ಬ್ರೇಕಿಂಗ್ ನ್ಯೂಸ್
22-08-24 11:09 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 22: ಅಕ್ರಮ ಮರಳುಗಾರಿಕೆಯಿಂದಾಗಿ ಮಂಗಳೂರು ಉತ್ತರ ಕ್ಷೇತ್ರದ ಅಡ್ಡೂರು- ಪೊಳಲಿ ಸೇತುವೆ ಅಪಾಯಕ್ಕೀಡಾಗಿದೆ. ಅಡ್ಡೂರಲ್ಲಿ ಮಾತ್ರ ಸೇತುವೆ ಕೆಳಗೆ ಸ್ಯಾಂಡ್ ಮೈನಿಂಗ್ ತಡೆಯುವ ತಾಕತ್ತು ಜಿಲ್ಲಾಡಳಿತಕ್ಕೆ ಇಲ್ವಾ? ಎಂದು ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ಸೇತುವೆ ಕೆಳಭಾಗದಲ್ಲಿ ಮರಳುಗಾರಿಕೆ ಮಾಡಿ ಸೇತುವೆ ಶಿಥಿಲವಾಗಿದೆ. ಜಿಲ್ಲಾಡಳಿತಕ್ಕೆ ಹಾಗು ಪೊಲೀಸರಿಗೆ ಅಕ್ರಮ ಮರಳುಗಾರಿಕೆ ಬಗ್ಗೆ ಹಲವಾರು ಮಂದಿ ದೂರು ನೀಡಿದ್ದರೂ ಈವರೆಗೆ ಕ್ರಮ ಆಗಿಲ್ಲ. ಶಿಥಿಲಗೊಂಡ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಆದರೂ ಪುನಃ ಮರಳುಗಾರಿಕೆ ಆರಂಭ ಆಗಿದೆ. ಆ ಪ್ರದೇಶದಲ್ಲಿ ಮಿನಿ ಪಾಕಿಸ್ಥಾನ ನಿರ್ಮಾಣವಾಗಿದೆ. ಅಡ್ಡೂರಲ್ಲಿ ಮಾತ್ರ ಬ್ರಿಜ್ ಕೆಳಗೆ ಸ್ಯಾಂಡ್ ಮೈನಿಂಗ್ ತಡೆಯುವ ತಾಕತ್ತು ಜಿಲ್ಲಾಡಳಿತಕ್ಕೆ ಇಲ್ವಾ?
ಇಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲದಿದ್ದರೆ ದೊಡ್ಡ ಸಮಸ್ಯೆ ಎಡೆ ಆಗಬಹುದು. ಸಾವಿರ ಕಂಪ್ಲೇಂಟ್ ಕೊಟ್ಟರೂ ಮೈನಿಂಗ್ ಸ್ಟಾಪ್ ಆಗಲ್ಲ ಏನರ್ಥ. ಹೊಸ ಬ್ರಿಜ್ ಬಂದ ಮೇಲೆ ಇದೇ ಮೈನಿಂಗ್ ಮುಂದುವರಿದರೆ ಮತ್ತದೇ ಸಮಸ್ಯೆಯಾಗತ್ತೆ. ಮರಳುಗಾರಿಕೆಗೆ ಲೈಸನ್ಸ್ ಇಲ್ಲದೆ ಮಾಡೋರನ್ನು ಯಾಕೆ ನಿಲ್ಲಿಸಲು ಆಗ್ತಿಲ್ಲ? ಈ ಅಕ್ರಮ ನಡೆಸುವವರಿಗೆ ಯಾರು ಬೆಂಬಲ ಮಾಡ್ತಿದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಐವಾನ್ ವಿರುದ್ಧ ಕೋರ್ಟ್ ಹೋರಾಟ
ಐವಾನ್ ಡಿಸೋಜಾ ವಿರುದ್ಧ ಕೇಸು ಹಾಕಲು ಪೊಲೀಸರು ಧೈರ್ಯ ತೋರುತ್ತಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ಪೊಲೀಸರು ಅಸಹಾಯಕರಾಗಿದ್ದಾರೆ. ಕೇಳಿದ್ರೆ ಅನುಮತಿಗೆ ಕಾಯುತ್ತಿದ್ದೇವೆಂದು ಪೊಲೀಸರು ಹೇಳ್ತಿದ್ದಾರೆ. ಪೊಲೀಸರು ನಮಗೆ ತಾಕತ್ತಿಲ್ಲ ಎಂದು ಸರೆಂಡರ್ ಆಗಿ ಕೂತುಕೊಳ್ಳಲಿ. ಲೀಗಲ್ ಆಗಿ ನಾವು ಕೇಸು ಮುಂದುವರಿಸುತ್ತೇವೆ. ಹೈಕೋರ್ಟ್ ಹಿರಿಯ ನ್ಯಾಯವಾದಿಗಳ ಜೊತೆ ಚರ್ಚೆ ಮಾಡಿದ್ದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.
Mangalore eAddur bridge damage is because of too much of sand mining says MLA Bharath Shetty. Why can’t the mangalore district administration take string action he added
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 09:49 pm
Richard and Giridhar Shetty, Mangaluru
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm