ಬ್ರೇಕಿಂಗ್ ನ್ಯೂಸ್
13-01-24 10:56 pm Mangalore Correspondent ಕರಾವಳಿ
ಬಂಟ್ವಾಳ, ಜ.13: ಹೆಲ್ಮೆಟ್ ಹಾಕದೆ ಸಂಚಾರ ಮಾಡುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ಬೈಕ್ ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಹೋಗಿದ್ದಾರೆ ಎಂಬ ಕಾರಣಕ್ಕಾಗಿ ಅಟ್ಟಿಸಿಕೊಂಡು ಬಂದು ಬೈಕ್ ಗೆ ಲಾಕ್ ಹಾಕಿದ್ದಕ್ಕೆ ಸಾರ್ವಜನಿಕರು ಹಾಗೂ ಟ್ರಾಫಿಕ್ ಎ.ಎಸ್.ಐ. ಮಧ್ಯೆ ಜಟಾಪಟಿ ನಡೆದ ಘಟನೆ ಬಿಸಿರೋಡಿನ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಟ್ರಾಫಿಕ್ ಎಎಸ್ಐ ಜನಾರ್ದನ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದ್ದು ಕೊನೆಗೆ ಬೈಕ್ ಗೆ ಹಾಕಿದ್ದ ಲಾಕ್ ಅನ್ನು ತೆಗದು ಹೋಗಿದ್ದಾರೆ. ಭಾಸ್ಕರ ಮಣಿಹಳ್ಳ ಎಂಬವರು ಬೈಕ್ ರಿಪೇರಿಗಾಗಿ ಕೈಕುಂಜೆಯ ಮೆಕ್ಯಾನಿಕ್ ಬಳಿ ಇಟ್ಟಿದ್ದರು. ಇವರ ಬೈಕ್ ಯಾವುದೋ ಪ್ರಕರಣದಲ್ಲಿ ಪೋಲೀಸ್ ಠಾಣೆಯಲ್ಲಿ ಹಲವು ಸಮಯದಿಂದ ಇದ್ದು, ಬ್ಯಾಟರಿ ಸಹಿತ ಇನ್ನಿತರ ಸಾಮಾಗ್ರಿಗಳು ಕೆಟ್ಟುಹೋಗಿತ್ತು. ಠಾಣೆಯಿಂದ ಬಿಡುಗಡೆಗೊಳಿಸಿದ ಬೈಕ್ ನ್ನು ರಿಪೇರಿಗಾಗಿ ಅವರು ಶಬರಿಮಲೆ ಯಾತ್ರೆ ಹೋಗುವ ವೇಳೆ ಮೆಕ್ಯಾನಿಕ್ ಬಳಿ ಇಟ್ಟಿದ್ದರು.





ಶಬರಿಮಲೆಯಿಂದ ಆಗಮಿಸಿ ಶನಿವಾರ ಬೆಳಗ್ಗೆ ಬೈಕ್ ಟೆಸ್ಟ್ ರೈಡ್ ಮಾಡುವ ಉದ್ದೇಶದಿಂದ ಕೈಕುಂಜೆ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಟ್ರಾಫಿಕ್ ಪೋಲೀಸರು ಬೈಕ್ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಬೈಕ್ ಸವಾರ ಭಾಸ್ಕರ್ ಅವರು ಬೈಕ್ ನಿಲ್ಲಿಸದೆ ಹೋಗಿದ್ದಾರೆ. ಈ ಕಾರಣಕ್ಕೆ ಎ.ಎಸ್.ಐ. ಹಾಗೂ ಸಿಬ್ಬಂದಿಯವರು ಸವಾರನನ್ನು ಬೆನ್ನಟ್ಟಿ ಬಂದು ತಾಲೂಕು ಪಂಚಾಯತ್ ಎದುರು ಮರದ ಅಡಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕ್ ಗೆ ಲಾಕ್ ಹಾಕಿದ್ದಾರೆ. ಇದರಿಂದ ಕುಪಿತರಾದ ಬೈಕ್ ಸವಾರ ಹಾಗೂ ಸಾರ್ವಜನಿಕರು ಇವರ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ಲಾಕ್ ಮಾಡಲು ಅವಕಾಶ ಇದೆಯಾ?
ಸವಾರರನ್ನು ಬೆನ್ನಟ್ಟಿ ವಾಹನಗಳಿಗೆ ಲಾಕ್ ಹಾಕುವ ಅವಕಾಶ ಟ್ರಾಫಿಕ್ ಪೋಲೀಸರಿಗೆ ಇದೆಯಾ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡಿದ್ದಾರೆ.
ವಾಗ್ವಾದ ಸಂದರ್ಭದಲ್ಲಿ ಟ್ರಾಫಿಕ್ ಎಎಸ್ಐ ಬಳಕೆ ಮಾಡಿದ ಬೈಕಿನ ವಿಮೆ ಪಾಲಿಸಿಯ ಅವಧಿ ಮುಗಿದಿದೆ ಎಂದು ಆನ್ ಲೈನ್ ತೋರಿಸುತ್ತಿದೆ ಎಂದು ಆರೋಪ ಮಾಡಿದರು. ವಿಮೆ ಇಲ್ಲದೆ ಪೋಲೀಸರ ವಾಹನ ರಸ್ತೆಗೆ ಇಳಿಯಬಹುದಾ ಎಂದು ಪ್ರಶ್ನಿಸಿ ತರಾಟೆಗೆತ್ತಿಕೊಂಡರು.
The public and the Traffic ASI have been suspended for not stopping the bike when the traffic police instructed them to stop it while they were not wearing a helmet. The incident took place in front of the taluk panchayat office on BC Road.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm