ಬ್ರೇಕಿಂಗ್ ನ್ಯೂಸ್
09-12-20 03:39 pm Mangalore Correspondent ಕರಾವಳಿ
ಉಳ್ಳಾಲ, ಡಿ, 9 : ತನ್ನ ಫರ್ನಿಚರ್ ವರ್ಕ್ ಶಾಪ್ ಗೆ ತಡೆಯಾಗುತ್ತಿದೆ ಎಂಬ ನೆಪ ಹೇಳಿ, ಹೆದ್ದಾರಿ ಅಂಚಿನಲ್ಲಿದ್ದ ಬೀದಿ ವ್ಯಾಪಾರಿಗಳ ಗೂಡಂಗಡಿಗಳನ್ನು ಮಾಜಿ ಕಾಂಗ್ರೆಸ್ ಸೇವಾದಳದ ನಾಯಕ ಅಶ್ರಫ್ ಪೊಲೀಸರಿಂದ ಕಿತ್ತು ತೆಗೆಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕಾಂಗ್ರೆಸಿನ ಸೇವಾದಳದ ಜಿಲ್ಲಾ ನಾಯಕನಾಗಿದ್ದ ಅಶ್ರಪ್ ಅವರು ತೊಕ್ಕೊಟ್ಟು , ಅಂಬಿಕಾರೋಡ್ ಹೆದ್ದಾರಿ ಪಕ್ಕದಲ್ಲಿ ತನ್ನ ಫರ್ನಿಚರ್ ವರ್ಕ್ ಶಾಪ್ ಹೊಂದಿದ್ದಾರೆ. ಸ್ಥಳೀಯರ ಪ್ರಕಾರ ಈ ಫರ್ನಿಚರ್ ವರ್ಕ್ ಶಾಪ್ ಅಕ್ರಮ ಎಂದು ಹೇಳಲಾಗುತ್ತಿದೆ. ಅಶ್ರಫ್ ಮೇಲೆ ಅತ್ಯಾಚಾರದ ಆರೋಪ ಕೇಸ್ ಆದ ಮೇಲೆ ಅವರು ಕಾಂಗ್ರೆಸ್ ಪಕ್ಷದಿಂದ ಮೂಲೆಗುಂಪಾಗಿದ್ದರು. ಇವತ್ತು ಅಶ್ರಫ್, ತನ್ನ ಫರ್ನಿಚರ್ ವರ್ಕ್ ಶಾಪ್ ಮುಂದೆ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನ ಏಕಾಏಕಿ ಪೊಲೀಸ್ ಬಲ ಪ್ರಯೋಗಿಸಿ ಎತ್ತಂಗಡಿ ಮಾಡಿಸಲು ಪ್ರಯತ್ನಿಸಿದ್ದಾರೆ.


ಅಲ್ಲದೆ ಉಳ್ಳಾಲ ನಗರಸಭೆ ಪೌರಾಯುಕ್ತರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಸ್ಥಳಕ್ಕೆ ಬಂದ ನಗರ ಪೌರಾಯುಕ್ತ ರಾಯಪ್ಪನವರೂ ಧನಿಕನ ಮಾತು ಕೇಳಿ ತನಗೆ ಸಂಬಂಧಿಸದ ಹೆದ್ದಾರಿ ಬದಿಯ ಬೀದಿ ವ್ಯಾಪಾರಿಗಳ ಗೂಡುಗಳನ್ನು ತೆರವುಗೊಳಸಿ ಅಮಾನವೀಯತೆ ಮೆರೆದಿದ್ದಾರೆ. ಹೆದ್ದಾರಿ ಅಂಚಿನ ವರೆಗೂ ಇರುವ ಜಾಗ ತನ್ನದೇ ಎಂದು ಬೀದಿ ಬದಿ ವ್ಯಾಪಾರಿಗಳಲ್ಲಿ ಅಶ್ರಫ್ ಹೇಳಿಕೊಂಡಿದ್ದಾರಂತೆ.


ಸ್ಥಳದಲ್ಲಿ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ ಒಟ್ಟಾಗಿ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿದ್ದಾರೆ. ಬಡವರು ಹೆದ್ದಾರಿಯಲ್ಲಿ ಎಲ್ಲೆಡೆಯಲ್ಲೂ ಹೊಟ್ಟೆ ಹೊರೆಯಲು ಸಣ್ಣ ವ್ಯಾಪಾರ ನಡೆಸೋದು ಸಾಮಾನ್ಯ. ಆದರೆ ಓರ್ವ ಪ್ರಭಾವಿಯ ಮಾತು ಕೇಳಿ ಈ ರೀತಿ ಬಡವರ ಮೇಲೆ ಏಕಾಏಕಿ ಆಕ್ರಮಣ ಸರಿಯಲ್ಲವೆಂದು ಪೊಲೀಸರನ್ನು ತರಾಟೆಗೆ ತೆಗೆದಿದ್ದಾರೆ.
ಕಾಂಗ್ರೆಸ್ನ ದೀಪಕ್ ಪಿಲಾರ್, ಖಾದರ್ ಉಳ್ಳಾಲ್, ಬಿಜೆಪಿಯ ಚರಣ್ ಪೂಜಾರಿ, ನಾಗೇಶ್ ಕುಂಪಲ ಮೊದಲಾದವರು ಸ್ಥಳದಲ್ಲಿದ್ದು ಬಡ ಬೀದಿ ವ್ಯಾಪಾರಿಗಳ ಪರ ನಿಂತಿದ್ದಾರೆ.
Congress Member Ashraff from Thokottu mercilessly demolishes petty shops through police personal for the sake of his business activities.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm