ಬ್ರೇಕಿಂಗ್ ನ್ಯೂಸ್
30-10-20 09:33 pm Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 30: ಸಮೋಸಾ ತಿನ್ನಲು ಫಾಸ್ಟ್ ಫುಡ್ ಸೆಂಟರ್ ಗೆ ಬಂದಿದ್ದ ನಾಲ್ವರು ದಾಂಧಲೆ ನಡೆಸಿ, ಏರ್ ಪಿಸ್ತೂಲ್ ತೋರಿಸಿ ಭಯ ಸೃಷ್ಟಿಸಿದ ಘಟನೆ ಮಂಗಳೂರಿನ ಫಳ್ನೀರ್ ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫಳ್ನೀರ್ ಬಳಿ ರಸ್ತೆ ಬದಿಯಲ್ಲಿರುವ ಎಂಎಫ್ಸಿ ಫಾಸ್ಟ್ ಫುಡ್ ಸೆಂಟರಿಗೆ ಸಂಜೆ 5 ಗಂಟೆ ಸುಮಾರಿಗೆ ಆಗಮಿಸಿದ್ದ ನಾಲ್ವರು ಸಮೋಸಾ ಮತ್ತು ಚಹಾ ಕೇಳಿದ್ದಾರೆ. ಸಮೋಸಾ ತಣ್ಣಗಿದ್ದ ವಿಚಾರದಲ್ಲಿ ಸಿಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ವಾಗ್ವಾದ ಅತಿರೇಕಕ್ಕೆ ಹೋಗಿದ್ದು, ಹೊರಭಾಗದಲ್ಲಿದ್ದ ಚೇರ್ ಎತ್ತಿಕೊಂಡು ದಾಂಧಲೆ ನಡೆಸಿದ್ದಾರೆ. ಈ ವೇಳೆ, ಹೊಟೇಲ್ ಸಿಬಂದಿ ಉಸ್ಮಾನ್ ಮತ್ತು ಸಾಹಿಲ್ ಎಂಬವರು ಬಂದು ಪ್ರತಿ ದಾಳಿಗೆ ಮುಂದಾಗಿದ್ದಾರೆ. ಈ ವೇಳೆ, ಆರೋಪಿಗಳ ಪೈಕಿ ಜುನೇದ್ ಎಂಬಾತ ತನ್ನಲ್ಲಿದ್ದ ಏರ್ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿದ್ದು ಉಸ್ಮಾನ್ ಕುಂಡೆಗೆ ಬಿದ್ದಿದೆ. ಅಲ್ಲದೆ, ಸಾಹಿಲ್ ಮೇಲೆ ಗ್ಲಾಸ್ ಪುಡಿಗೈದು ಅದರಲ್ಲಿ ಹಲ್ಲೆ ಮಾಡಿದ್ದಾನೆ. ಇಷ್ಟಾಗುತ್ತಿದ್ದಂತೆ ಆರೋಪಿಗಳ ಜೊತೆಗಿದ್ದ ಇನ್ನಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ.


ಆದರೆ, ಜುನೇದ್ ಮತ್ತು ಇಜಾಝ್ ಅಲ್ಲಿಂದ ತೆರಳಿರಲಿಲ್ಲ. ಮತ್ತಷ್ಟು ವಾಗ್ವಾದ ಮಾಡುತ್ತಾ ದಾಂಧಲೆಯಲ್ಲಿ ಪೀಠೋಪಕರಣ ಪುಡಿಗಟ್ಟಲು ಯತ್ನಿಸಿದ್ದಾರೆ. ಈ ವೇಳೆ, ಅಕ್ಕಪಕ್ಕದ ಅಂಗಡಿಗಳ ಸಿಬಂದಿ ಮತ್ತು ಸಾರ್ವಜನಿಕರು ಬಂದು ಇಬ್ಬರನ್ನೂ ಹಿಡಿದು ಹೊಟೇಲ್ ಒಳಗೆ ಕೂಡಿ ಹಾಕಿದ್ದಾರೆ. ಗಾಯಗೊಂಡ ಉಸ್ಮಾನ್ ಮತ್ತು ಸಾಹಿಲ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಗಳಾದ ಜುನೇದ್ ಮತ್ತು ಇಜಾಝ್ ಗಾಂಜಾ ಮತ್ತಿನಲ್ಲಿದ್ದ ರೀತಿ ವರ್ತಿಸುತ್ತಿದ್ದರು. ಕೂಡಲೇ ಪೊಲೀಸರು ಧಾವಿಸಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ಮೆಡಿಕಲ್ ಟೆಸ್ಟ್ ಮಾಡಿಸಿ ಪಾಂಡೇಶ್ವರ ಠಾಣೆಗೆ ಹೊತ್ತೊಯ್ದಿದ್ದಾರೆ. ಆರೋಪಿಗಳು ದಾಂಧಲೆ ನಡೆಸಿರುವುದು ಪೂರ್ತಿಯಾಗಿ ಹೊಟೇಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏರ್ ಪಿಸ್ತೂಲ್ ಬಳಕೆ ಏನು ?
ಏರ್ ಪಿಸ್ತೂಲ್ ಅನ್ನು ಸಾಮಾನ್ಯವಾಗಿ ಮಂಗನನ್ನು ಓಡಿಸಲು ಬಳಸುತ್ತಾರೆ. ಜೇಬಿನಲ್ಲಿ ಇಟ್ಟುಕೊಂಡು ಶೋ ಮಾಡುವವರೂ ಇರುತ್ತಾರೆ. ಇದಕ್ಕೆ ಲೈಸನ್ಸ್ ಬೇಕಿಲ್ಲ. ಅದರಿಂದ ಹೊಡೆದರೆ ಜೀವಕ್ಕೆ ಅಪಾಯ ಆಗಲ್ಲ. ಆದರೆ, ಆರೋಪಿಗಳ ಬಳಿ ಇದ್ದುದು ಏರ್ ಪಿಸ್ತೂಲ್ ಎನ್ನುವುದು ಅಲ್ಲಿನ ಸಿಬಂದಿಗಾಗಲೀ, ಸಾರ್ವಜನಿಕರಿಗಾಗಲೀ ತಿಳಿಯಲಿಲ್ಲ. ಒಮ್ಮೆ ಶೂಟ್ ಮಾಡಿದ ಬಳಿಕ ಮತ್ತೊಮ್ಮೆ ಶೂಟ್ ಮಾಡಲು ಅದನ್ನು ರಿಲೋಡ್ ಮಾಡಬೇಕಾಗಿದ್ದರಿಂದ ಈ ವೇಳೆ ಸಾರ್ವಜನಿಕರು ಆರೋಪಿಯನ್ನು ಹಿಡಿದಾಕಿದ್ದರು. ಆಗಿದ್ದಿಷ್ಟೇ ಅಂತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.
Detailed report by Headline Karnataka on Fire Gun Shot at Falnir MFC restaurant in Mangalore by unidentified assaliants. A group of unidentified assailants on Friday, October 30 fired gunshots at MFC hotel located in Falnir.
02-02-26 12:18 pm
HK News Desk
FM Sitharaman, Mohandas Pai, PM Modi, C.J. Ro...
31-01-26 11:05 pm
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm