ಬ್ರೇಕಿಂಗ್ ನ್ಯೂಸ್
30-04-23 06:54 pm Mangalore Correspondent ಕರಾವಳಿ
ಪುತ್ತೂರು, ಎ.30: ಪುತ್ತೂರಿನಲ್ಲಿ ಸಂಘಟನೆಯಲ್ಲಿದ್ದವರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಬಿಜೆಪಿ ಗೆದ್ದರೆ ಮಾತ್ರ ನಮಗೆ ಮರ್ಯಾದೆ. ಇಲ್ಲಿ ಕಾಂಗ್ರೆಸ್ ಗೆದ್ದರೆ ನಮಗೇನು ಮರ್ಯಾದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗನ್ ತೆಗೆದುಕೊಂಡು ಬೆದರಿಸುವ ವಿಡಿಯೋ ನೋಡಿದೆ. ಇಂಥ ವಿದ್ಯಮಾನ ಬಿಹಾರದಲ್ಲಿಯೂ ನಾವು ಕಾಣಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ.
ವಿಟ್ಲದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಮಾತನಾಡಿದ್ದಾರೆ. ರಿಯಲ್ ಎಸ್ಟೇಟ್ ಆಸ್ತಿ ದೊಡ್ಡದು ಮಾಡಿಕೊಳ್ಳಲು ಈ ವ್ಯಕ್ತಿ ಶಾಸಕರಾಗಲು ಬರ್ತಿದ್ದಾರೆಯೇ ಎಂದು ಜನರು ಕನ್ನಡಿ ನೋಡಿಕೊಳ್ಳಬೇಕು. ಕೆಲವು ಅಭ್ಯರ್ಥಿಗಳನ್ನು ನೋಡುವಾಗ ಆ ಥರಾ ಇದ್ದಾರೆ. 400 ಕೋಟಿ ಇರುವ ತಮ್ಮ ಆಸ್ತಿಯನ್ನು 500 ಕೋಟಿ ಮಾಡಲು ಇವರು ಬರುತ್ತಿದ್ದಾರೆಯೇ ಎಂದು ಅರ್ಥ ಮಾಡ್ಕೋಬೇಕು ಎಂದರು.






ಪುತ್ತೂರಿನಲ್ಲಿ ಬಿಜೆಪಿ ಗೆದ್ದರೆ ಮಾತ್ರ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯಾರೋ ವ್ಯಕ್ತಿ ಗೆದ್ದರೆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇಲ್ಲಿ ಈಗೋ ಮುಖ್ಯ ಅಲ್ಲ. ಈಗೋ ಮೆಟ್ಟಿ ನಿಂತು ನಾವು ಪಕ್ಷ ಪರ ನಿಂತಿದ್ದೇವೆ. ನನಗೊಬ್ಬ ಹುಡುಗ ಪ್ರಶ್ನೆ ಕೇಳಿದ. ನಿಮ್ಮ ಅಭ್ಯರ್ಥಿಗಿಂತ ಪಕ್ಷೇತರ ವ್ಯಕ್ತಿ ಒಳ್ಳೆ ಇದ್ದಾರೆ ಅಂತ. ಪಕ್ಷೇತರ ವ್ಯಕ್ತಿ ಮಾತ್ರ ಅಲ್ಲ, ವೇದಿಕೆಯಲ್ಲಿ ಇರುವ ನಾಲ್ಕೈದು ಮಂದಿ ಬೆಟರ್ ಅಂತ ಕಾಣಬಹುದು. ಸಚಿನ್, ವಿರಾಟ್ ಕೊಹ್ಲಿ ನೋಡಲು ಸುಂದರವಾಗಿ ಕಾಣ್ತಾರೆ. ಆದರೆ ನಮಗೆ ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷವನ್ನು ಗೆಲ್ಲಿಸುವುದು ಮುಖ್ಯ. ಹಾಗಾಗಿ ವ್ಯಕ್ತಿ ಯಾರೆನ್ನುವುದು ಬೇಕಿಲ್ಲ ಎಂದರು. ವಿಟ್ಲದಲ್ಲಿ ಕಾರ್ಯಕ್ರಮಕ್ಕೂ ಮುನ್ನ ಅಣ್ಣಾಮಲೈ ರೋಡ್ ಶೋ ನಡೆಸಿದ್ದು, ಆನಂತರ ಸಾರ್ವಜನಿಕ ಸಭೆ ನಡೆಸಿದ್ದಾರೆ.
Puttur only if BJP wins we will have more respect says Annamalai.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm