ಬ್ರೇಕಿಂಗ್ ನ್ಯೂಸ್
26-04-24 08:09 am Mangalore Correspondent ಕರಾವಳಿ
ಮಂಗಳೂರು, ಎ.26: ಲೋಕಸಭೆ ಚುನಾವಣೆಗೆ ಮಂಗಳೂರಿನಲ್ಲಿ ಮತದಾರರು ಬೆಳಗ್ಗಿನಿಂದಲೇ ಉತ್ಸಾಹದಿಂದಲೇ ಪಾಲ್ಗೊಂಡಿದ್ದಾರೆ. ನಗರದ ಕಪಿತಾನಿಯೋ ಸ್ಕೂಲ್ ಮತಗಟ್ಟೆಯಲ್ಲಿ ಬೆಳಗ್ಗೆ ಏಳು ಗಂಟೆಗೆ ಮತದಾನ ಶುರುವಾಗುವ ಮೊದಲೇ ಭಾರೀ ರಶ್ ಇತ್ತು.
ಸರತಿ ಸಾಲಿನಲ್ಲಿ ಮತದಾರರು ನಿಂತಿದ್ದು ಮತಗಟ್ಟೆ ಒಳ ಹೋಗಲು ಕಾಯುತ್ತಿದ್ದಾರೆ. ಬಿಸಿಲೇರುವ ಮೊದಲೇ ಮತ ಚಲಾಯಿಸಿ ಬರಬೇಕು ಎನ್ನುವ ಧಾವಂತದಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸಿದ್ದಾರೆ.
ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ಬಂದಿದ್ದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತಗಟ್ಟೆಯತ್ತ ಬರುವಾಗಲೇ ಹಿರಿಯ ನಾಗರಿಕರೊಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಭಾರೀ ಜನ ಇರುವುದರಿಂದ ಪದ್ಮರಾಜ್ ದಂಪತಿ ಎಪಿಕ್ ಕಾರ್ಡ್ ಹಿಡಿದು ಮತ ಸರತಿ ಸಾಲಿನಲ್ಲಿ ನಿಂತಿದ್ದಾರೆ.













ಮತಗಟ್ಟೆಯ ಹೊರಭಾಗದಲ್ಲಿ 30 ಮೀಟರ್ ಉದ್ದಕ್ಕೂ ಜನರು ಸರತಿಯಲ್ಲಿ ನಿಂತಿದ್ದಾರೆ. ಬಿಸಿಲು ಏರಿದರೆ ಶಾಲೆಯ ಅಂಗಳದಲ್ಲಿ ಕ್ಯೂ ನಿಲ್ಲುವುದು ಕಷ್ಟವಾಗಬಹುದು. ಬೆಳಗ್ಗೆ ಬೇಗ ಬಂದು ಮತ ಚಲಾಯಿಸಲು ಜನರು ಕಾತರರಾಗಿದ್ದಾರೆ. ಮಂಗಳೂರು ನಗರದ ಎಲ್ಲ ಕಡೆಯೂ ಜನರು ಇದೇ ರೀತಿ ಮತದಾನಕ್ಕೆ ಉತ್ಸಾಹ ತೋರಿದ್ದಾರೆ. ಹೊಸ ಮತದಾರರು ಕೂಡ ಬೇಗನೇ ಬಂದು ಮತ ಹಾಕುತ್ತಿದ್ದಾರೆ.
ಹೊಸ ಮತದಾರರು ಮೊದಲ ಬಾರಿಗೆ ಓಟ್ ಹಾಕಿದ ಖುಷಿಯಲ್ಲಿದ್ದಾರೆ. ದೇಶಕ್ಕಾಗಿ ಓಟ್ ಹಾಕಿದ್ದೇನೆಂಬ ಧನ್ಯತೆಯ ಭಾವನೆ ಇದೆ. ಓಟ್ ಹಾಕುವಾಗ ಹೆಮ್ಮೆಯ ಭಾವನೆ ಬಂತು. ದೇಶದ ಭವಿಷ್ಯ ನಿರ್ಣಯದಲ್ಲಿ ತನ್ನದೂ ಪಾತ್ರ ಇದೆಯೆಂಬ ಭಾವನೆ ಇದೆ ಎಂದು ಮೊದಲ ಬಾರಿಗೆ ಓಟ್ ಹಾಕಿದ ವಿದ್ಯಾರ್ಥಿನಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
Mangalore loksabha elections 2024, people gather in large number to cast vote early morning at Capitanio High School near Pumpwell. Congress candidate Padmaraj and his family came to cast their votes.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm