ಬ್ರೇಕಿಂಗ್ ನ್ಯೂಸ್
01-12-20 05:16 pm Mangalore Correspondent ಕರಾವಳಿ
ಮಂಗಳೂರು, ಡಿ.1: ಆಯುಷ್ ಇಲಾಖೆಯ ‘ಸೃಷ್ಟಿ ಕ್ರಿಯೆ’ಯ ಯೋಜನೆ ಫಲ ನೀಡಿದೆ. ಮದುವೆಯಾಗಿ 9 ವರ್ಷಗಳಾದರೂ ಮಕ್ಕಳಾಗದೆ ಬೇಸತ್ತಿದ್ದ ಮಹಿಳೆ ಗರ್ಭಿಣಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.
ಹಾಸನ ಜಿಲ್ಲೆಯ ತರೀಕೆರೆ ಮೂಲದ ರಮೇಶ್ – ಶಶಿಕಲಾ ದಂಪತಿಗೆ ಮದುವೆಯಾಗಿ 9 ವರ್ಷಗಳಾದರೂ ಮಗು ಆಗಿರಲಿಲ್ಲ. ಅಲೋಪತಿ ಮತ್ತು ಆಯುರ್ವೇದ ಪ್ರಕಾರ ಹಲವೆಡೆ ಔಷಧಿಯನ್ನೂ ಮಾಡಿದ್ದರು. ಕಳೆದ ಬಾರಿಯ 2019ರ ಡಿಸೆಂಬರ್ ತಿಂಗಳಲ್ಲಿ ದಂಪತಿ ಆಯುಷ್ ಇಲಾಖೆಯಡಿ ಆರಂಭಗೊಂಡ ಸೃಷ್ಟಿ ಯೋಜನೆಯ ವಿಚಾರ ತಿಳಿದು ಪರೀಕ್ಷೆಗೆ ಬಂದಿದ್ದರು. ಅದರಂತೆ, ದಂಪತಿ ಅಲೋಪತಿ ಮತ್ತು ಆಯುರ್ವೇದ ಔಷಧ ನಿಲ್ಲಿಸಿ, ಹೋಮಿಯೋಪತಿ ಔಷಧಿ ಆರಂಭಿಸಿದ್ದರು.
ಎರಡೇ ತಿಂಗಳಲ್ಲಿ ಶಶಿಕಲಾ ಸಹಜ ಎನ್ನುವಂತೆ ಗರ್ಭ ಧರಿಸಿದ್ದರು. ಫೆಬ್ರವರಿಯಲ್ಲಿ ಗರ್ಭಿಣಿಯಾಗಿದ್ದ ಮಹಿಳೆ ಇದೀಗ ನವೆಂಬರ್ 28ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಮಗು 3.3 ಕೆಜಿ ಭಾರ ಹೊಂದಿದ್ದು ಆರೋಗ್ಯವಾಗಿದೆ ಎಂದು ಚಿಕಿತ್ಸೆ ನೀಡಿರುವ ಯೇನಪೋಯ ಆಸ್ಪತ್ರೆಯ ಹೋಮಿಯೋಪತಿ ವಿಭಾಗದ ವೈದ್ಯ ಡಾ.ಕಿರಣ್ ಶಶಿಕಾಂತ್ ಹೇಳಿದ್ದಾರೆ. ಆಯುಷ್ ಸಂಯೋಜನೆಯಡಿ ಆರಂಭಗೊಂಡ ಸೃಷ್ಟಿ ಯೋಜನೆಯಲ್ಲಿ ಮಗುವಾಗಿದ್ದು ರಾಜ್ಯದಲ್ಲಿ ಇದೇ ಮೊದಲು.

ಜಿಲ್ಲಾ ಆಯುಷ್ ಇಲಾಖೆಯಡಿ ಯೇನಪೋಯ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಸೃಷ್ಟಿ ಯೋಜನೆ ಆರಂಭಿಸಲಾಗಿತ್ತು. ಮಕ್ಕಳಾಗದವರಿಗೆ ನವೀನ ತೆರನಾದ ಚಿಕಿತ್ಸೆ ನೀಡುವ ಮೂಲಕ ಗರ್ಭಿಣಿಯಾಗಿಸುವ ಯೋಜನೆಗೆ 2019ರ ಆಗಸ್ಟ್ 29ರಂದು ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯ್ಕ್ ಚಾಲನೆ ನೀಡಿದ್ದರು.
ಸೃಷ್ಟಿ ಹೋಮಿಯೋಪತಿಕ್ ಫರ್ಟಿಲಿಟಿ ಕೇರ್ ಸೆಂಟರ್ ಎನ್ನುವ ವಿಭಾಗವನ್ನು ಆಯುಷ್ ಇಲಾಖೆಯಡಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭಿಸಲಾಗಿದ್ದು 42 ಮಂದಿ ಮಕ್ಕಳಾಗದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಾಗದೆ ನೋವು ಅನುಭವಿಸುವ ದಂಪತಿಗೆ ಇದೊಂದು ಆಶಾಕಿರಣ ಎಂದು ಆಯುಷ್ ವೈದ್ಯ ಡಾ.ಮೊಹಮ್ಮದ್ ಇಕ್ಬಾಲ್ ತಿಳಿಸಿದ್ದಾರೆ.
An experiment undertaken under ambitious 'Srishti' scheme introduced by the Ayush department of Dakshina Kannada district to help childless couples to have children, has borne fruits perhaps for the first time in the state. A baby has been born out of homeopathy fertility treatment.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm