ಬ್ರೇಕಿಂಗ್ ನ್ಯೂಸ್
26-11-20 12:35 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 26: ಬಹುನಿರೀಕ್ಷಿತ ಗೈಲ್ ಕಂಪನಿಯ ನೈಸರ್ಗಿಕ ಅನಿಲ ಕೊಚ್ಚಿಯಿಂದ ಪೈಪ್ ಲೈನ್ ಮೂಲಕ ಮಂಗಳೂರು ತಲುಪಿದ್ದು, ಮೊದಲ ಹಂತದಲ್ಲೇ ಎಂಸಿಎಫ್ ನಲ್ಲಿ ನೈಸರ್ಗಿಕ ಅನಿಲ ಬಳಕೆಗೆ ಯೋಜನೆ ಹಾಕಲಾಗಿದೆ.
ಈವರೆಗೆ ಎಂಸಿಎಫ್ ನಲ್ಲಿ ನ್ಯಾಫ್ತಾ ಬಳಸಿ ಯೂರಿಯಾ ಮತ್ತಿತರ ರಸಗೊಬ್ಬರ ತಯಾರಿ ನಡೆಸಲಾಗುತ್ತಿತ್ತು. ಆದರೆ, ನ್ಯಾಫ್ತಾ ಬಳಕೆಯಿಂದ ಪರಿಸರಕ್ಕೆ ಮಾರಕ ಮತ್ತು ಉತ್ಪಾದನಾ ವೆಚ್ಚ ಅಧಿಕ ಎನ್ನುವ ನೆಲೆಯಲ್ಲಿ ನ್ಯಾಫ್ತಾ ಬಳಕೆಯನ್ನು ಆರು ವರ್ಷಗಳ ಹಿಂದೆ ಕೇಂದ್ರ ಸರಕಾರ ನಿಷೇಧಿಸಿತ್ತು. ಕೇಂದ್ರ ಸರಕಾರದ ನಿಷೇಧ ಆದೇಶದಿಂದ ಒಂದು ಹಂತದಲ್ಲಿ ಎಂಸಿಎಫ್ ಉತ್ಪಾದನೆಯನ್ನೂ ಸ್ಥಗಿತಗೊಳಿಸಿತ್ತು. ಆನಂತರ ನೈಸರ್ಗಿಕ ಅನಿಲ ಲಭ್ಯವಾಗುವ ವರೆಗೆ ನ್ಯಾಫ್ತಾ ಬಳಸಲು ಸರಕಾರ ಅನುಮತಿ ನೀಡಿತ್ತು.
ಮೂರು ವರ್ಷಗಳ ಮೊದಲೇ ಗೈಲ್ ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯಾಗಬೇಕಿತ್ತು. ಆದರೆ, ಪೈಪ್ ಲೈನ್ ಹಾಕುವುದು ವಿಳಂಬವಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಅನಿಲ ಪೂರೈಕೆ ಆರಂಭಗೊಂಡಿದ್ದು ಆರಂಭಿಕ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಅನಿಲ ಆಧಾರಿತ ಯಂತ್ರಗಳನ್ನು ಅಳವಡಿಸಿ ಕಾರ್ಯ ಚಟುವಟಿಕೆಯನ್ನು ಬಗ್ಗೆ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.
ಅಲ್ಲದೆ, ನೈಸರ್ಗಿಕ ಅನಿಲ ಸ್ಟೋರೇಜ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಮುಂದಿನ ತಿಂಗಳಿಂದ ಅಧಿಕೃತವಾಗಿ ನೈಸರ್ಗಿಕ ಅನಿಲದಿಂದ ರಸಗೊಬ್ಬರ ತಯಾರಿ ಆರಂಭಗೊಳ್ಳಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಂಆರ್ ಪಿಎಲ್ ಗೂ ಗೈಲ್ ಕಂಪನಿಯಿಂದ ನೈಸರ್ಗಿಕ ಅನಿಲ ಪೂರೈಸಲಿದೆ. ಸದ್ಯ ಎಂಆರ್ ಪಿಎಲ್ ನಲ್ಲಿ ಪ್ರತಿದಿನ 2500 ಟನ್ ಎಲ್ ಪಿಜಿ ಉತ್ಪಾದನೆಯಾಗುತ್ತಿದ್ದು, ಅದನ್ನು ರಾಜ್ಯದ ವಿವಿಧೆಡೆಗೆ ಪೂರೈಸಲಾಗುತ್ತಿದೆ. ಇಲ್ಲಿ ಪೆಟ್ರೋಲಿಯಂ ಕಚ್ಚಾ ತೈಲದಿಂದ ಎಲ್ ಪಿಜಿ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನು ಗೈಲ್ ಪೂರೈಸುವ ನೈಸರ್ಗಿಕ ಅನಿಲದಿಂದಲೇ ಎಲ್ ಪಿಜಿ ಉತ್ಪಾದನೆಯಾಗಲಿದೆ.
The much-delayed Kochi-Mangalore natural gas pipeline project is finally ready for commissioning any day from now as the national energy major Gail India has completed the final 540-metre treacherous stretch across the Chandragiri river in northern Kerala, according to a senior company official.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 12:47 pm
HK News Desk
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm