ಬ್ರೇಕಿಂಗ್ ನ್ಯೂಸ್
22-10-20 03:59 pm Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 22: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಆರೋಪಿ ಎನ್ನಲಾದ ಆತನ ಸ್ನೇಹಿತ ಸತೀಶ್ ಕುಮಾರ್ ಹೆಸರಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಆಡಿಯೋದಲ್ಲಿ ತಾನೇ ಸುರೇಂದ್ರನನ್ನು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.
ನಾನು 22 ವರ್ಷಗಳಿಂದ ಸುರೇಂದ್ರನ ಜೊತೆಗಿದ್ದೇನೆ. ಆತನ ಎಲ್ಲ ಅವ್ಯವಹಾರ, ಬಡ್ಡಿ ವಹಿವಾಟು ನನಗೆ ಗೊತ್ತಿದೆ. ಮೊನ್ನೆ ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಪ್ರಕರಣದಲ್ಲಿ ಸುರೇಂದ್ರ ಹಣದ ಸಹಾಯ ಮಾಡಿದ್ದಾನೆ. ವಿಷಯ ನನಗೆ ತಿಳಿದಿತ್ತು. ನಾನು ಈ ಬಗ್ಗೆ ಸುರೇಂದ್ರನಲ್ಲಿ ಹೀಗೆ ಮಾಡುವುದು ಸರಿಯಲ್ಲ ಎಂದಿದ್ದೆ. ಅದಕ್ಕೆ ನನಗೆ ಬೆದರಿಸಿ, ಹೊರಗೆ ಹೇಳಿದರೆ ಸಾಯಿಸುತ್ತೇನೆ ಎಂದಿದ್ದ.
ಮೊನ್ನೆಯಷ್ಟೇ ಪನಾಮಾ ವಿವೇಕನ್ನು ಭೇಟಿಯಾಗಿ ಜೈಲಿನಲ್ಲಿದ್ದ ಮನೋಜ್ ಕೋಡಿಕೆರೆಗೆ ಬಟ್ಟೆ ಮತ್ತು ಒಂದೂವರೆ ಲಕ್ಷ ಹಣ ಕಳಿಸಿಕೊಟ್ಟಿದ್ದ. ನಾನೇ ಹಣ ತಲುಪಿಸಿದ್ದೆ. ಈ ವಿಚಾರದಲ್ಲಿ ಸುರೇಂದ್ರನಿಗೆ ಕೋಪ, ಬೇಸರವೂ ಇತ್ತು.
ಇವನು ಇದೇ ರೀತಿ ಇದ್ದರೆ, ಕೋಡಿಕೆರೆ ಮನೋಜನ ಜೊತೆ ಸೇರಿ, ಇನ್ನೂ ಕೆಲವು ಅಮಾಯಕರನ್ನು ಕೊಲ್ತಾನೆ. ಹಾಗಾಗಿ ನಾವು ಸುರೇಂದ್ರನನ್ನು ಕೊಂದಿದ್ದೇವೆ. ನಾವು ಈಗ ಕಾರವಾರದಲ್ಲಿ ಇದ್ದೇವೆ, ಬೇರೇನೂ ತಿಳಿಯದೆ ಆಡಿಯೋ ಮೂಲಕ ಹೇಳುತ್ತಿದ್ದೇನೆ. ಒಂದೆರಡು ದಿವಸದಲ್ಲಿ ಪೊಲೀಸರಿಗೆ ಶರಣಾಗುತ್ತೇವೆ ಎಂದು ವಾಟ್ಸಪಲ್ಲಿ ಆಡಿಯೋ ರಿಲೀಸ್ ಮಾಡಲಾಗಿದೆ.
ಸುರೇಂದ್ರ ಬಂಟ್ವಾಳ್ ಜೊತೆಗಿದ್ದ ಸತೀಶ್ ಕುಮಾರ್ ಎಂಬಾತ ನಾಪತ್ತೆಯಾಗಿದ್ದು ಆತನೇ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ವೇಳೆ ಆಡಿಯೋ ರಿಲೀಸ್ ಆಗಿದ್ದು ಕೊಲೆ ಪ್ರಕರಣ ಕುತೂಹಲ ಹೆಚ್ಚುವಂತೆ ಮಾಡಿದೆ. ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಸುರೇಂದ್ರ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
Video:
An Audio message has been circulated on WhatsApp with a voice stating as Satish Kulal, and I am the person who brutally killed Surendra Bantwal for his illegal activities. History-sheeter Surendra Bantwal, who had acted in a few Tulu movies, was stabbed to death in his apartment at Bantwal town in Dakshina Kannada district on Wednesday, police said.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm