ಬ್ರೇಕಿಂಗ್ ನ್ಯೂಸ್
12-04-24 10:35 pm Mangaluru Correspondent ಕರಾವಳಿ
ಮಂಗಳೂರು, ಎ.12: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪೊಳಲಿ ರಾಜರಾಜೇಶ್ವರಿ ದೇವಿಯ ಅಭಯ ಸಿಕ್ಕಿದೆ. ಇದಕ್ಕೆ ಸಾಕ್ಷಿಯೆಂಬಂತೆ, ದೇವರ ಗರ್ಭಗುಡಿಯ ಮುಂದೆ ಪ್ರಾರ್ಥನೆ ನೆರವೇರಿಸುತ್ತಿದ್ದಾಗ ಅಕಸ್ಮಾತ್ ಮೇಲಿನಿಂದ ಹೂವೊಂದು ಬ್ರಿಜೇಶ್ ಚೌಟ ಹಿಡಿದುಕೊಂಡಿದ್ದ ಪ್ರಸಾದದ ತಟ್ಟೆಗೆ ಬಿದ್ದಿರುವ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ.
ಪೊಳಲಿ ದೇವಸ್ಥಾನದಲ್ಲಿ ತಿಂಗಳ ಪರ್ಯಂತ ನಡೆದ ವಾರ್ಷಿಕ ಉತ್ಸವದ ಕೊನೆಯಲ್ಲಿ ರಥೋತ್ಸವ ನಡೆಯುತ್ತದೆ. ಎಪ್ರಿಲ್ 11ರಂದು ರಥೋತ್ಸವ ನಡೆಯುವುದಕ್ಕೂ ಮುನ್ನ ಬ್ರಿಜೇಶ್ ಚೌಟ ದೇವಿಯ ಸನ್ನಿಧಿಗೆ ತೆರಳಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜೊತೆಗೆ ನಿಂತು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ, ಅರ್ಚಕರು ಹೂವಿನ ಪೂಜೆಗೆ ಪ್ರತಿಯಾಗಿ ಪ್ರಸಾದವನ್ನು ತಟ್ಟೆಯಲ್ಲಿ ಹಾಕಿ ಕೊಟ್ಟಿದ್ದಾರೆ.
ಪ್ರಸಾದ ಪಡೆದು ಹಣೆಗೆ ತಿಲಕವಿಡುತ್ತಲೇ ಮೇಲಿನಿಂದ ಹೂವೊಂದು ಚೌಟರು ಕೈಯಲ್ಲಿ ಹಿಡಿದುಕೊಂಡಿದ್ದ ತಟ್ಟೆಗೆ ಬಂದು ಬಿದ್ದಿದ್ದು ಅಚ್ಚರಿ ಎನ್ನುವಂತೆ ರಾಜೇಶ್ ನಾಯ್ಕ್ ಮತ್ತು ಬ್ರಿಜೇಶ್ ಚೌಟ ಮೇಲೆ ನೋಡಿದ್ದಾರೆ. ಗರ್ಭಗುಡಿಯ ಮುಂದೆ ಮೇಲ್ಭಾಗದಲ್ಲಿ ಅಲಂಕಾರಕ್ಕೆ ಇಡಲಾಗಿದ್ದ ಹೂವು ಅಕಸ್ಮಾತ್ ಪ್ರಸಾದ ತಟ್ಟೆಗೆ ಬಿದ್ದಿರುವುದು ಅಲ್ಲಿ ವಿಡಿಯೋ ಮಾಡುತ್ತಿದ್ದಾಗ ಸೆರೆಯಾಗಿದೆ. ಆಮೂಲಕ ಪೊಳಲಿ ದೇವಿಯ ಅಭಯವೇ ಬ್ರಿಜೇಶ್ ಚೌಟರಿಗೆ ಸಿಕ್ಕಂತಾಗಿದೆ ಎನ್ನುವ ರೀತಿ ಅಭಿಮಾನಿಗಳು ವಿಡಿಯೋ ಷೇರ್ ಮಾಡುತ್ತಿದ್ದಾರೆ.
ಎರಡು ದಿನಗಳಲ್ಲಿ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಸುರಥ ರಾಜನ ಭಕ್ತಿಗೆ ರಾಜ್ಯವನ್ನೇ ಕರುಣಿಸಿದ ಪೊಳಲಿ ಜಗನ್ಮಾತೆಯ ಅನುಗ್ರಹ ದೇಶ ಕಾಯೋ ಯೋಧನಿಗೆ ಸಿಕ್ಕಿದ ಘಳಿಗೆ, ವಿಜಯೀಭವ ಎಂದು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮೊದಲ ಬಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದರು.
BJP #Brijeshchowta #Polali temple visit video goes viral in #Mangalore @CaptBrijesh pic.twitter.com/awxniZvOyx
— Headline Karnataka (@hknewsonline) April 12, 2024
BJP Brijesh chowta Polali temple visit video goes viral in Mangalore. She looks grander and even more powerful during her annual jatre. May she bless all of us with health and happiness esp through this pandemic says Chowta twitter post
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm