ಬ್ರೇಕಿಂಗ್ ನ್ಯೂಸ್
16-11-22 06:16 pm Mangalore Correspondent ಕರಾವಳಿ
ಮಂಗಳೂರು, ನ.16: ನಗರದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಆಟೋ ಎಕ್ಸ್ ಪೋ ಹೆಸರಲ್ಲಿ ಐಷಾರಾಮಿ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಮಂಗಳೂರಿನ ಪ್ರಸಾದ್ ಅಸೋಸಿಯೇಟ್ಸ್ ಗೆ ಸೇರಿದ ಐಷಾರಾಮಿ ಕಾರುಗಳು ಭಾರೀ ಜನಾಕರ್ಷಣೆ ಗಿಟ್ಟಿಸಿದವು.
ಹೈ ಎಂಡ್ ಮತ್ತು ಸ್ಪೋರ್ಟ್ಸ್ ಮಾಡೆಲ್ ಕಾರುಗಳು ಪ್ರದರ್ಶನದಲ್ಲಿ ಸೇರಿದ್ದವರ ಆಕರ್ಷಣೆಗೆ ಪಾತ್ರವಾಯಿತು. ಲ್ಯಾಂಬೋರ್ಗಿನಿ ಮತ್ತು ಆಡಿ ಆರ್-8 ಮಾದರಿಯ ಸ್ಪೋರ್ಟ್ಸ್ ಕಾರುಗಳನ್ನು ಪ್ರಸಾದ್ ಅಸೋಸಿಯೇಟ್ಸ್ ವತಿಯಿಂದ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಸಂಘಟಕರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ್ದು, ಭಾರೀ ಸಂಖ್ಯೆಯಲ್ಲಿ ಸೇರಿದ ಜನರು ಐಷಾರಾಮಿ ಕಾರುಗಳನ್ನು ನೋಡಲು ಮುಗಿಬಿದ್ದರು. ಇಂಜಿನಿಯರಿಂಗ್ ಕಾಲೇಜಿನ ಯುವಕ- ಯುವತಿಯರು ಸೇರಿದಂತೆ ಇತರೇ ಸಾರ್ವಜನಿಕರೆಲ್ಲ ಮೊಬೈಲ್ ಹಿಡಿದು ಕಾರಿನ ಫೋಟೋ ಕ್ಲಿಕ್ಕಿಸಿದರು.






ಆಡಿ ಆರ್- 8 ಕಾರು ಸ್ಪೋರ್ಟ್ಸ್ ಮಾಡೆಲ್ ನದ್ದಾಗಿದ್ದು, ಭಾರತದಲ್ಲಿ ಟಾಪ್ ಕಾರುಗಳಲ್ಲಿ ಒಂದಾಗಿದೆ. ವಿಶೇಷ ರೀತಿಯ ಸೌಂಡ್ ನಿಂದಾಗಿ ಸ್ಪೋರ್ಟ್ಸ್ ಮಾಡೆಲ್ ಕಾರು ಸಹ್ಯಾದ್ರಿ ಆವರಣದಲ್ಲಿ ಸಂಚರಿಸುತ್ತಿದ್ದಾಗಲೇ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದರು. ಲ್ಯಾಂಬೋರ್ಗಿನಿ ಕೂಡ ಐಷಾರಾಮಿ ಸ್ಪೋರ್ಟ್ಸ್ ಮಾಡೆಲ್ ಕಾರು ಆಗಿದ್ದು, ಹೈಫೈ ಜನರು ಇದನ್ನು ಖರೀದಿಸುತ್ತಾರೆ. ಇಡೀ ದೇಶದಲ್ಲಿಯೇ ಮಂಗಳೂರು ನಗರದಲ್ಲಿ ಟಾಪ್ ಎಂಡ್ ಕಾರುಗಳ ಕ್ರೇಜ್ ಹೆಚ್ಚಿದೆ. ಪ್ರಸಾದ್ ಅಸೋಸಿಯೇಟ್ಸ್ ದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತ್ತಾ ಹೀಗೆ ಮೆಟ್ರೋ ಪಾಲಿಟನ್ ನಗರಗಳಲ್ಲಿಯೂ ಹೈ ಎಂಡ್ ಕಾರುಗಳನ್ನು ಮಾರಾಟ ಮಾಡುತ್ತದೆ. ಇದೇ ಕಾರಣಕ್ಕೆ ಪ್ರಸಾದ್ ಅಸೋಸಿಯೇಟ್ಸ್ ಇತರೇ ಕಂಪನಿಗಳ ಜೊತೆ ಕಾರಿನ ಶೋನಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿತ್ತು.









ಕಾರು ಶೋದಲ್ಲಿ ಮಂಗಳೂರು, ಉಡುಪಿ ಜಿಲ್ಲೆಯ ವಿವಿಧ ಕಡೆಯ ಜನರು ಭಾಗವಹಿಸಿದ್ದರು. ಹೆಚ್ಚಾಗಿ ಯುವ ಜನರೇ ಪಾಲ್ಗೊಂಡಿದ್ದರು. ಆದರೆ ನೋಡಲು ಆಕರ್ಷಣೆ ಗಿಟ್ಟಿಸುವ ಐಷಾರಾಮಿ ಕಾರುಗಳೇ ಎಲ್ಲರ ಆಕರ್ಷಣೆಯಾಗಿದ್ದವು. ಜನರ ಕ್ರೇಜ್ ನೋಡಿದ ಪ್ರಸಾದ್ ಅಸೋಸಿಯೇಟ್ಸ್ ಮಾಲೀಕ ಪ್ರಸಾದ್ ಶೆಟ್ಟಿ ಭಾರೀ ಸಂತಸಗೊಂಡಿದ್ದಾರೆ. ಯಾವುದೇ ರೀತಿಯ ಹೈಫೈ ಕಾರುಗಳ ಖರೀದಿಗೆ ಪ್ರಸಾದ್ ಅಸೋಸಿಯೇಟ್ಸ್(8792133333) ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ.
Mangalore Prasad Associates organises Auto Expo in partnership with Shyadri college, thousands flock to see luxury cars owned by Mr Prasad Shetty. For premium Luxury car booking call Prasad Associates or follow their social media.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
07-02-26 10:53 pm
HK News Desk
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 10:48 pm
HK News Desk
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm
ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಪ...
07-02-26 08:14 pm
Shivamogga Conversion: ಶಿಕ್ಷಕಿಯಾದ ಬಳಿಕ ಪತ್ನಿ...
07-02-26 06:44 pm
Bangalore Cat Kidnap: ಬೆಂಗಳೂರಿನಲ್ಲಿ ಠಾಣೆ ಮೆಟ್...
07-02-26 05:21 pm