ಬ್ರೇಕಿಂಗ್ ನ್ಯೂಸ್
30-04-23 01:59 pm Mangalore Correspondent ಕರಾವಳಿ
ಬಂಟ್ವಾಳ, ಎ.30 : ಜಿಲ್ಲಾಡಳಿತ ಮತದಾನ ಜಾಗೃತಿಗಾಗಿ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಯಕ್ಷಗಾನ ಕಲಾವಿದರನ್ನೂ ಬಳಸಿಕೊಂಡು ಮತದಾನದ ಬಗ್ಗೆ ಜಾಗೃತಿ ನಡೆಸುತ್ತಿದೆ. ಆದರೆ ಬಂಟ್ವಾಳದ ಬಿಸಿ ರೋಡಿನಲ್ಲಿ ಯಕ್ಷಗಾನ ವೇಷಧಾರಿಗಳನ್ನು ಕಸ ಒಯ್ಯುವ ವಾಹನಗಳಲ್ಲಿ ಒಯ್ದಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಬಂಟ್ವಾಳ ನಗರಸಭೆಯ ವತಿಯಿಂದ ಬಿಸಿ ರೋಡಿನಲ್ಲಿ ಶನಿವಾರ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಕೈಕಂಬದಿಂದ ಬಿಸಿ ರೋಡಿಗೆ ಮೆರವಣಿಗೆ ನಡೆದಿತ್ತು. ಈ ವೇಳೆ, ನಗರಸಭೆಯ ಕಸ ಒಯ್ಯುವ ವಾಹನದಲ್ಲಿ ಯಕ್ಷಗಾನ ವೇಷಧಾರಿಗಳನ್ನು ಕುಳ್ಳಿರಿಸಿ ಒಯ್ಯಲಾಗಿದೆ. ಮತದಾನ ಜಾಗೃತಿ ಮೂಡಿಸುವ ರೀತಿ ಭಾಗವತಿಕೆ ಮತ್ತು ವೇಷಧಾರಿಗಳು ಕುಣಿತಗಳನ್ನು ನಿರ್ವಹಿಸಿದರು.

ಆದರೆ ಯಕ್ಷಗಾನ ಕಲಾವಿದರನ್ನು ಕಸ ಒಯ್ಯುವ ವಾಹನದಲ್ಲಿ ಕುಳ್ಳಿರಿಸಿ ಒಯ್ದಿದ್ದು ಯಕ್ಷಗಾನ ಪ್ರಿಯರ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ನಗರಸಭೆಯ ಆಡಳಿತ ಕ್ಷಮೆ ಕೇಳಬೇಕೆಂದು ಕಲಾವಿದರು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ನಗರಸಭೆಯ ಈ ನಡೆಯನ್ನು ನಾವು ಖಂಡಿಸುತ್ತೇವೆ. ನಗರಸಭೆ ಅಧಿಕಾರಿಗಳು, ಯಕ್ಷಗಾನ ಕಲೆಯನ್ನು ಗ್ಯಾರ್ಬೇಜ್ ಗೆ ಸಮ ಎಂದುಕೊಂಡಿದ್ದಾರೆಯೇ..? ಈ ಬಗ್ಗೆ ಯಕ್ಷಗಾನ ಪ್ರಿಯರು, ಕಲಾವಿದರ ಬಳಿ ನಗರಸಭೆ ಅಧಿಕಾರಿಗಳು ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ.
Yakshagana, the traditional folk art of the coastal region of Karnataka, is a symbol of pride and honor. However, the Yakshagana fraternity in Bantwal is expressing their anguish after artists were taken in a procession in a waste transportation vehicle belonging to the Bantwal municipality.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm