Mangalore Heart Attack, Kolya: ಕೊಲ್ಯ ಮಲಯಾಳ ಕೋಡಿ ವಲಸರಿ ಜಾತ್ರೆ ನೋಡಿ ಮಲಗಿದ್ದ ನವ ವಿವಾಹಿತ ಹೃದಯಾಘಾತಕ್ಕೆ ಬಲಿ ; ನಿನ್ನೆ ಪತ್ನಿಯ ಬರ್ತ್ ಡೇ ಆಚರಿಸಿದ್ದ ಯುವಕ 

23-04-24 02:18 pm       Mangalore Correspondent   ಕರಾವಳಿ

ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆ ನೋಡಿ ಮಲಗಿದ್ದ ನವ ವಿವಾಹಿತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ.

ಉಳ್ಳಾಲ, ಎ.23: ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆ ನೋಡಿ ಮಲಗಿದ್ದ ನವ ವಿವಾಹಿತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ. 

ಕೊಲ್ಯ ಕನೀರುತೋಟ ನಿವಾಸಿ ಜಿತೇಶ್ (28)ಯಾನೆ ಜೀತು ಸಾವನ್ನಪ್ಪಿದ ಯುವಕ. ಜಿತೇಶ್ ಅವರು ನಿನ್ನೆ ಅತ್ತೆ ಮನೆಯಲ್ಲಿ ಪತ್ನಿಯ ಹುಟ್ಟು ದಿನವನ್ನ ಆಚರಿಸಿದ್ದರು. ರಾತ್ರಿ ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆ ನೋಡಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದ ಜಿತೇಶ್ ಇಂದು ಬೆಳಗ್ಗೆ ಎದ್ದಿಲ್ಲ. ಮನೆಮಂದಿ ಪರಿಶೀಲಿಸಿದಾಗ ಜಿತೇಶ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಬೈಕ್ ಶೋರೂಮಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ಪ್ರೇಮಿಸಿ ವಿವಾಹವಾಗಿದ್ದರು. ಮೃತ ಜಿತೇಶ್ ತಂದೆ, ತಾಯಿ, ಪತ್ನಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

28 year old youth dies of Heart attack at Kolya in Mangalore. The deceased is identified as Jeetesh (28), a local resident. After finishing the birthday celebration of his wife and having dinner as usual, Jeetesh went to bed on Monday night. However, he did not wake up until late on Tuesday. When family members checked, they found Jeetesh in a dead condition.