ಬ್ರೇಕಿಂಗ್ ನ್ಯೂಸ್
03-06-24 09:37 pm Mangalore Correspondent ಕರಾವಳಿ
ಪುತ್ತೂರು, ಜೂನ್ 3: ಸೋಮವಾರ ಸಂಜೆ ಪುತ್ತೂರು ಪೇಟೆಯಲ್ಲಿ ಮೇಘಸ್ಫೋಟ ಆದ ರೀತಿ ಮಳೆಯಾಗಿದೆ. ಸಂಜೆ 4 ಗಂಟೆಯಿಂದ 45 ನಿಮಿಷ ಕಾಲ ಭಾರೀ ಮಳೆ ಸುರಿದಿದ್ದು ಪುತ್ತೂರು ಪೇಟೆ ಇಡೀ ಮಳೆನೀರಿನಲ್ಲಿ ತೋಯ್ದು ಹೋಗಿದೆ. ಪುತ್ತೂರು ಪೇಟೆಯ ಜನರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ರೀತಿ ಮಳೆ ಆಗಿದ್ಯಂತೆ.
ಒಂದೇ ಸಮನೆ ಧೋ ಎಂದು ಮಳೆ ಸುರಿದಿದ್ದು, ರಸ್ತೆಯಲ್ಲಿ ನೀರು ನದಿಯಂತೆ ತುಂಬಿಕೊಂಡಿದೆ. ದರ್ಭೆಯಲ್ಲಿ ಆಟೋ ರಿಕ್ಷಾಗಳು, ದ್ವಿಚಕ್ರ ವಾಹನಗಳು ಸಾಗಲು ಸಾಧ್ಯವಾಗದೆ ನಿಂತುಬಿಟ್ಟಿದ್ದವು. ಕೋರ್ಟ್ ರೋಡಿನಲ್ಲಿ ತಗ್ಗಿನ ಪ್ರದೇಶದಲ್ಲಿದ್ದ ಜುವೆಲ್ಲರಿ ಅಂಗಡಿಗೆ ನೀರು ನುಗ್ಗಿದ್ದು ಮೊಣಕಾಲು ಮುಳುಗುವಷ್ಟು ಮಳೆ ನೀರು ಶೇಖರಗೊಂಡಿತ್ತು.
ಕೋರ್ಟ್ ರೋಡ್, ಮಹಾಲಿಂಗೇಶ್ವರ ದೇವಸ್ಥಾನ ಆಸುಪಾಸಿನಲ್ಲಿ ತಗ್ಗಿನ ಜಾಗದ ಹಲವಾರು ಅಂಗಡಿಗಳಿಗೆ ನೀರು ನುಗ್ಗಿದೆ. ದೇವಸ್ಥಾನ ಪರಿಸರದಲ್ಲಿ ಜನರ ಸಂಚಾರಕ್ಕೆ ತೊಡಕಾಗಿದೆ. ಆದರೆ ಅರ್ಧ ಗಂಟೆಯ ಮಳೆಯ ಬಳಿಕ ಮಳೆಯೇ ಬಂದಿಲ್ಲವೇನೋ ಎನ್ನುವಂತೆ ಹಠಾತ್ ನಿಂತುಬಿಟ್ಟಿದೆ. ಪುತ್ತೂರು ಆಸುಪಾಸಿನಲ್ಲಿ ಅಷ್ಟು ಮಳೆಯಾಗಿಲ್ಲ. ಒಂದೇ ಕಡೆ ಮಳೆಯಾಗಿರುವುದು ಭಾರೀ ವಿಶೇಷ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ಹೊತ್ತಿಗೆ ಕಪ್ಪಗಿನ ಮೋಡ ಆವರಿಸಿದ್ದರಿಂದ ಭಾರೀ ಮಳೆಯಾಗುತ್ತೆ ಅನ್ನುವ ಸುಳಿವು ನೀಡಿತ್ತು. ಆದರೆ ಮಂಗಳೂರಿನಲ್ಲಿ ಹನಿ ಹನಿ ಸುರಿದಿದ್ದು ನೆಲ ಒದ್ದೆಯಾಗುವಷ್ಟು ಮಾತ್ರ ಮಳೆಯಾಗಿದೆ.
Heavy rains in Puttur causes havoc, water enters shops, most of the shops were filled with shops causing huge damage to many business people.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 07:33 pm
HK News Desk
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
14-05-25 06:33 pm
Mangalore Correspondent
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm