ಬ್ರೇಕಿಂಗ್ ನ್ಯೂಸ್
02-10-20 12:56 pm Mangalore Correspondent ಕರಾವಳಿ
ಉಳ್ಳಾಲ, ಅಕ್ಟೋಬರ್ 2: ಕೊರೊನ ಮತ್ತು ಡ್ರಗ್ಸ್ ಒಂದೇ ನಾಣ್ಯದ ಎರಡು ಮುಖಗಳಂತೆ. ಆದರೆ, ನಮ್ಮ ಮಕ್ಕಳ ಮುಂದೆ ಕೊರೊನಾ, ಡ್ರಗ್ಸ್ ಗಿಂತಲೂ ಮೊಬೈಲ್ ಫೋನ್ ತುಂಬಾ ಮಾರಕವಾಗಿ ಪರಿಣಮಿಸಿದೆ ಎಂದು ಕಾಪಿಕಾಡು ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ ಅಧ್ಯಕ್ಷ ಮಾಜಿ ರಾಷ್ಟ್ರೀಯ ಕಬಡ್ಡಿ ಪಟು ಗೋಪಿನಾಥ್ ಕಾಪಿಕಾಡು ಹೇಳಿದರು.
ಇಲ್ಲಿನ ತೊಕ್ಕೊಟ್ಟು ಕಾಪಿಕಾಡು ಬಳಿಯ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕೊರೊನಾ ಮತ್ತು ಡ್ರಗ್ಸ್ ಮುಕ್ತ ಭಾರತಕ್ಕಾಗಿ ಉಮಾಮಹೇಶ್ವರಿ ಕ್ಷೇತ್ರದಿಂದ ಉಳ್ಳಾಲ ಅಬ್ಬಕ್ಕ ವೃತ್ತದವರೆಗೆ ನಡೆದ ಕಾಲ್ನಡಿಗೆ ಜಾಗೃತಿ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು. ಜಗತ್ತನ್ನು ಇವತ್ತು ಕೊರೊನ ಆವರಿಸಿ ಜನರನ್ನು ಭಯಭೀತಿಗೊಳಿಸಿದೆ. ಡ್ರಗ್ಸ್ ಭೂತವು ನಮ್ಮ ಯುವ ಸಮುದಾಯವನ್ನು ಹಾಳುಗೆಡವುತ್ತಿದೆ. ನಮ್ಮ ಎಳೆಯ ಮಕ್ಕಳ ಕೈಯಲ್ಲಿ ಇವತ್ತು ಆನ್ ಲೈನ್ ನೆಪದಲ್ಲಿ ಮೊಬೈಲ್ ಪೋನನ್ನು ಕೊಡುತ್ತಿದ್ದು, ಮಕ್ಕಳಿಗೆ ಇದು ಕೊರೊನ, ಡ್ರಗ್ಸ್ ಗಿಂತಲೂ ಮಾರಕವಾಗಿದೆ. ಮಕ್ಕಳನ್ನು ಇಡೀ ದಿವಸ ಮೊಬೈಲಲ್ಲಿ ಇರಲು ಬಿಡದೆ, ವ್ಯಾಯಾಮ, ಯೋಗಗಳಲ್ಲಿ ತೊಡಗಿಸಿದಲ್ಲಿ ಸಧೃಡ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು.
ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ ಮಕ್ಕಳು ಶೈಕ್ಷಣಿಕ ಜೀವನದೊಟ್ಟಿಗೆ ಕ್ರೀಡೆ, ಯೋಗ, ವ್ಯಾಯಾಮಗಳಲ್ಲಿ ತೊಡಗಿಸಿದಲ್ಲಿ ಶರೀರದಲ್ಲಿ ರೋಗನಿರೋಧಕ ಶಕ್ತಿ ಇಮ್ಮಡಿಗೊಳ್ಳುವುದರ ಜೊತೆಗೆ ಡ್ರಗ್ಸ್ ನಂತಹ ದುಷ್ಚಟಗಳಿಂದಲೂ ದೂರ ಉಳಿಯಬಹುದೆಂದು ಹೇಳಿದರು. ಉಳ್ಳಾಲ ನಗರಸಭೆ ಕೌನ್ಸಿಲರ್ ಕು.ಭವಾನಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಉಮಾಮಹೇಶ್ವರಿ ಕಬಡ್ಡಿ ಅಸೋಸಿಯೇಶನ್ ಚೇರ್ಮನ್ ಎ.ಜೆ ಶೇಖರ್, ಗೌರವ ಸಲಹೆಗಾರರಾದ ಈಶ್ವರ ಉಳ್ಳಾಲ್, ಪ್ರ. ಕಾರ್ಯದರ್ಶಿ ಸುನೀಲ್ ರೈ , ಪದಾಧಿಕಾರಿಗಳಾದ ದಿನೇಶ್ ರೈ ಕಳ್ಳಿಗೆ, ಪ್ರಕಾಶ್, ಹರೀಶ್ ಗಾಂಧಿನಗರ, ದಿನಕರ್ ಬಗಂಬಿಲ, ರಘುರಾಮ್ ಶೆಟ್ಟಿ, ಗಣೇಶ್ ಕಾಪಿಕಾಡು, ಅರುಣ್ ಗಾಂಧಿನಗರ ಮೊದಲಾದವರು ಉಪಸ್ಥಿತರಿದ್ದರು.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:13 pm
Mangalore Correspondent
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm