ಬ್ರೇಕಿಂಗ್ ನ್ಯೂಸ್
11-05-24 01:33 pm Udupi Correspondent ಕರಾವಳಿ
ಉಡುಪಿ, ಮೇ.10: ಟೂರಿಸ್ಟ್ ಕಾರಿನಲ್ಲಿ ಶವವನ್ನು ಕಟ್ಟಿ ಡಿಕ್ಕಿಯಲ್ಲಿ ಇಟ್ಟು ಒಯ್ಯುತ್ತಿದ್ದಾಗ ಬೈಂದೂರಿನ ಶಿರೂರ್ ಟೋಲ್ ಗೇಟ್ ಬಳಿ ಆಂಬುಲೆನ್ಸ್ ಚಾಲಕನೊಬ್ಬ ಅಡ್ಡಗಟ್ಟಿ ಟೂರಿಸ್ಟ್ ಕಾರು ಚಾಲಕನನ್ನು ದಬಾಯಿಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ ಮೂಲದ ಕುಟುಂಬ ಉಡುಪಿಯ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವ ಒಯ್ಯುವುದಕ್ಕೆ ಆಂಬುಲೆನ್ಸ್ ಬಳಿ ಮಾತನಾಡಿದಾಗ 12 ಸಾವಿರ ಆಗುತ್ತೆ ಎಂದಿದ್ದಕ್ಕೆ ಸಂಬಂಧಿಕ ವ್ಯಕ್ತಿಯ ಟೂರಿಸ್ಟ್ ಕಾರಿನಲ್ಲಿ ಶವವನ್ನು ಇಟ್ಟು ಊರಿನತ್ತ ಒಯ್ದಿದ್ದಾರೆ.



ಈ ವಿಚಾರ ತಿಳಿದ ಆಂಬುಲೆನ್ಸ್ ಚಾಲಕ ಶಿರೂರು ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದು, ಟೂರಿಸ್ಟ್ ಕಾರು ಇರೋದು ಶವ ಒಯ್ಯುವುದಕ್ಕಾ.. ಆಂಬುಲೆನ್ಸಲ್ಲಿ ನಾವು ಪ್ರಯಾಣಿಕರನ್ನು ಒಯ್ಯಬೇಕಾ.. ಟೂರಿಸ್ಟ್ ಮಾಡಬೇಕಾ.. ನಿನಗೆ ಟೂರಿಸ್ಟ್ ಕಾರಿನಲ್ಲಿ ಶವ ಒಯ್ಯಲು ಪರ್ಮಿಶನ್ ಕೊಟ್ಟೋರು ಯಾರು ಅಂತ ತೀವ್ರ ಪ್ರಶ್ನೆ ಮಾಡಿದ್ದಾನೆ. ನಾವು ಬಡವರು, ನಮ್ಮ ಅಕ್ಕಂದಿರೇ ಕಾರಿನಲ್ಲಿದ್ದಾರೆ. ನಮ್ಮ ಹತ್ತಿರದ ಸಂಬಂಧಿ ವ್ಯಕ್ತಿ ತೀರಿಕೊಂಡಿದ್ದರು. ಆಂಬುಲೆನ್ಸ್ ನಲ್ಲಿ ವಿಪರೀತ ಬಾಡಿಗೆ ಹೇಳಿದ್ದರಿಂದ ಟೂರಿಸ್ಟ್ ಕಾರಿನಲ್ಲಿ ಒಯ್ದಿದ್ದೇವೆ. ತಪ್ಪು ಅಂತ ಗೊತ್ತಿದೆ, ನಾವು ಬಡವರು ಬಿಟ್ಟು ಬಿಡಿ ಎಂದರೂ ಆಂಬುಲೆನ್ಸ್ ಚಾಲಕ ಬಿಡದೆ ಕಾಡಿದ್ದಾನೆ.
ಯೆಲ್ಲೋ ಬೋರ್ಡ್ ಹಾಕಿರುವ ನಿನ್ನದು ಟೂರಿಸ್ಟ್ ಟ್ಯಾಕ್ಸಿ. ನೀನು ಪ್ರಯಾಣಿಕರನ್ನು, ಟೂರಿಸ್ಟ್ ಗಳನ್ನು ಒಯ್ಯಬೇಕೇ ವಿನಾ ಶವಗಳನ್ನಲ್ಲ. ಶವ ಒಯ್ಯುವುದಕ್ಕಾಗಿಯೇ ಆಂಬುಲೆನ್ಸ್ ಇರೋದು. ನಿನ್ನ ಕಾರನ್ನು ನಾನು ಸೀಜ್ ಮಾಡಿಸಲಾ ಎಂದು ಆವಾಜ್ ಹಾಕುತ್ತಾನೆ. ಉಡುಪಿ ಜಿಲ್ಲೆಯ ಗಡಿಭಾಗ ಶಿರೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
Udupi Dead body carried in taxi car, ambulance driver stops car argues, video goes viral.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm