ಬ್ರೇಕಿಂಗ್ ನ್ಯೂಸ್
25-04-23 11:10 pm Mangalore Correspondent ಕರಾವಳಿ
ಮಂಗಳೂರು, ಎ.25 : ಬೇಸಗೆ ಮಳೆಯಿಲ್ಲದೆ ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ನದಿ ಸಂಪೂರ್ಣ ಬತ್ತಿ ಹೋಗಿದ್ದರೆ, ಈಗ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲೂ ನೀರು ಖಾಲಿಯಾಗಿದ್ಯಾ ಅನ್ನುವ ಅನುಮಾನ ಮೂಡಿದೆ. ಪೈಪ್ ಲೈನ್ ಬದಲಿಸುವ ತಾಂತ್ರಿಕ ಕಾರಣದ ನೆಪವೊಡ್ಡಿ ಎಪ್ರಿಲ್ 27 ಮತ್ತು 28ರಂದು ಮಂಗಳೂರು ನಗರಕ್ಕೆ ನೀರು ಪೂರೈಕೆ ಇಲ್ಲ ಎಂದು ಮಹಾನಗರ ಪಾಲಿಕೆ ಪ್ರಕಟಣೆ ನೀಡಿದೆ.
ಈಗಾಗಲೇ ಬಂಟ್ವಾಳ ತಾಲೂಕಿನ ಶಂಭೂರಿನ ಅಣೆಕಟ್ಟಿನಲ್ಲಿ ನೀರು ಖಾಲಿಯಾಗಿದೆ. ಇತ್ತೀಚೆಗೆ ಅಲ್ಲಿದ್ದ ನೀರನ್ನು ತುಂಬೆ ಜಲಾಶಯಕ್ಕೆ ಬಿಡಲಾಗಿತ್ತು. ಆಮೂಲಕ ಚುನಾವಣೆ ಹೊತ್ತಲ್ಲಿ ತುಂಬೆ ಅಣೆಕಟ್ಟು ನೀರು ಖಾಲಿಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಈಗ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಯುತ್ತಿದ್ದು ನೀರನ್ನು ಶೇಖರ ಮಾಡುವುದು ಪಾಲಿಕೆಗೆ ಸವಾಲಾಗಿದೆ.
ಇದೀಗ ಪೈಪ್ ಲೈನ್ ಕಾಮಗಾರಿ ನೆಪದಲ್ಲಿ ಎಪ್ರಿಲ್ 27ರ ಬೆಳಗ್ಗೆ 6ರಿಂದ 29ರ ಬೆಳಗ್ಗೆ 6ರ ವರೆಗೆ ನೀರು ಪೂರೈಕೆ ಇಲ್ಲ ಎಂದು ಪಾಲಿಕೆ ಹೇಳಿದ್ದು ನಗರದ ಜನರು ಸಹಕರಿಸುವಂತೆ ಕೇಳಿಕೊಂಡಿದೆ. ಈಗಾಗಲೇ ನಗರದ ಕೆಲವು ಕಡೆ ನೀರಿನ ಲಭ್ಯತೆ ಇಲ್ಲ. ಸರಿಪಲ್ಲ, ಮರೋಳಿ, ಕುಲಶೇಖರ, ಅಶೋಕನಗರ ಸೇರಿದಂತೆ ಎತ್ತರದ ಜಾಗಕ್ಕೆ ನೀರಿನ ಪೂರೈಕೆ ಆಗುತ್ತಿಲ್ಲ. ಈಗ ಎರಡು ದಿನ ನೀರು ಪೂರೈಕೆ ಕಡಿತ ಮಾಡಿ, ಅಣೆಕಟ್ಟಿನಲ್ಲಿ ನೀರು ಹಿಡಿದಿಡುವ ಪ್ರಯತ್ನಕ್ಕೆ ಪಾಲಿಕೆ ಮುಂದಾಗಿದೆ. ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮ ಘಟ್ಟಗಳನ್ನು ಕಡಿದು ಹಾಕಿರುವುದು, ಅದರಿಂದಾಗಿ ಶೋಲಾ ಕಾಡುಗಳ ನಾಶ ಆಗಿರುವುದು ನೇತ್ರಾವತಿ ನದಿ ಬರಡಾಗಲು ಕಾರಣ. ಕಳೆದೆರಡು ವರ್ಷಗಳಲ್ಲಿ ಬೇಸಗೆ ಮಳೆಯಾಗಿದ್ದರಿಂದ ನೀರಿನ ಸಮಸ್ಯೆ ಕಂಡುಬಂದಿರಲಿಲ್ಲ. ಈ ಬಾರಿ ಬೇಸಗೆ ಮಳೆ ಆಗದೇ ಇರುವುದು ಮಂಗಳೂರಿನ ಜನರಿಗೆ ನೇತ್ರಾವತಿ ಶಾಪ ತಟ್ಟುವ ಸಾಧ್ಯತೆಯಿದೆ.
Pipe line repair, No MCC Water Supply in Mangalore for Two Days from April 27 to 29. The Mangalore city corporation will carry out maintenance work, including Header replacement work at LLPS – 1 and 1200 MM pipe repair work at the Thumbay High Lifting Pump Station – 2 -80MLD.
29-06-25 10:48 pm
Bangalore Correspondent
DK Shivakumar, R Ashok: ಡಿಕೆಶಿ ಜಾತಕ ಸರಿಯಿಲ್ಲ...
29-06-25 10:33 pm
Grace Ministry Theological Bible College, Ban...
29-06-25 04:49 pm
Fact Finding, Police, Mangalore Mob Lynching...
29-06-25 03:04 pm
RCB, Three IPS Officers Suspend: ಚಿನ್ನಸ್ವಾಮಿ...
28-06-25 04:27 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
29-06-25 11:23 pm
Mangalore Correspondent
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm
Rape, Mangalore Crime, Someshwara Beach: ಇನ್ಸ...
28-06-25 07:30 pm