ಬ್ರೇಕಿಂಗ್ ನ್ಯೂಸ್
27-11-22 04:45 pm Mangalore Correspondent ಕರಾವಳಿ
ಮಂಗಳೂರು, ನ.27: ಧರ್ಮಸ್ಥಳ ಟಾರ್ಗೆಟ್, ಅಲ್ಲೇ ಸನಿಹದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಅನ್ನೋ ರಂಗು ರಂಗಾದ ಸುದ್ದಿ ಕೇಳಿ ಪೊಲೀಸರೇ ಬೆರಗಾಗಿದ್ದಾರೆ. ಅದೇನೂ ಇಲ್ಲಾರೀ, ಸುಮ್ನೆ ಅಂತ ಸ್ವತಃ ದಕ್ಷಿಣ ಕನ್ನಡ ಎಸ್ಪಿ ಸಾಹೇಬ್ರೆ ಹಲುಬಿದ್ದಾರೆ.
ಹೌದು.. ಪುಣ್ಯಕ್ಷೇತ್ರ ಧರ್ಮಸ್ಥಳ ಉಗ್ರರ ಟಾರ್ಗೆಟ್ ಎಂಬ ಟಿವಿ ಸುದ್ದಿ ಕೇಳಿದ ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ ಸೋವವಾಣೆ ಸ್ಪಷ್ಟನೆ ಕೊಟ್ಟಿದ್ದಾರೆ. ಧರ್ಮಸ್ಥಳ ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಯಾವುದೇ ಮಾಹಿತಿ ನಮಗಿಲ್ಲ. ಅದೇ ರೀತಿ ಧರ್ಮಸ್ಥಳ ಉಗ್ರರ ಟಾರ್ಗೆಟ್ ಅನ್ನೋದು ಕೂಡ ನಮಗೆ ತಿಳಿಯದ ಮಾಹಿತಿ. ನಮಗೆ ಯಾವುದೇ ಅಧಿಕೃತ ಏಜನ್ಸಿಗಳಿಂದ ಅಂತಹ ಸುದ್ದಿ ಬಂದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.


ಕಕ್ಕಿಂಜೆ ಭಾಗದಲ್ಲಿ ಸ್ಯಾಟಲೈಟ್ ಫೋನ್ ರಿಂಗ್, ಬ್ಲಾಸ್ಟ್ ಆಗಿರುವ ಸದ್ದು ಕೇಳಿದೆ ಎಂಬ ವದಂತಿಗಳಿಗೆ ಪಟಾಕಿ ಕಾರಣ ಇದ್ದಿರಬಹುದು ಎಂದು ಎಸ್ಪಿ ಸೋನವಾಣೆ ಹೇಳಿದ್ದಾರೆ. ಆ ಭಾಗದಲ್ಲಿ ಕಾಡಾನೆ ಓಡಿಸಲು ಸ್ಥಳೀಯರು ಪಟಾಕಿ ಸಿಡಿಸುತ್ತಾರೆ. ಅದರಿಂದ ಹೊಗೆ ಎದ್ದಿರುವ ಸಾಧ್ಯತೆಯಿದೆ. ಅದನ್ನು ಬಾಂಬ್ ಸ್ಫೋಟದ ಟ್ರಯಲ್ ಎನ್ನುವ ರೀತಿ ಬಿಂಬಿಸಬೇಡಿ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎನ್ನುವ ಅಪರಿಚಿತ ಹೆಸರಿನಲ್ಲಿ ನಾವೇ ಬಾಂಬ್ ಸ್ಫೋಟಿಸಿದ್ದಾಗಿ ಕರಪತ್ರ ವೈರಲ್ ಆಗಿತ್ತು. ಅದರಲ್ಲಿ ಕದ್ರಿ ದೇವಸ್ಥಾನ ಟಾರ್ಗೆಟ್ ಇತ್ತು ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದವು. ಆನಂತರ, ಸ್ಯಾಟಲೈಟ್ ಫೋನ್ ರಿಂಗ್ ಆಗಿರುವುದು ಮತ್ತು ಅದು ಉಗ್ರರ ಜಾಡು ಅನ್ನುವ ಸುದ್ದಿಗಳು ಹಬ್ಬಿದ್ದವು. ಉಡುಪಿ ಕೃಷ್ಣ ಮಠ, ಮಂದಾರ್ತಿ ದೇವಸ್ಥಾನ, ಆನಂತರ ಧರ್ಮಸ್ಥಳ ಟಾರ್ಗೆಟ್ ಅನ್ನುವ ಸುದ್ದಿಗಳೂ ಕೇಳಿಬಂದಿದ್ದವು. ಇದೀಗ ಇವೆಲ್ಲ ಸುದ್ದಿಗಳ ಹಿನ್ನೆಲೆಯಲ್ಲಿ ಜನರು ಗೊಂದಲಕ್ಕೆ ಒಳಗಾಗಬಾರದು ಅನ್ನುವ ದೃಷ್ಟಿಯಿಂದ ಎಸ್ಪಿ ಸೋನವಾಣೆ, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಸಂಶಯಾಸ್ಪದ ನಡೆಗಳು ಕಂಡುಬಂದಿಲ್ಲ ಎಂದು ಹೇಳಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Mangalore Satellite phone signals and bomb blast trail at Dharmasthala, SP Says it was crackers to avoid elephants. No trail bomb blast was made nor satellite phone signals have been detected near Dharmasthala forest range clarifies SP.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm