ಬ್ರೇಕಿಂಗ್ ನ್ಯೂಸ್
06-07-24 07:40 pm Mangalore Correspondent ಕರಾವಳಿ
ಮಂಗಳೂರು, ಜುಲೈ.6: ಭಾರೀ ಜನವಿರೋಧ ಕೇಳಿಬಂದು ಪ್ರತಿಭಟನೆ, ಧರಣಿ, ಹೋರಾಟದ ಬಳಿಕ ಅಕ್ರಮವಾಗಿ ನಡೆಸುತ್ತಿದ್ದ ಸುರತ್ಕಲ್ ಟೋಲ್ ಗೇಟನ್ನು 20222ರ ಡಿಸೆಂಬರ್ 1ರಂದು ರದ್ದುಪಡಿಸಲಾಗಿತ್ತು. ಅಂದು ಟೋಲ್ ಗೇಟ್ ರದ್ದಾಗಲು ಕಾರಣವಾಗಿದ್ದು ಜನರು ಪಕ್ಷ ಭೇದ ಇಲ್ಲದೆ ಪ್ರತಿಭಟನೆ ನಡೆಸಿದ್ದು ಅನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಆ ಟೋಲ್ ಗೇಟ್ ರದ್ದಾಗುವಂತೆ ಹೋರಾಟ ನಡೆಸಿದ್ದ ಪ್ರತಿಭಟನಾಕಾರರು ಮಾತ್ರ ಪೊಲೀಸ್ ಕೇಸು ದಾಖಲಾಗಿ ಕೋರ್ಟಿಗೆ ಅಲೆದಾಡುವ ಸ್ಥಿತಿಯಾಗಿದೆ.
2022ರ ಅಕ್ಟೋಬರ್ 18ರಂದು ಪೊಲೀಸರ ಸರ್ಪಗಾವಲು ಭೇದಿಸಿ ಸಾವಿರಾರು ಪ್ರತಿಭಟನಾಕಾರರು ಟೋಲ್ ಗೇಟ್ ನುಗ್ಗಿದ್ದರು. ಟೋಲ್ ಸಂಗ್ರಹಕ್ಕಾಗಿ ಅಡ್ಡ ಇರಿಸಿದ್ದ ಕಂಬಗಳನ್ನು, ಟೋಲ್ ಬೂತ್ ಗಳನ್ನು ಒಡೆದು ಹಾಕಿದ್ದಲ್ಲದೆ, ಅದರ ಮೇಲೇರಿ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ಪೊಲೀಸರನ್ನು ಲೆಕ್ಕಿಸದೆ ಸ್ವತಃ ಟೋಲ್ ಬೂತ್ ಮೇಲೇರಿ ಕಪ್ಪು ಬಾವುಟ ಬೀಸಿದ್ದರು. ಮುನೀರ್ ಕಾಟಿಪಳ್ಳ, ಎಂಜಿ ಹೆಗ್ಡೆ, ಪ್ರತಿಭಾ ಕುಳಾಯಿ ಹೀಗೆ ಹತ್ತಾರು ಮುಖಂಡರ ನೇತೃತ್ವದಲ್ಲಿ ನೂರಾರು ಜನರು ಟೋಲ್ ಗೇಟ್ ವಿರುದ್ಧ ಬೀದಿಗಿಳಿದಿದ್ದರು.



ಅಂದಿನ ಪೊಲೀಸ್ ಕಮಿಷನರ್ ಶಶಿಕುಮಾರ್, 144 ಸೆಕ್ಷನ್ ಜಾರಿಗೊಳಿಸಿದ್ದರೂ ಅದನ್ನು ಲೆಕ್ಕಿಸದೆ ರಸ್ತೆ ತಡೆ ಮಾಡಿದ್ದರು. ಆನಂತರ, ಹೆಚ್ಚುವರಿ ಪೊಲೀಸರು ಬಂದು ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಆರೋಪಗಳನ್ನೊಡ್ಡಿ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಆನಂತರ, ಎರಡು ವಾರ ಕಾಲ ಸುರತ್ಕಲ್ ಟೋಲ್ ಗೇಟ್ ಬಳಿಯಲ್ಲೇ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಧರಣಿಯೂ ನಡೆದಿತ್ತು. ರಸ್ತೆ ತಡೆ ಘಟನೆ ಸಂಬಂಧಿಸಿ ಸುರತ್ಕಲ್ ಪೊಲೀಸರು 101 ಮಂದಿಯ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರು.
ಚಾರ್ಜ್ ಶೀಟ್ ಪ್ರಕಾರ ಮಂಗಳೂರಿನ ಕೋರ್ಟಿನಲ್ಲಿ ವಿಚಾರಣೆ ಆರಂಭಗೊಂಡಿದ್ದು, ಜುಲೈ 6ರಂದು ಕೋರ್ಟಿಗೆ ಹಾಜರಾಗುವಂತೆ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದರಂತೆ, ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಹೆಚ್ಚಿನವರು ಶನಿವಾರ ಕೋರ್ಟಿಗೆ ಹಾಜರಾಗಿದ್ದು ನ್ಯಾಯಾಲಯದಲ್ಲಿ ಪರೇಡ್ ಮಾಡಿದ್ದಾರೆ. ಪ್ರಕರಣದಲ್ಲಿ ಆರೋಪಿಯೂ ಆಗಿರುವ ಹಿರಿಯ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಆರೋಪಿಗಳ ಪರ ಕೋರ್ಟಿನಲ್ಲಿ ವಾದಿಸುತ್ತಿದ್ದಾರೆ. ಮುನೀರ್ ಕಾಟಿಪಳ್ಳ ಪ್ರಕಾರ, ಇಲ್ಲಿ ಕೇಸು ಎದುರಿಸುತ್ತಿರುವ 70 ಮಂದಿಯಷ್ಟು ಜನ ಸಾಮಾನ್ಯ ಜನರಾಗಿದ್ದು, ಅಂದು ಪ್ರತಿಭಟನೆ ಬೆಂಬಲಿಸಿ ಬಂದ ಕಾರಣಕ್ಕೆ ಪೊಲೀಸರು ಕೇಸು ಹಾಕಿದ್ದಾರಂತೆ.
ಈ ಬಗ್ಗೆ ಕೇಸು ನಡೆಸಲು ಡಿವೈಎಫ್ಐ ಸಂಘಟನೆಯಿಂದ ವಕೀಲರ ತಂಡವನ್ನು ಮಾಡಲಾಗಿದೆ. ಈ ಪೈಕಿ ವಕೀಲ ಚರಣ್ ಶೆಟ್ಟಿ ಎಂಬವರಲ್ಲಿ ಕೇಳಿದಾಗ, 93 ಮಂದಿ ಶನಿವಾರ ಕೋರ್ಟಿಗೆ ಹಾಜರಾಗಿದ್ದು ಜಾಮೀನು ಪಡೆದಿದ್ದಾರೆ. ಉಳಿದ ಏಳು ಮಂದಿ ಹಾಜರಾಗುವುದು ಬಾಕಿಯಿದೆ ಎಂದರು. ಸುರತ್ಕಲ್ ಠಾಣೆಯಲ್ಲಿ ಸೆಕ್ಷನ್ 143, 147, 341, 283, 149 ಪ್ರಕಾರ ಕೇಸು ದಾಖಲಾಗಿತ್ತು. ಇದೇ ವೇಳೆ, ಟೋಲ್ ಗೇಟ್ ಹೋರಾಟದ ಕಾರಣಕ್ಕೆ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೂಲಕ ಸರಕಾರಕ್ಕೆ ಮನವಿ ಮಾಡಲಾಗಿದ್ದು ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದೆ.
The Suratkal toll gate, which was being operated illegally, was canceled on December 1, 2022, after protests, dharnas and struggles were heard due to massive public opposition. On that day, the toll gate was canceled due to the people's support regardless of party. Mangalore Charge sheet against 101 people for blocking road against Suratkal toll gate, protestors appeared in the court
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm