ಬ್ರೇಕಿಂಗ್ ನ್ಯೂಸ್
11-06-24 08:41 pm Mangalore Correspondent ಕರಾವಳಿ
ಮಂಗಳೂರು, ಜೂನ್ 11: ಬೋಳಿಯಾರು ಇರಿತ ಘಟನೆಗೆ ಬಿಜೆಪಿ ಕಾರ್ಯಕರ್ತರು ಮಸೀದಿ ಎದುರಲ್ಲಿ ಘೋಷಣೆ ಕೂಗಿದ್ದೇ ಕಾರಣ. ಮುಸ್ಲಿಮರನ್ನು ಉದ್ದೇಶಿಸಿ ನೀವು ಪಾಕಿಸ್ತಾನಿಗಳು, ಮೋದಿ ಎದುರಲ್ಲಿ ನಿಲ್ಲುವುದಕ್ಕೆ ಭಯ ಪಡುತ್ತೀರಿ ಎನ್ನುವ ರೀತಿ ಅರ್ಥ ಬರುವಂತೆ ಪ್ರಚೋದನಕಾರಿ ಘೋಷಣೆ ಹಾಕಿದ್ದಾರೆ. ಭಾರತ್ ಮಾತಾ ಕಿ ಜೈ ಎನ್ನುವುದು ಮಾತ್ರ ಘೋಷಣೆ ಆಗಿರಲಿಲ್ಲ. ವಿಜಯೋತ್ಸವ ಸಂದರ್ಭದಲ್ಲಿ ಮುಸ್ಲಿಮರನ್ನು ಪ್ರಚೋದಿಸುವ ರೀತಿ ಘೋಷಣೆ ಕೂಗಿದ್ದಕ್ಕೆ ನಮ್ಮಲ್ಲಿ ಸಾಕ್ಷಿ ಇದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ಚೂರಿ ಇರಿತ ಘಟನೆಗೆ ಸಂಬಂಧಿಸಿ ಸುದ್ದಿಗೋಷ್ಟಿ ನಡೆಸಿದ ಕಮಿಷನರ್, ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದ್ದೇವೆ. ಇನ್ನೂ ಹಲವರ ಬಂಧನ ಆಗಲಿಕ್ಕಿದೆ, ನಮ್ಮ ಮೂರು ವಿಶೇಷ ತಂಡಗಳು ಈ ಸಂಬಂಧ ಕಾರ್ಯಾಚರಣೆ ನಡೆಸ್ತಾ ಇದೆ ಎಂದರು. ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದಕ್ಕೆ ನೀವು ಕೇಸ್ ಹಾಕಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ಅಷ್ಟೇ ಘೋಷಣೆ ಕೂಗಿದ್ದು ಅಲ್ಲ. ಮುಸ್ಲಿಮರು ಪಾಕಿಸ್ತಾನಿಗಳು ಅನ್ನುವ ರೀತಿ ಪ್ರಚೋದನಕಾರಿ ಘೋಷಣೆ ಹಾಕಿದ್ದಾರೆ. ಮೆರವಣಿಗೆಯಲ್ಲೂ ಹಾಕಿದ್ದಾರೆ. ಆನಂತರ, ಮೂರು ಮಂದಿ ಯುವಕರು ಮಸೀದಿ ಬಳಿಗೆ ಬಂದು ಅಂತಹದ್ದೇ ಘೋಷಣೆ ಹಾಕಿದ್ದಾರೆ. ಇದರ ಬಗ್ಗೆ ಮಸೀದಿ ಕಮಿಟಿ ಅಧ್ಯಕ್ಷರು ನೀಡಿದ ದೂರಿನಂತೆ 153ಎ ಅಡಿ ಕೇಸು ದಾಖಲಿಸಿದ್ದೇವೆ. ಜೊತೆಗೆ, ನಮ್ಮ ಸಿಬಂದಿಯೂ ಅಲ್ಲಿದ್ದರು ಎಂದು ತಿಳಿಸಿದ್ದಾರೆ.
ತಂಡ ಚೂರಿ ಹಿಡಿದುಕೊಂಡು ಬಂದಿತ್ತೇ ಎಂದು ಕೇಳಿದ ಪ್ರಶ್ನೆಗೆ, ಅದರಲ್ಲಿ ಒಬ್ಬಾತ ರೌಡಿ ಶೀಟರ್ ಇದ್ದ. ಆತ ತನ್ನಲ್ಲಿದ್ದ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ನಾವು ಸಿಸಿಟಿವಿ ವಿಡಿಯೋ ಆಧರಿಸಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಏಂಟಿ ಕಮ್ಯುನಲ್ ವಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಏಕ್ಟಿವ್ ಇದೆ, ನಾವು ಈ ಬಾರಿ ಚುನಾವಣೆಗೂ ಮುನ್ನ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದೇವೆ. ಕಮ್ಯುನಲ್ ಹಿಂಸೆಯ ಹಿನ್ನೆಲೆಯಿದ್ದ 300 ಮಂದಿಯ ಮೇಲೆ ಕ್ರಮ ಮಾಡಿದ್ದೇವೆ. 75 ಜನರನ್ನು ಗಡೀಪಾರು ಮಾಡಿದ್ದೇವೆ. ಎಂಟು ಮಂದಿ ಮೇಲೆ ಗೂಂಡಾ ಏಕ್ಟ್ ಜರುಗಿಸಿದ್ದೇವೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ಅಂದರೆ 35 ಶೇಕಡಾ ವರ್ಕೌಟ್ ನಮ್ಮಲ್ಲಿ ಆಗಿದೆ ಎಂದು ಹೇಳಿದರು. ಅಪರಾಧ ಹಿನ್ನೆಲೆಯವರಿಗೆ ನೋಟೀಸ್ ಜಾರಿ ಮಾಡುವುದು, ಠಾಣೆಗೆ ಕರೆಸಿ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
Mangalore Provocative sloganeering triggered communal strife at Boliyar over stabbing two says Police Commissioner Anupam Agarwal. Mangaluru city Police Commissioner Anupam Agrawal on Tuesday said a provocative statement referring to Pakistan by those celebrating the Narendra Modi swearing-in ceremony sparked tension leading to stabbing of two BJP workers at Boliyar near here on Sunday night.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 03:06 pm
Mangaluru Correspondent
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm