ಬ್ರೇಕಿಂಗ್ ನ್ಯೂಸ್
08-08-24 11:22 am Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.8: ನಗರದ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್ ಎಂಬವರ ಮನೆಯ ಹಿತ್ತಿಲಿಗೆ ಬೃಹತ್ ಹೆಬ್ಬಾವೊಂದು ಬಂದಿದ್ದು, ಅದನ್ನು ಮಹಿಳೆಯೊಬ್ಬರು ಹಿಡಿದು ಗೋಣಿಗೆ ತುಂಬಿಸುವ ಧೈರ್ಯ ಮಾಡಿದ್ದಾರೆ.
ಬಾಲಕೃಷ್ಣ ನಾಯಕ್ ಅವರಲ್ಲಿ ಈ ಬಗ್ಗೆ ಕೇಳಿದಾಗ, ಮೂರು ವರ್ಷದಲ್ಲಿ ಈ ಬಾರಿ ಮೂರನೇ ಬಾರಿ ಹೆಬ್ಬಾವು ಬಂದಿದೆ. ನಿನ್ನೆ ರಾತ್ರಿ ವೇಳೆ ಮನೆಯ ಹಟ್ಟಿಯ ಕಟ್ಟಿಗೆ ರಾಶಿ ಹಾಕಿರುವಲ್ಲಿ ಹೆಬ್ಬಾವು ಕಾಣಸಿಕ್ಕಿತ್ತು. ಆನಂತರ, ಲಕ್ಷ್ಮೀ ಕಾಮತ್ ಅದರ ಬಾಲ ಹಿಡಿದೆಳೆದು ಅಂಗಳಕ್ಕೆ ತಂದಿದ್ದಾರೆ. ಇಲ್ಲಾಂದ್ರೆ, ಕಟ್ಟಿಗೆ ರಾಶಿಯ ಒಳಗೆ ಹೋಗುತ್ತೆ ಎಂದು ಎಳಕೊಂಡು ಬಂದಿದ್ದರು. ಆನಂತರ, ಹಾವು ಹಿಡಿಯುವ ಆದಿತ್ಯ ಎಂಬವರನ್ನು ಕರೆದಿದ್ದು, ಅವರು ಹಿಡಿದು ಪಚ್ಚನಾಡಿಗೆ ಒಯ್ದು ಬಿಡುತ್ತೇನೆಂದು ಕೊಂಡೊಯ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



ಲಕ್ಷ್ಮೀ ಕಾಮತ್ ಅವರ ಗಂಡ ಹಿಂದೆ ಹೆಬ್ಬಾವು ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಹಾಗಾಗಿ, ಅವರ ಪತ್ನಿಗೂ ಧೈರ್ಯ ಬಂದಿದ್ದು, ನಿನ್ನೆ ನಮ್ಮ ಮನೆಗೆ ಹೆಬ್ಬಾವು ಬಂದಾಗ ಆಕೆಯೇ ಬಾಲವನ್ನು ಹಿಡಿದಿದ್ದಾರೆ. ಹೆಬ್ಬಾವು ವಿಷಕಾರಿಯಲ್ಲ. ಹಾಗಾಗಿ, ಹೆದರಬೇಕಿಲ್ಲ. ಗಲೀಜು ಮಾಡುತ್ತದೆ ಅಂತಷ್ಟೇ ಹಿಡಿಯಲು ಹಿಂಜರಿಕೆ. ಪ್ರತಿ ಬಾರಿ ಹೆಬ್ಬಾವು ಬರುತ್ತಿರುವುದರಿಂದ ಹಾವು ಹಿಡಿಯುವವರಿಗೆ ಒಂದು ಸಾವಿರ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ, ಬಾಲಕೃಷ್ಣ ನಾಯಕ್. ಹೆಬ್ಬಾವು ಹಾರಾಡುತ್ತಿದ್ದರೂ ಮಹಿಳೆಯೊಬ್ಬರು ಬಾಲ ಹಿಡಿದು ಅದನ್ನು ನಿಯಂತ್ರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
Women catches huge snake at donagarakere in Mangalore, videos goes viral.
27-05-26 06:26 pm
HK News Staffer
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 08:34 pm
HK News Staffer
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm