ಬ್ರೇಕಿಂಗ್ ನ್ಯೂಸ್
22-08-24 09:12 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್. 22: ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನಿವಾಸಕ್ಕೆ ಕಲ್ಲು ತೂರಿದ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದ್ದು ವೆಲೆನ್ಸಿಯಾದ ಐವಾನ್ ಡಿಸೋಜ ನಿವಾಸದಿಂದ ಪಿವಿಎಸ್ ವೃತ್ತದ ಬಳಿಯ ಜಿಲ್ಲಾ ಬಿಜೆಪಿ ಕಚೇರಿ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಜಿ ಹೆಗಡೆ ಹೇಳಿದ್ದಾರೆ.
ಮಂಗಳೂರು ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ನಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕಲ್ಲು ತೂರಾಟ ಘಟನೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇವರು ದೂರು ಕೊಟ್ಟಿದ್ದಾರೆ, ಪೊಲೀಸರು ಸರಿಯೆಂದು ಕಂಡರೆ ತನಿಖೆ ನಡೆಸುತ್ತಾರೆ ಎಂದವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರಕರಣದ ರೀತಿಯಲ್ಲೇ ರಾಜ್ಯಪಾಲರು ಉಳಿದ ಪ್ರಕರಣಕ್ಕೂ ಪ್ಯಾಸಿಕ್ಯೂಷನ್ ಅನುಮತಿ ಕೊಡಬೇಕು. ಯಾಕೆ ಕೊಡುತ್ತಾ ಇಲ್ಲ. ಮೋದಿ ಸರ್ಕಾರದ ಸರ್ವಾಧಿಕಾರಿ ಲಕ್ಷಣದ ನಡವಳಿಕೆ ಇದು. ರಾಜ್ಯಪಾಲರು ಮೋದಿ, ಶಾ ಆದೇಶವನ್ನಷ್ಟೆ ಪಾಲನೆ ಮಾಡ್ತಾರೆ. ಇವರು ಸಂವಿಧಾನ ವಿರೋಧಿ ಕೆಲಸ ಮಾಡಿದರೆ ವಿರೋಧ ಮಾಡ್ತೇವೆ. ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಪ್ರಶ್ನೆ ಮಾಡಿದ್ದೇವೆ. ಬಿಜೆಪಿಯವರು ದಕ್ಷಿಣ ಭಾರತದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದಾರೆ. ಆಮೂಲಕ ಇಲ್ಲಿನ ಗ್ಯಾರಂಟಿಯನ್ನು ಕಿತ್ತೊಗೆಯುವ ಉದ್ದೇಶ ಹೊಂದಿದ್ದಾರೆ.
ಬಿಜೆಪಿ ಶಾಸಕರು ಹಿಂದುತ್ವ ಆಧಾರದಲ್ಲಿ ಮಾತನಾಡಿದರೆ ಓಟು ಸಿಗುತ್ತೆ ಅಂದುಕೊಂಡಿದ್ದರು. ಆದರೆ ಇವರ ಮಾತು ಮೇಲಿನವರಿಗೆ ಹಿಡಿಸುತ್ತಿಲ್ಲ. ಡಿಸಿಸಿ ಕಚೇರಿಗೆ ಬಿಜೆಪಿಗರು ಮೂರು ಸಲ ಮುತ್ತಿಗೆ ಹಾಕಿದ್ದರು. ನಾವು ಈಗ ನಿಮ್ಮ ಕಚೇರಿಗೆ ನೋಟಿಸ್ ಕೊಟ್ಟೇ ಹೋಗ್ತೇವೆ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಬಹಳ ಚಂದ ಮಾತಾಡ್ತಾರಲ್ಲಾ.. ನಿಮಗೆ ರಾಜಕಾರಣ ಮಾಡಲೇಬೇಕೆಂದಿದ್ದರೆ ಅಭಿವೃದ್ಧಿ ವಿಚಾರವಾಗಿ ಮಾತನಾಡಿ. ಅಭಿವೃದ್ಧಿ ರಾಜಕಾರಣ ಮಾಡಿ, ಪ್ರವಾಹ, ಡೆಂಗಿ ಸಮಸ್ಯೆ ಪರಿಹರಿಸಿ ಎಂದು ಕುಟುಕಿದರು.
ರಾಜ್ಯಪಾಲರು ಎಲ್ಲರಿಗೂ ನೋಟಿಸ್ ನೀಡಿದರೆ ಎಲ್ಲ ಪ್ರತಿಭಟನೆಯನ್ನು ಹಿಂಪಡೀತೇವೆ. ಅವರು ಸಾಂವಿಧಾನಿಕ ಸ್ಥಾನದಲ್ಲಿದ್ದು ತಾರತಮ್ಯ ಬಿಟ್ಟು ಕೆಲಸ ಮಾಡಲಿ. ಎಚ್ ಡಿಕೆ ಏನೇನೋ ಮಾತಾಡ್ತಾರೆ, ಅವರ ಮೇಲೆಯೇ ರಾಜ್ಯಪಾಲರ ಬಳಿ ಪ್ರಕರಣ ಇದೆ. ಈಗ ಬಿಜೆಪಿ ಕಾಲದಲ್ಲೇ ಮಾಡಿರೋದನ್ನು ಈಗ ನೀವೇ ಪ್ರಶ್ನೆ ಮಾಡ್ತೀರಿ. ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದರೆ ಅದು ಬಿಜೆಪಿ ಪಾಲಿನ ಕೊನೆಯ ಮೊಳೆಯಾಗಲಿದೆ ಎಂದು ಹೇಳಿದರು.
10-15 ವರ್ಷದಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಲ್ಲು ಹೊಡೆದ ಪ್ರಕರಣ ಇದೇ ಮೊದಲು. ಹಾಗೆಂದು, ಉದ್ದೇಶಪೂರ್ವಕ ಕಲ್ಲು ಬಿಸಾಡಿದ್ದಲ್ಲ. ಇನ್ಸಿಡೆಂಟಲಿ ಆಗಿದೆ, ಅದನ್ನು ನಾವು ಸಪೋರ್ಟ್ ಮಾಡಲ್ಲ. ಹಾಗೆ ಮಾಡಬಾರದಿತ್ತು, ಹಿಂಸೆಯನ್ನು ಕಾಂಗ್ರೆಸ್ ಒಪ್ಪಲ್ಲ. ಹುಡುಗರಿಗೆ ಕರೆಸಿ ಬುದ್ಧಿ ಹೇಳಿದ್ದೇವೆ ಎಂದು ಹೇಳಿದರು.
Padayatra behalf of MLC Ivan dsouza says MG Hedge in Mangalore.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 02:16 pm
HK News Staffer
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm