ಬ್ರೇಕಿಂಗ್ ನ್ಯೂಸ್
11-08-22 10:47 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 11: ಮಂಗಳೂರು ಮೂಲದ ಎಂಟರ ಹರೆಯದ ಪೋರನೊಬ್ಬ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಶಿಖರ ಕಿಲಿಮಂಜಾರೋ ಏರಿದ ಸಾಹಸ ಮಾಡಿದ್ದಾನೆ. ಸದ್ಯ ದುಬೈನಲ್ಲಿ ನೆಲೆಸಿರುವ ಅಯಾನ್ ಮೆಂಡನ್ ಈ ಸಾಧನೆ ಮಾಡಿದ ಪೋರ.
ಆಗಸ್ಟ್ 4ರಂದು ತಮ್ಮ ಹೆತ್ತವರೊಂದಿಗೆ ತಾಂಜಾನಿಯಾ ದೇಶದಲ್ಲಿರುವ ಜ್ವಾಲಾಮುಖಿಯಿಂದ ನಿರ್ಮಿಸಲ್ಪಟ್ಟ ಕಿಲಿಮಂಜಾರೋ ಶಿಖರದ ತುದಿಗೆ ಅಯಾನ್ ತಲುಪಿದ್ದಾನೆ. ಕಿಲಿಮಂಜಾರೋ ಏರಬೇಕೆಂಬ ಗುರಿ ಇಟ್ಟುಕೊಂಡು ಅಯಾನ್ ತನ್ನ ಆರನೇ ವರ್ಷದಲ್ಲಿಯೇ ತರಬೇತಿ ಆರಂಭಿಸಿದ್ದ. ನೇಪಾಳದಲ್ಲಿ ವಿವಿಧ ಪರ್ವತ ಶಿಖರಗಳನ್ನು ಏರಿ ತರಬೇತು ಪಡೆದಿದ್ದ.


ಆಗಸ್ಟ್ 4ರಂದು ಬೆಳ್ಳಂಬೆಳಗ್ಗೆ ಶಿಖರ ಹತ್ತಿದ್ದು, ‘’ಉರು ಪೀಕ್ ’’ ಎಂದು ಕರೆಯಲ್ಪಡುವ ಪರ್ವತದ ತುದಿಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾನೆ. ಆಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕಿಲಿಮಂಜಾರೋ ಪರ್ವತ ಏರಿದ ಹುಡುಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಪರ್ವತ ಏರುತ್ತಿದ್ದ ಸಂದರ್ಭದಲ್ಲಿ ನಡುವೆ ತೀವ್ರ ಆಯಾಸಕ್ಕೊಳಗಾದ ಅಯಾನ್ ಗೆ ಹೆತ್ತವರು ಧೈರ್ಯ ತುಂಬಿದ್ದಾರೆ. ಆನಂತರ, ನಾನು ಸಾಧಿಸಿಯೇ ತೀರುತ್ತೇನೆ ಎಂದು ಮತ್ತೆ ಹೊರಟಿದ್ದಾನೆ. ಕೊನೆಗೂ ಶಿಖರ ತಲುಪುವ ಮೂಲಕ ಸಾಧನೆ ಮಾಡಿದ್ದಾನೆ. ಅಯಾನ್ ಮೆಂಡನ್, ದುಬೈನಲ್ಲಿ ನಾರ್ತ್ ಲಂಡನ್ ಕಾಲೇಜಿಯೇಟ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾನೆ.
Eight-year-old Ayaan Mendon from Mangaluru became the youngest person in the Gulf Cooperation Council (GCC) to climb Mount Kilimanjaro, the highest peak in Africa on August 4. On the morning of the August 4, Ayaan stood against the sign reading ‘Uhuru Peak’ in bold, holding the Indian flag after finishing a eight-day hike to Kilimanjaro
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm