ಬ್ರೇಕಿಂಗ್ ನ್ಯೂಸ್
08-10-20 09:53 am Headline Karnataka News Network ಕರಾವಳಿ
ಮಂಗಳೂರು, ಅಕ್ಟೋಬರ್. 08 : ತುಳು ಅಕಾಡೆಮಿ ಮಾಜಿ ಸದಸ್ಯ, ಹಿರಿಯ ತುಳು ಸಾಹಿತಿ, ತುಳು ಸಂಘಟಕ ಶಿವಾನಂದ ಕರ್ಕೇರ (73) ತಮ್ಮ ಮನೆಯಲ್ಲಿ ಮಹಡಿಯಿಂದ ಜಾರಿ ಬಿದ್ದು ನಿಧನರಾಗಿದ್ದಾರೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಶಿವಾನಂದ ಕರ್ಕೇರ ಅವರು ಪಾಂಡೇಶ್ವರದ ಅಪಾರ್ಟ್ಮೆಂಟ್ ನಿಂದ ಹೊರಗೆ ಬಂದಿದ್ದು ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕೆಳಗೆ ಬಿದ್ದಿದ್ದು ಹೇಗೆ ಎನ್ನುವುದು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಅಪಾರ್ಟ್ಮೆಂಟ್ ಗೇಟ್ ಹೊರ ಭಾಗದಲ್ಲಿ ಕರ್ಕೇರ ಅವರು ಬಿದ್ದಿರುವುದನ್ನು ಪಕ್ಕದ ಮನೆಯ ಮಗುವೊಂದು ನೋಡಿ, ಹೆತ್ತವರಿಗೆ ತಿಳಿಸಿದೆ. ಕೂಡಲೇ ಅವರನ್ನು ಸ್ಥಳೀಯರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದ್ದು ,ಅದಾಗಲೇ ಮೃತಪಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಮಾಜಿ ಅಧಿಕಾರಿಯಾಗಿದ್ದ ಕರ್ಕೇರ ಅವರು, ನಿವೃತ್ತಿ ಬಳಿಕ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ತುಳು ನಾಟಕ, ಕವನ ಬರೆಯುವ ಹವ್ಯಾಸ ಹೊಂದಿದ್ದರು. ಇವರು ಕಡಲ್ ಕವಿತಾ ಸಂಕಲನ ಮತ್ತು ಎರು ಮೈಂದೆ ನಾಟಕಗಳಿಗೆ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.
ಗೋಕರ್ಣನಾಥ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರು, ಯಕ್ಷಾಂಗಣದ ಸ್ಥಾಪಕ ಉಪಾಧ್ಯಕ್ಷರು ಆಗಿದ್ದರು. ಇವರು ತುಳು ಅಕಾಡೆಮಿ ಸದಸ್ಯರಾಗಿದ್ದ ಅವಧಿಯಲ್ಲಿ ತುಳು ಭಾಷೆಯಲ್ಲಿ ಮೊದಲ ಬಾರಿಗೆ ಎಂಎ ಸ್ನಾತಕೋತ್ತರ ಪದವಿ ಆರಂಭಗೊಂಡಿತ್ತು. ಮೊದಲ ಬ್ಯಾಚಿನಲ್ಲಿ ತುಳು ಎಂ.ಎ. ವಿದ್ಯಾರ್ಥಿಯಾಗಿ ಸೇರಿದ್ದಲ್ಲದೆ ತುಳು ಕಲಿಯಬೇಕೆಂಬ ನೆಲೆಯಲ್ಲಿ ಕಿರಿಯರಿಗೆ ಪ್ರೋತ್ಸಾಹ ತುಂಬುತ್ತಿದ್ದರು. ಆರೋಗ್ಯದಲ್ಲಿ ತುಂಬು ಜವ್ವನ ಹೊಂದಿದ್ದ ಕರ್ಕೇರ ಅವರು, ಹಠಾತ್ ನಿಧನರಾಗಿರುವುದು ಅವರ ಆಪ್ತರಲ್ಲಿ ಮತ್ತು ತುಳು ಸಂಘಟಕರಲ್ಲಿ ದಿಗ್ಭ್ರಮೆ ಮೂಡಿಸಿದೆ
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm