ಬ್ರೇಕಿಂಗ್ ನ್ಯೂಸ್
18-10-20 03:15 pm Mangaluru Reporter ಕರಾವಳಿ
ಉಳ್ಳಾಲ, ಅಕ್ಟೋಬರ್ .18: ಇತ್ತೀಚೆಗೆ ಮೃತಪಟ್ಟ ಯುವಸೇನೆ ಮುಖಂಡ ಎಕ್ಕೂರು ಶುಭಕರ ಶೆಟ್ಟಿ (ಎಕ್ಕೂರು ಬಾಬ) ಅವರ ಸ್ಮರಣಾರ್ಥ ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ಹಿಂದು ಯುವಸೇನೆ ಪಾಂಚಜನ್ಯ ಶಾಖೆ ತೊಕ್ಕೊಟ್ಟು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಹಿಂದು ಸಮಾಜದ ಹುಲಿಯಂತಿದ್ದ ಬಾಬ ಅವರು ಸಂಘಟನಾತ್ಮಕವಾಗಿ ಅನೇಕ ಯುವಕರ ಮನಸ್ಸನ್ನು ಗೆದ್ದಿದ್ದರು. ಸಾಮಾನ್ಯ ಮನೆತನದ ಹುಡುಗ ಈ ಮಟ್ಟದಲ್ಲಿ ಹೆಸರು ಗಳಿಸಿದ್ದು ನೋಡಿದರೆ ಅಚ್ಚರಿಯಾಗುತ್ತದೆ. ಆಧ್ಯಾತ್ಮದ ಮುಂದೆ ವಿಜ್ಞಾನ ಬೆಳೆಯಲಿಲ್ಲ ಎಂಬ ವಿಚಾರ ಕೊರೊನಾ ಕಾಲಘಟ್ಟದಲ್ಲಿ ಜನರಿಗೆ ಮನದಟ್ಟಾಗಿದೆ. ವಿಜ್ಞಾನವನ್ನು ನಂಬಿ ಕೂತವರು, ನಾಸ್ತಿಕರು ಕೂಡ ಇವತ್ತು ರೋಗ ನಿರ್ಮೂಲನೆಗೆ ದೇವರ ಮೊರೆ ಹೋಗಿದ್ದಾರೆ. ಇಂತಹ ಅರ್ಥಪೂರ್ಣ ಶಿಬಿರಗಳು, ಸೇವೆಗಳ ಮೂಲಕ ಎಕ್ಕೂರು ಬಾಬರ ಹೆಸರನ್ನು ಅಜರಾಮರವನ್ನಾಗಿಸುವ ಕಾರ್ಯ ಯುವಸೇನೆ ಮಾಡಿದೆ ಎಂದರು.
ಹಿಂದು ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋಧರ ಚೌಟ ಮಾತನಾಡಿ ಅಂದಿನ ಕಾಲದಲ್ಲಿ ಹಿಂದೂ ಸಂಘಟನೆಗಳನ್ನು ಹುಟ್ಟು ಹಾಕುವುದು ಆಗಲಿ, ಮುನ್ನಡೆಸುವುದಾಗಲಿ ಸುಲಭದ ಮಾತಾಗಿರಲಿಲ್ಲ. ಹಿಂದುತ್ವಕ್ಕೆ ಪ್ರತಿಕೂಲ ವಾತಾವರಣ ಇದ್ದ ಸಂಧರ್ಭದಲ್ಲಿ ಯುವಸೇನೆಯನ್ನು ಮುನ್ನಡೆಸಿದ ಕೀರ್ತಿ ಎಕ್ಕೂರು ಬಾಬಾರಿಗೆ ಸಲ್ಲಬೇಕು ಎಂದರು.
ಶಿಬಿರದಲ್ಲಿ ನೂರಾರು ಮಂದಿ ರಕ್ತದಾನಗೈದು ಮಾದರಿಯಾದರು. ರಕ್ತದಾನಿಗಳಿಗೆ ಟೀ ಶರ್ಟ್ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಈ ವೇಳೆ ಪ್ರಧಾನ ಮಂತ್ರಿ ಜನ್ ಧನ್ ಖಾತೆ ತೆರೆಯಲು ಉಚಿತ ನೋಂದಣಿ ಪ್ರಕ್ರಿಯೆ ನಡೆಯಿತು.
ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಹಿಂದು ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಜಿಲ್ಲಾ ಸಮಿತಿ ಅಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಉಪಾಧ್ಯಕ್ಷ ಯಾದವ್ ಕುಂದರ್ ವಾಮಂಜೂರು ,ಕಾರ್ಯದರ್ಶಿ ರವಿಚಂದ್ರ ಎಕ್ಕೂರು,ಮಾತೃ ಮಂಡಳಿ ಪ್ರಮುಖರು ಹೇಮ ಪ್ರಕಾಶ್ ಹೆಗ್ಡೆ , ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್,ಬಿಜೆಪಿ ಯುವಮೋರ್ಚದ ಕ್ಷೇತ್ರ ಅಧ್ಯಕ್ಷ ಸಚಿನ್ ಮೋರೆ, ಉದ್ಯಮಿಗಳಾದ ಸತೀಶ್ ಕರ್ಕೇರ, ಜಯಂತ್ ಕಾಪಿಕಾಡ್, ಜಗದೀಶ್ ಆಚಾರ್ಯ,ಗಣೇಶ್ ಅಂಚನ್ , ಮುಖಂಡರಾದ ದಯಾನಂದ್ ತೊಕ್ಕೊಟ್ಟು, ಲೋಕೇಶ್ ಶೆಟ್ಟಿ, ಹಿಂದೂ ಯುವಸೇನೆ ಪಾಂಚಜನ್ಯ ಶಾಖೆ ಅಧ್ಯಕ್ಷ ದೀಕ್ಷಿತ್ ತೊಕ್ಕೊಟ್ಟು, ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಆಶಿಕ್ ಗೋಪಾಲಕೃಷ್ಣ ಮೊದಲಾದವರು ಇದ್ದರು.
In memory of late Yekkur Baba the Hindu Yuva Sena, Thokottu organised a blood donation camp here on Sunday 18 October, 2020.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 06:00 pm
HK News Desk
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
06-08-25 05:43 pm
Bangalore Correspondent
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm