಾಡುತ್ತಾರೆ.




















ಇದಲ್ಲದೆ, ಭತ್ತ ಇನ್ನಿತರ ಬೆಳೆಗಳು ಕೊಯ್ಲಿಗೆ ಬರುವುದರಿಂದ ಕೃಷಿ ಹಿನ್ನೆಲೆಯ ಕ್ರೈಸ್ತರು ಮೋಂತಿ ಹಬ್ಬಕ್ಕೆ ತಮ್ಮ ಬೆಳೆಗಳನ್ನು ತಂದು ಚರ್ಚ್ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೀಸಸ್ ಮಗುವಾಗಿದ್ದಾಗಿನ ಚಿತ್ರಣ, ಮದರ್ ಮೇರಿಯ ಚಿತ್ರಣವನ್ನು ಹೊತ್ತ ಟೆಂಪೋವನ್ನು ಶೃಂಗರಿಸಿ ಮಹಿಳೆಯರು, ಪುರುಷರು ಮೆರವಣಿಗೆಯಲ್ಲಿ ಬರುತ್ತಾರೆ. ಕಲ್ಯಾಣಪುರದ ಚರ್ಚ್, ಮಂಗಳೂರಿನ ಸೆಬಾಸ್ಟಿಯನ್ ಚರ್ಚ್ ಸೇರಿ ಪ್ರಮುಖ ಚರ್ಚ್ ಆವರಣಗಳಲ್ಲಿ ಮೋಂತಿ ಹಬ್ಬದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. ಮಕ್ಕಳು ಹೂವನ್ನು ಹಿಡಿದು ಬಂದಿದ್ದರೆ, ದೊಡ್ಡವರು ತಾವು ಬೆಳೆಸಿದ ಫಲ ವಸ್ತುಗಳನ್ನು ತರುತ್ತಾರೆ. ಬಳಿಕ ಹೊಸ ಅಕ್ಕಿಯ ಊಟವನ್ನೂ ಏರ್ಪಡಿಸುತ್ತಾರೆ. ಅಪರೂಪಕ್ಕೆ ತಾವು ಬೆಳೆದ ತರಕಾರಿಯನ್ನೇ ಬಳಸಿ ಊಟಕ್ಕೆ ಪದಾರ್ಥಗಳನ್ನು ಮಾಡುತ್ತಾರೆ.
ಗಣೇಶೋತ್ಸವ ಸಂದರ್ಭದಲ್ಲಿ ಕೆಲವು ಹಿಂದುಗಳ ಮನೆಗಳಲ್ಲಿ ಹೊಸ ಅಕ್ಕಿ ಊಟ, ತೆನೆ ಕಟ್ಟುವ ಸಂಪ್ರದಾಯ ಇದೆ. ಈ ಬಾರಿ ಕ್ರೈಸ್ತರ ಮೋಂತಿ ಹಬ್ಬವೂ ಜೊತೆಗೆ ಬಂದಿದ್ದರಿಂದ ಕರಾವಳಿಯಲ್ಲಿ ಎಲ್ಲೆಡೆ ಹಬ್ಬದ ಸಡಗರ ಮನೆ ಮಾಡಿದೆ.
Nativity 2024, Monthi Fest celebrated with joy in all catholic churches in Mangalore. Churches across the coastal districts of Mangaluru and Udupi celebrated the feast of Our Lady of Nativity, known as Monthi Fest, with joy and devotion on Sunday, September 8.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 02:16 pm
HK News Staffer
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm