ಬ್ರೇಕಿಂಗ್ ನ್ಯೂಸ್
14-04-24 01:20 pm Mangaluru Correspondent ಕರಾವಳಿ
ಮಂಗಳೂರು, ಎ.14: ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಗೆ ಭರದ ಸಿದ್ದತೆ ನಡೆದಿದೆ. ಕಡಲ ತಡಿಯ ಮಂಗಳೂರಿಗೆ ಭೇಟಿ ನರೇಂದ್ರ ಮೋದಿ ಹತ್ತನೇ ಬಾರಿ ಭೇಟಿ ನೀಡಲಿದ್ದಾರೆ.
ನಗರದ ಲೇಡಿಹಿಲ್ ಬಳಿಯ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದ ವರೆಗೆ ಸುಮಾರು ಎರಡು ಕಿಮೀ ಉದ್ದಕ್ಕೆ ರೋಡ್ ಶೋ ನಡೆಯಲಿದೆ. ಇದಕ್ಕಾಗಿ ಭಾರೀ ಭದ್ರತೆ ಕೈಗೊಳ್ಳಲಾಗಿದ್ದು ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರೋಡ್ ಶೋ ನಡೆಯುವ ರಸ್ತೆಯಲ್ಲಿ ಎಸ್ ಪಿ ಜಿ ಅಧಿಕಾರಿಗಳು ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದು ಆಯಕಟ್ಟಿನ ಜಾಗಗಳಲ್ಲಿ ತಮ್ಮದೇ ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಿದ್ದಾರೆ.
ಸಂಜೆ 7:45 ರಿಂದ ಮೊದಲ್ಗೊಂಡು ರಾತ್ರಿ 8:45 ರ ವರೆಗೆ ಒಂದು ಗಂಟೆ ಭರ್ಜರಿ ರೋಡ್ ಶೋ ನಡೆಯಲಿದೆ. ಭದ್ರತೆಗಾಗಿ 2000 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಐದು ಮಂದಿ ಎಸ್ಪಿ ದರ್ಜೆಯ ಅಧಿಕಾರಿಗಳು ಒಟ್ಟು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಮೋದಿ ಬಂದು ಹೋಗುವ ರೀತಿಯಲ್ಲೇ ಪೊಲೀಸ್ ಅಧಿಕಾರಿಗಳು ರಿಹರ್ಸಲ್ ಮಾಡಿದ್ದಾರೆ.
ರೋಡ್ ಶೋ ಸಂದರ್ಭದಲ್ಲಿ ಮೋದಿಯವರತ್ತ ಎಸೆಯಲು ಹತ್ತು ಕ್ವಿಂಟಾಲ್ ಹಳದಿ ಸೇವಂತಿ ಹೂವನ್ನು ಸಂಗ್ರಹಿಸಿದ್ದು ಅದರ ಎಸಲುಗಳನ್ನು ಪ್ರತ್ಯೇಕಿಸಿ ಎಸ್ ಪಿಜಿ ಪರಿಶೀಲನೆ ಬಳಿಕ ಸ್ಥಳಕ್ಕೆ ತರಲಾಗುವುದು. ರೋಡ್ ಶೋ ಸಾಗುವ ರಸ್ತೆಯ ಬಹುಮಹಡಿ ಕಟ್ಟಡಗಳ ಮೇಲೆ ಸ್ಕೈ ಸೆಂಟ್ರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. ಮೋದಿ ರೋಡ್ ಶೋ ನಡೆಸುವ ವಿಶೇಷ ಮಾದರಿಯ ವಾಹನವನ್ನು ಮಂಗಳೂರಿಗೆ ತರಲಾಗಿದ್ದು ಅದರಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಉಡುಪಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಹಾಲಿ ಸಂಸದ ನಳಿನ್ ಕುಮಾರ್ ಪಾಲ್ಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಜಿಲ್ಲಾ ಬಿಜೆಪಿ ವತಿಯಿಂದ ದೆಹಲಿ ಎಸ್ ಪಿಜಿ ಮತ್ತು ಪಕ್ಷದ ಕೇಂದ್ರ ಸಮಿತಿಗೆ ಅಹವಾಲು ಸಲ್ಲಿಸಿದ್ದು ರೋಡ್ ಶೋ ವಾಹನದಲ್ಲಿ ಯಾರೆಲ್ಲ ಇರಬೇಕು ಎಂಬ ಬಗ್ಗೆ ಎಸ್ ಪಿಜಿಯವರೇ ಸೂಚನೆ ನೀಡಲಿದ್ದಾರೆ.
Modi roadshow in Mangalore, city turns saffron, police tights security all over. A tempo vehicle, similar to the one used during Modi's roadshow in Chennai, has been brought to Mangaluru. A letter requesting permission for candidates Capt Brijesh Chowta, Kota Srinivas Poojary, and MP Nalin Kumar Kateel to accompany PM Modi during the roadshow has been submitted to SPG.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm