ಬ್ರೇಕಿಂಗ್ ನ್ಯೂಸ್
26-11-20 12:35 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 26: ಬಹುನಿರೀಕ್ಷಿತ ಗೈಲ್ ಕಂಪನಿಯ ನೈಸರ್ಗಿಕ ಅನಿಲ ಕೊಚ್ಚಿಯಿಂದ ಪೈಪ್ ಲೈನ್ ಮೂಲಕ ಮಂಗಳೂರು ತಲುಪಿದ್ದು, ಮೊದಲ ಹಂತದಲ್ಲೇ ಎಂಸಿಎಫ್ ನಲ್ಲಿ ನೈಸರ್ಗಿಕ ಅನಿಲ ಬಳಕೆಗೆ ಯೋಜನೆ ಹಾಕಲಾಗಿದೆ.
ಈವರೆಗೆ ಎಂಸಿಎಫ್ ನಲ್ಲಿ ನ್ಯಾಫ್ತಾ ಬಳಸಿ ಯೂರಿಯಾ ಮತ್ತಿತರ ರಸಗೊಬ್ಬರ ತಯಾರಿ ನಡೆಸಲಾಗುತ್ತಿತ್ತು. ಆದರೆ, ನ್ಯಾಫ್ತಾ ಬಳಕೆಯಿಂದ ಪರಿಸರಕ್ಕೆ ಮಾರಕ ಮತ್ತು ಉತ್ಪಾದನಾ ವೆಚ್ಚ ಅಧಿಕ ಎನ್ನುವ ನೆಲೆಯಲ್ಲಿ ನ್ಯಾಫ್ತಾ ಬಳಕೆಯನ್ನು ಆರು ವರ್ಷಗಳ ಹಿಂದೆ ಕೇಂದ್ರ ಸರಕಾರ ನಿಷೇಧಿಸಿತ್ತು. ಕೇಂದ್ರ ಸರಕಾರದ ನಿಷೇಧ ಆದೇಶದಿಂದ ಒಂದು ಹಂತದಲ್ಲಿ ಎಂಸಿಎಫ್ ಉತ್ಪಾದನೆಯನ್ನೂ ಸ್ಥಗಿತಗೊಳಿಸಿತ್ತು. ಆನಂತರ ನೈಸರ್ಗಿಕ ಅನಿಲ ಲಭ್ಯವಾಗುವ ವರೆಗೆ ನ್ಯಾಫ್ತಾ ಬಳಸಲು ಸರಕಾರ ಅನುಮತಿ ನೀಡಿತ್ತು.


ಮೂರು ವರ್ಷಗಳ ಮೊದಲೇ ಗೈಲ್ ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯಾಗಬೇಕಿತ್ತು. ಆದರೆ, ಪೈಪ್ ಲೈನ್ ಹಾಕುವುದು ವಿಳಂಬವಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಅನಿಲ ಪೂರೈಕೆ ಆರಂಭಗೊಂಡಿದ್ದು ಆರಂಭಿಕ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಅನಿಲ ಆಧಾರಿತ ಯಂತ್ರಗಳನ್ನು ಅಳವಡಿಸಿ ಕಾರ್ಯ ಚಟುವಟಿಕೆಯನ್ನು ಬಗ್ಗೆ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.
ಅಲ್ಲದೆ, ನೈಸರ್ಗಿಕ ಅನಿಲ ಸ್ಟೋರೇಜ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಮುಂದಿನ ತಿಂಗಳಿಂದ ಅಧಿಕೃತವಾಗಿ ನೈಸರ್ಗಿಕ ಅನಿಲದಿಂದ ರಸಗೊಬ್ಬರ ತಯಾರಿ ಆರಂಭಗೊಳ್ಳಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಂಆರ್ ಪಿಎಲ್ ಗೂ ಗೈಲ್ ಕಂಪನಿಯಿಂದ ನೈಸರ್ಗಿಕ ಅನಿಲ ಪೂರೈಸಲಿದೆ. ಸದ್ಯ ಎಂಆರ್ ಪಿಎಲ್ ನಲ್ಲಿ ಪ್ರತಿದಿನ 2500 ಟನ್ ಎಲ್ ಪಿಜಿ ಉತ್ಪಾದನೆಯಾಗುತ್ತಿದ್ದು, ಅದನ್ನು ರಾಜ್ಯದ ವಿವಿಧೆಡೆಗೆ ಪೂರೈಸಲಾಗುತ್ತಿದೆ. ಇಲ್ಲಿ ಪೆಟ್ರೋಲಿಯಂ ಕಚ್ಚಾ ತೈಲದಿಂದ ಎಲ್ ಪಿಜಿ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನು ಗೈಲ್ ಪೂರೈಸುವ ನೈಸರ್ಗಿಕ ಅನಿಲದಿಂದಲೇ ಎಲ್ ಪಿಜಿ ಉತ್ಪಾದನೆಯಾಗಲಿದೆ.
The much-delayed Kochi-Mangalore natural gas pipeline project is finally ready for commissioning any day from now as the national energy major Gail India has completed the final 540-metre treacherous stretch across the Chandragiri river in northern Kerala, according to a senior company official.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm