ಬ್ರೇಕಿಂಗ್ ನ್ಯೂಸ್
22-10-20 03:59 pm Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 22: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಆರೋಪಿ ಎನ್ನಲಾದ ಆತನ ಸ್ನೇಹಿತ ಸತೀಶ್ ಕುಮಾರ್ ಹೆಸರಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಆಡಿಯೋದಲ್ಲಿ ತಾನೇ ಸುರೇಂದ್ರನನ್ನು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.
ನಾನು 22 ವರ್ಷಗಳಿಂದ ಸುರೇಂದ್ರನ ಜೊತೆಗಿದ್ದೇನೆ. ಆತನ ಎಲ್ಲ ಅವ್ಯವಹಾರ, ಬಡ್ಡಿ ವಹಿವಾಟು ನನಗೆ ಗೊತ್ತಿದೆ. ಮೊನ್ನೆ ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಪ್ರಕರಣದಲ್ಲಿ ಸುರೇಂದ್ರ ಹಣದ ಸಹಾಯ ಮಾಡಿದ್ದಾನೆ. ವಿಷಯ ನನಗೆ ತಿಳಿದಿತ್ತು. ನಾನು ಈ ಬಗ್ಗೆ ಸುರೇಂದ್ರನಲ್ಲಿ ಹೀಗೆ ಮಾಡುವುದು ಸರಿಯಲ್ಲ ಎಂದಿದ್ದೆ. ಅದಕ್ಕೆ ನನಗೆ ಬೆದರಿಸಿ, ಹೊರಗೆ ಹೇಳಿದರೆ ಸಾಯಿಸುತ್ತೇನೆ ಎಂದಿದ್ದ.


ಮೊನ್ನೆಯಷ್ಟೇ ಪನಾಮಾ ವಿವೇಕನ್ನು ಭೇಟಿಯಾಗಿ ಜೈಲಿನಲ್ಲಿದ್ದ ಮನೋಜ್ ಕೋಡಿಕೆರೆಗೆ ಬಟ್ಟೆ ಮತ್ತು ಒಂದೂವರೆ ಲಕ್ಷ ಹಣ ಕಳಿಸಿಕೊಟ್ಟಿದ್ದ. ನಾನೇ ಹಣ ತಲುಪಿಸಿದ್ದೆ. ಈ ವಿಚಾರದಲ್ಲಿ ಸುರೇಂದ್ರನಿಗೆ ಕೋಪ, ಬೇಸರವೂ ಇತ್ತು.
ಇವನು ಇದೇ ರೀತಿ ಇದ್ದರೆ, ಕೋಡಿಕೆರೆ ಮನೋಜನ ಜೊತೆ ಸೇರಿ, ಇನ್ನೂ ಕೆಲವು ಅಮಾಯಕರನ್ನು ಕೊಲ್ತಾನೆ. ಹಾಗಾಗಿ ನಾವು ಸುರೇಂದ್ರನನ್ನು ಕೊಂದಿದ್ದೇವೆ. ನಾವು ಈಗ ಕಾರವಾರದಲ್ಲಿ ಇದ್ದೇವೆ, ಬೇರೇನೂ ತಿಳಿಯದೆ ಆಡಿಯೋ ಮೂಲಕ ಹೇಳುತ್ತಿದ್ದೇನೆ. ಒಂದೆರಡು ದಿವಸದಲ್ಲಿ ಪೊಲೀಸರಿಗೆ ಶರಣಾಗುತ್ತೇವೆ ಎಂದು ವಾಟ್ಸಪಲ್ಲಿ ಆಡಿಯೋ ರಿಲೀಸ್ ಮಾಡಲಾಗಿದೆ.
ಸುರೇಂದ್ರ ಬಂಟ್ವಾಳ್ ಜೊತೆಗಿದ್ದ ಸತೀಶ್ ಕುಮಾರ್ ಎಂಬಾತ ನಾಪತ್ತೆಯಾಗಿದ್ದು ಆತನೇ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ವೇಳೆ ಆಡಿಯೋ ರಿಲೀಸ್ ಆಗಿದ್ದು ಕೊಲೆ ಪ್ರಕರಣ ಕುತೂಹಲ ಹೆಚ್ಚುವಂತೆ ಮಾಡಿದೆ. ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಸುರೇಂದ್ರ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
Video:
An Audio message has been circulated on WhatsApp with a voice stating as Satish Kulal, and I am the person who brutally killed Surendra Bantwal for his illegal activities. History-sheeter Surendra Bantwal, who had acted in a few Tulu movies, was stabbed to death in his apartment at Bantwal town in Dakshina Kannada district on Wednesday, police said.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm