Accident in Mangalore, Naguri: ಹಾಡಹಗಲೇ ಟಿಪ್ಪರ್ ಲಾರಿ ಹಿಟ್ ಅಂಡ್ ರನ್ ; ಹರೆಯದ ಹುಡುಗ ಸ್ಥಳದಲ್ಲೇ ಸಾವು, ಕಂತ್ರಿ ಟಿಪ್ಪರ್ ಲಾರಿಯ ಬಗ್ಗೆ ಪೊಲೀಸರ ನಿರ್ಲಕ್ಷ್ಯ

09-05-24 11:06 pm       Mangalore Correspondent   ಕರಾವಳಿ

ಟಿಪ್ಪರ್ ಲಾರಿಯೊಂದು ಹಿಟ್ ಅಂಡ್ ರನ್ ಮಾಡಿದ್ದು, ಸ್ಕೂಟರಿಗೆ ಡಿಕ್ಕಿಯಾಗಿ ಅದರಲ್ಲಿದ್ದ ಪಿಯುಸಿ ಓದುತ್ತಿದ್ದ ಹುಡುಗನ ಮೇಲೆ ಹರಿದ ಘಟನೆ ನಗರದ ನಾಗುರಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಮಂಗಳೂರು, ಮೇ 9: ಟಿಪ್ಪರ್ ಲಾರಿಯೊಂದು ಹಿಟ್ ಅಂಡ್ ರನ್ ಮಾಡಿದ್ದು, ಸ್ಕೂಟರಿಗೆ ಡಿಕ್ಕಿಯಾಗಿ ಅದರಲ್ಲಿದ್ದ ಪಿಯುಸಿ ಓದುತ್ತಿದ್ದ ಹುಡುಗನ ಮೇಲೆ ಹರಿದ ಘಟನೆ ನಗರದ ನಾಗುರಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಎಕ್ಕೂರು ನಿವಾಸಿ ಹರ್ಷಣ್ (18) ಮೃತ ಯುವಕ. ಸ್ಕೂಟರಿನಲ್ಲಿ ಈ ಹುಡುಗ ಮತ್ತು ಇನ್ನೊಬ್ಬರು ಪಡೀಲಿನಿಂದ ಪಂಪ್ವೆಲ್ ಕಡೆಗೆ ಬರುತ್ತಿದ್ದಾಗ ಟಿಪ್ಪರ್ ಲಾರಿ ಹೊಡೆದುಕೊಂಡು ಹೋಗಿದೆ ಎನ್ನುವುದು ಪೊಲೀಸರ ಮಾಹಿತಿ. ಆದರೆ ಟಿಪ್ಪರ್ ಯಾವ ಕಡೆಯಿಂದ ಬರುತ್ತಿತ್ತು. ಯಾವ ಕಡೆಗೆ ಪರಾರಿಯಾಗಿದೆ ಎನ್ನುವ ಮಾಹಿತಿ ಪೊಲೀಸರಿಗೆ ತಿಳಿದಿಲ್ಲ ಅನ್ನುತ್ತಾರೆ.

ಸಂಜೆ ಐದು ಗಂಟೆಗೆ ಘಟನೆ ನಡೆದಿದ್ದು, ಕಂಕನಾಡಿ ಸಂಚಾರಿ ಠಾಣೆಯ ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇನ್ಸ್ ಪೆಕ್ಟರ್ ಅವರಲ್ಲಿ ಕೇಳಿದರೆ, ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ. ಸ್ಥಳದಲ್ಲಿ ಸಿಸಿಟಿವಿ ಇರಲಿಲ್ಲ, ಹಿಟ್ ಅಂಡ್ ರನ್ ಕೇಸ್ ಮಾಡಿದ್ದೇವೆ ಎನ್ನುತ್ತಾರೆ. ಸಂಜೆಯ ಹೊತ್ತಿಗೆ ಘಟನೆ ನಡೆದಿದ್ದು, ಸ್ಥಳದಲ್ಲಿದ್ದವರು ಟಿಪ್ಪರ್ ಲಾರಿಯನ್ನು ನೋಡಿಯೇ ಇರುತ್ತಾರೆ. ಟಿಪ್ಪರ್ ಲಾರಿ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದರೂ ಸಾರ್ವಜನಿಕರು ಸಾಮಾನ್ಯವಾಗಿ ಅಡ್ಡಗಟ್ಟಿ ಚಾಲಕನಿಗೆ ತಿವಿಯುವ ಕೆಲಸ ಮಾಡುತ್ತಿದ್ದರು. ಆದರೆ ಸ್ಥಳದಲ್ಲಿದ್ದವರು ಯಾಕೆ ನಿರ್ಲಕ್ಷ್ಯ ವಹಿಸಿದರು, ಪೊಲೀಸರು ಯಾಕೆ ಟಿಪ್ಪರ್ ಲಾರಿಯ ರಕ್ಷಣೆಗೆ ನಿಂತಿದ್ದಾರೆ ಅನ್ನುವುದು ತಿಳಿಯುತ್ತಿಲ್ಲ.

Accident in Mangalore, Hit and run, 18 year old killed on spot at Naguri after truck rams his two wheeler. Police have no much information about the truck.