Vitla, Mangalore News: ವಿಟ್ಲ ; ಬಾವಿಗೆ ರಿಂಗ್ ಹಾಕಲು ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಕಟ್ಟಿ ಸಾವು 

23-04-24 10:55 pm       Mangalore Correspondent   ಕರಾವಳಿ

ಬಾವಿಯೊಂದಕ್ಕೆ ರಿಂಗ್ ಹಾಕಿದ ಬಳಿದ ಕ್ಲೀನಿಂಗ್ ಮಾಡಲು ಇಳಿದಿದ್ದ ಇಬ್ಬರು ಕಾರ್ಮಿಕರು ಆಕ್ಸಿಜನ್ ಸಾಕಾಗದೇ ಸಾವನಪ್ಪಿದ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ. 

ಬಂಟ್ವಾಳ, ಎ.23: ಬಾವಿಯೊಂದಕ್ಕೆ ರಿಂಗ್ ಹಾಕಿದ ಬಳಿದ ಕ್ಲೀನಿಂಗ್ ಮಾಡಲು ಇಳಿದಿದ್ದ ಇಬ್ಬರು ಕಾರ್ಮಿಕರು ಆಕ್ಸಿಜನ್ ಸಾಕಾಗದೇ ಸಾವನಪ್ಪಿದ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ. 

ಮೃತರನ್ನು ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್‌ ನಿವಾಸಿ ಅಲಿ(24) ಎಂದು ಗುರುತಿಸಲಾಗಿದೆ. ಇಬ್ರಾಹಿಂ ಅವರು ಕಳೆದ 20 ವರ್ಷಗಳಿಂದ ಬಾವಿಗಳಿಗೆ ರಿಂಗ್ ಹಾಕುವ ಕೆಲಸ ನಿರ್ವಹಿಸುತ್ತಿದ್ದರು. ಸುಮಾರು 30 ಅಡಿ ಆಳದ ಬಾವಿಗೆ ರಿಂಗ್‌ ಹಾಕಿ ನಂತರ ಕ್ಲೀನಿಂಗ್‌ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಮೇಲೆ ಬರದೆ ಇದ್ದಾಗ ಮತ್ತೊಬ್ಬರು ನೋಡಲು ತೆರಳಿದ್ದಾರೆ. ಈ ವೇಳೆ ಇಬ್ಬರಿಗೂ ಉಸಿರಾಡಲು ಆಮ್ಲಜನಕ ಸಿಗದೆ ಸಾವನಪ್ಪಿದ್ದಾರೆ. ಸ್ಥಳೀಯರ ಸಹಾಯದಿಂದ ಮುರಳೀಧರ ಎಂಬವರು ಎರಡು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.

Two workers cleaning well die of suffocation in vitla Mangalore. In an unfortunate incident two brothers who got down into a well have died of suffocation. K M Ibrahim (38), resident of Vitta Padnoor is into contracts of fixing well rings and masonry.