ಬ್ರೇಕಿಂಗ್ ನ್ಯೂಸ್
27-11-22 04:45 pm Mangalore Correspondent ಕರಾವಳಿ
ಮಂಗಳೂರು, ನ.27: ಧರ್ಮಸ್ಥಳ ಟಾರ್ಗೆಟ್, ಅಲ್ಲೇ ಸನಿಹದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಅನ್ನೋ ರಂಗು ರಂಗಾದ ಸುದ್ದಿ ಕೇಳಿ ಪೊಲೀಸರೇ ಬೆರಗಾಗಿದ್ದಾರೆ. ಅದೇನೂ ಇಲ್ಲಾರೀ, ಸುಮ್ನೆ ಅಂತ ಸ್ವತಃ ದಕ್ಷಿಣ ಕನ್ನಡ ಎಸ್ಪಿ ಸಾಹೇಬ್ರೆ ಹಲುಬಿದ್ದಾರೆ.
ಹೌದು.. ಪುಣ್ಯಕ್ಷೇತ್ರ ಧರ್ಮಸ್ಥಳ ಉಗ್ರರ ಟಾರ್ಗೆಟ್ ಎಂಬ ಟಿವಿ ಸುದ್ದಿ ಕೇಳಿದ ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ ಸೋವವಾಣೆ ಸ್ಪಷ್ಟನೆ ಕೊಟ್ಟಿದ್ದಾರೆ. ಧರ್ಮಸ್ಥಳ ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಯಾವುದೇ ಮಾಹಿತಿ ನಮಗಿಲ್ಲ. ಅದೇ ರೀತಿ ಧರ್ಮಸ್ಥಳ ಉಗ್ರರ ಟಾರ್ಗೆಟ್ ಅನ್ನೋದು ಕೂಡ ನಮಗೆ ತಿಳಿಯದ ಮಾಹಿತಿ. ನಮಗೆ ಯಾವುದೇ ಅಧಿಕೃತ ಏಜನ್ಸಿಗಳಿಂದ ಅಂತಹ ಸುದ್ದಿ ಬಂದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.


ಕಕ್ಕಿಂಜೆ ಭಾಗದಲ್ಲಿ ಸ್ಯಾಟಲೈಟ್ ಫೋನ್ ರಿಂಗ್, ಬ್ಲಾಸ್ಟ್ ಆಗಿರುವ ಸದ್ದು ಕೇಳಿದೆ ಎಂಬ ವದಂತಿಗಳಿಗೆ ಪಟಾಕಿ ಕಾರಣ ಇದ್ದಿರಬಹುದು ಎಂದು ಎಸ್ಪಿ ಸೋನವಾಣೆ ಹೇಳಿದ್ದಾರೆ. ಆ ಭಾಗದಲ್ಲಿ ಕಾಡಾನೆ ಓಡಿಸಲು ಸ್ಥಳೀಯರು ಪಟಾಕಿ ಸಿಡಿಸುತ್ತಾರೆ. ಅದರಿಂದ ಹೊಗೆ ಎದ್ದಿರುವ ಸಾಧ್ಯತೆಯಿದೆ. ಅದನ್ನು ಬಾಂಬ್ ಸ್ಫೋಟದ ಟ್ರಯಲ್ ಎನ್ನುವ ರೀತಿ ಬಿಂಬಿಸಬೇಡಿ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎನ್ನುವ ಅಪರಿಚಿತ ಹೆಸರಿನಲ್ಲಿ ನಾವೇ ಬಾಂಬ್ ಸ್ಫೋಟಿಸಿದ್ದಾಗಿ ಕರಪತ್ರ ವೈರಲ್ ಆಗಿತ್ತು. ಅದರಲ್ಲಿ ಕದ್ರಿ ದೇವಸ್ಥಾನ ಟಾರ್ಗೆಟ್ ಇತ್ತು ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದವು. ಆನಂತರ, ಸ್ಯಾಟಲೈಟ್ ಫೋನ್ ರಿಂಗ್ ಆಗಿರುವುದು ಮತ್ತು ಅದು ಉಗ್ರರ ಜಾಡು ಅನ್ನುವ ಸುದ್ದಿಗಳು ಹಬ್ಬಿದ್ದವು. ಉಡುಪಿ ಕೃಷ್ಣ ಮಠ, ಮಂದಾರ್ತಿ ದೇವಸ್ಥಾನ, ಆನಂತರ ಧರ್ಮಸ್ಥಳ ಟಾರ್ಗೆಟ್ ಅನ್ನುವ ಸುದ್ದಿಗಳೂ ಕೇಳಿಬಂದಿದ್ದವು. ಇದೀಗ ಇವೆಲ್ಲ ಸುದ್ದಿಗಳ ಹಿನ್ನೆಲೆಯಲ್ಲಿ ಜನರು ಗೊಂದಲಕ್ಕೆ ಒಳಗಾಗಬಾರದು ಅನ್ನುವ ದೃಷ್ಟಿಯಿಂದ ಎಸ್ಪಿ ಸೋನವಾಣೆ, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಸಂಶಯಾಸ್ಪದ ನಡೆಗಳು ಕಂಡುಬಂದಿಲ್ಲ ಎಂದು ಹೇಳಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Mangalore Satellite phone signals and bomb blast trail at Dharmasthala, SP Says it was crackers to avoid elephants. No trail bomb blast was made nor satellite phone signals have been detected near Dharmasthala forest range clarifies SP.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm