ಬ್ರೇಕಿಂಗ್ ನ್ಯೂಸ್
27-04-23 03:48 pm Mangalore Correspondent ಕರಾವಳಿ
ಪುತ್ತೂರು, ಎ.27: ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಪರವಾಗಿ ಭಾರೀ ಬೆಂಬಲ ವ್ಯಕ್ತವಾಗುತ್ತಿರುವ ನಡುವಲ್ಲೇ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಪುತ್ತಿಲ ವಿರುದ್ಧ ಹರಿಹಾಯ್ದಿದ್ದಾರೆ. ಅರುಣ್ ಪುತ್ತಿಲ ಯಾವ ರೀತಿಯ ಹಿಂದುತ್ವ ಹೋರಾಟ ಮಾಡಿದ್ದಾರೆ ಎಂದು ಕಲ್ಲಡ್ಕ ಭಟ್ ಪ್ರಶ್ನೆ ಮಾಡಿದ್ದಾರೆ.
ಇಡೀ ಜಗತ್ತೇ ಬಿಜೆಪಿಯನ್ನು ಹಿಂದುತ್ವದ ಪಾರ್ಟಿ ಎಂದು ಒಪ್ಪಿಕೊಂಡಿರುವಾಗ ಪುತ್ತೂರಿನಲ್ಲಿ ಯಾರೋ ಒಬ್ಬ ನನ್ನದೇ ನೈಜ ಹಿಂದುತ್ವ ಎಂದು ಹೇಳುತ್ತಿದ್ದಾನೆ. ಎಲ್ಲಿ ಹಿಂದುತ್ವದ ಹೋರಾಟ ಮಾಡಿದ್ದಾನೆ. ಯಾರೋ ಗೋಸಾಗಾಟ ಮಾಡಿದಾಗ ಜೊತೆಗೆ ನಿಂತಿದ್ದರೆ ಅದು ಹಿಂದುತ್ವವಾ.. ಅವನು ಹಿಂದುಗಳ ವಿರುದ್ಧವೇ ಹೋರಾಟ ಮಾಡಿರೋದು. ನೀವು ಬೇಕಿದ್ದರೆ ಅವನ ಅಫಿಡವಿಟನ್ನು ನೋಡಿ. ಅದರಲ್ಲೇ ಬರೆದುಕೊಂಡಿದ್ದಾನೆ. ಏನೆಲ್ಲ ಕೇಸುಗಳಿವೆ ಅಂತ. ಹಿಂದುಗಳಿಗೆ ಹೊಡೆದವರು, ದೇವಸ್ಥಾನದ ಹಣ ಹೊಡೆದವರು, ಯಾವುದೋ ರವೀಂದ್ರ ಪೂಜಾರಿ ಎಂಬವರ ಜಾಗ ಕೊಡಿಸಬೇಕೆಂದು ಗಲಾಟೆ ಮಾಡಿಸಿ 307 ಸೆಕ್ಷನ್ ಹಾಕಿಸಿಕೊಂಡವರು. ಇದೆಲ್ಲ ಎಂಥ ಹಿಂದುತ್ವರೀ.. ಪಾಪ, ಅನೇಕ ಮಕ್ಕಳಿಗೆ ಅದೆಲ್ಲ ಗೊತ್ತಿಲ್ಲ. ಭಾರತೀಯ ಜನತಾ ಪಾರ್ಟಿಗಿಂತ ದೊಡ್ಡ ಹಿಂದುತ್ವ ಸಂಘಟನೆ ಇಲ್ಲ. ಇಡೀ ಜಗತ್ತಿನಲ್ಲಿ ಎರಡನೇ ದೊಡ್ಡ ವ್ಯಕ್ತಿಯಾಗಿರುವ, ಕೇಂದ್ರ ಗೃಹ ಸಚಿವ ಅಮಿತ್ ಷಾ ತಾನೇ ಅವರಲ್ಲಿ ಮಾತಾಡುತ್ತೇನೆ ಎಂದಾಗ, ಅದನ್ನು ಧಿಕ್ಕರಿಸಿ ನಡೆದವರು ಅರುಣ್ ಪುತ್ತಿಲ.
ಒಂದು ಪಕ್ಷ ಇಲ್ಲದೆ, ಒಬ್ಬನಿಂದ ಯಾವ ರೀತಿಯ ಹಿಂದುತ್ವ ಆಗಬಹುದು. ಏನಾದರೂ ಅಭಿವೃದ್ಧಿ ಮಾಡಲು ಸಾಧ್ಯವೇ.. ಸ್ವತಂತ್ರವಾಗಿ ನಿಂತವರು ಅಭಿವೃದ್ಧಿ ಮಾಡೋಕೆ ಸಾಧ್ಯನಾ.. ಅವನಿಗೆ ಹೇಳೋರಿಲ್ಲ, ಕೇಳೋರಿಲ್ಲ. ಸ್ವತಂತ್ರ ಅಂದರೆ ಹಾಗೇ ತಾನೇ.. ಬಿಜೆಪಿ ಅನ್ನೋದು ಅಖಿಲ ಭಾರತ ಸಂಘಟನೆ. ಪುತ್ತೂರಿಗೆ ಮಾತ್ರ ಸೀಮಿತ ಅಲ್ಲ. ಹಾಗಾಗಿ ಬಿಜೆಪಿಯನ್ನು ಎಲ್ಲರೂ ಬೆಂಬಲಿಸಬೇಕು, ಆಮೂಲಕ ಹಿಂದುತ್ವ, ದೇಶ ಉಳಿಸಬೇಕು. ಜನ ಹಾಗೇ ಮಾಡ್ತಾರೆ ಅಂದ್ಕೊಂಡಿದ್ದೇನೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಸುಳ್ಯದಲ್ಲಿ ಪ್ರವೀಣ್ ನೆಟ್ಟಾರು ಗೃಹ ಪ್ರವೇಶಕ್ಕೆ ಬಂದಿದ್ದ ಪ್ರಭಾಕರ ಭಟ್, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.
Mangalore Kalladka Prabhakar Bhat slams Puttur Arun Puthila, questions him about Hindutva. Is stopping transport of cows is Hindutva he questioned. Entire word has accepted that BJP is a party for Hindus then how cab Arun say what he follows is only the real Hindutva he added.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am