ಬ್ರೇಕಿಂಗ್ ನ್ಯೂಸ್
18-02-22 09:02 pm Source: Vijayakarnataka ಡಾಕ್ಟರ್ಸ್ ನೋಟ್
ಕಡಲೆಕಾಯಿ ಅಥವಾ ಕಡಲೆ ಬೀಜವನ್ನು ‘ಬಡವರ ಬಾದಾಮಿ’ ಎಂದೇ ಕರೆಯಲಾಗುತ್ತದೆ. ನಮ್ಮ ಭಾರತೀಯ ಅಡುಗೆ ಮನೆಗಳಲ್ಲಿ ಕಡಲೆಕಾಯಿಯನ್ನು ಬಳಸಿ ಅನೇಕ ಸಿಹಿ ಮತ್ತು ವಿವಿಧ ಖಾದ್ಯಗಳಿಗೆ ಬಳಸಲಾಗುತ್ತದೆ.
ಕಡಲೆಕಾಯಿಯಲ್ಲಿ ಪ್ರೋಟೀನ್, ಕೊಬ್ಬು ಮತ್ತು ಫೈಬರ್ ಸಮೃದ್ಧವಾಗಿದೆ. ಸಾಮಾನ್ಯವಾಗಿ ಕಡಲೆಕಾಯಿ ಕೊಬ್ಬನ್ನು ಹೊಂದಿದೆ. ಅದನ್ನು ‘ಉತ್ತಮ ಕೊಬ್ಬುಗಳು’ ಎಂದು ಕರೆಯಲಾಗುತ್ತದೆ. ಈ ರೀತಿಯ ಕೊಬ್ಬುಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ.
ಅಲ್ಲದೆ, ಕಾಡಲೆಕಾಯಿಯು ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕರವಾದ ಹೃದಯಕ್ಕೆ ಬಹಳ ಪ್ರಯೋಜನಕಾರಿ. ನಿಮ್ಮ ತೂಕ ಇಳಿಕೆಗೆ ಕಡಲೆಬೀಜ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇಷ್ಟೆಲ್ಲಾ ಪ್ರಯೋಜನಕಾರಿಯಾಗಿರುವ ಕಡಲೆಕಾಯಿಯ ಬೀಜದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ಕಡಲೆಕಾಯಿ ಏಕೆ ತಿನ್ನಬೇಕು?
ರಸ್ತೆಬದಿಯ ವ್ಯಾಪಾರಿಗಳು ಬೇಯಿಸಿದ ಅಥವಾ ಹುರಿದ ಕಡಲೆಕಾಯಿಯನ್ನು ವರ್ಷವಿಡೀ ಮಾರಾಟ ಮಾಡುತ್ತಾರೆ. ಇದೊಂದು ಜನಪ್ರಿಯವಾದ ಆಹಾರವಾಗಿದ್ದು, ಚಳಿಗಾಲದಲ್ಲಿ ಕಡಲೆಕಾಯಿ ಅಥವಾ ಕಡಲೆಬೀಜ ಸೇವನೆ ಮಾಡುವುದರಿಂದ ಬಹಳ ಪ್ರಯೋಜನಗಳನ್ನು ಪಡೆಯಬಹುದು.
ಕಡಲೆಬೀಜಗಳಲ್ಲಿ ಹೆಚ್ಚಿನ ಪ್ರೋಟೀನ್ಗಳು, ಉತ್ತಮ ಕೊಲೆಸ್ಟ್ರಾಲ್, ರಂಜಕ, ಖನಿಜಗಳು, ಸೂಕ್ಷ್ಮ ಮತ್ತು ಮ್ಯಾಕ್ರೋನ್ಯೂಟ್ರಿಯೆಂಟ್ಗಳನ್ನು ಹೊಂದಿರುತ್ತವೆ. ಇವು ನಮ್ಮನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುತ್ತದೆ. ಅಲ್ಲದೆ, ಕಡಲೆಕಾಯಿಯು ಬಾದಾಮಿ, ವಾಲ್ನಟ್ ಮತ್ತು ಗೋಡಂಬಿಗಳಂತೆ ದುಬಾರಿಯಲ್ಲ.
ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ
ನೀವು ತೂಕವನ್ನು ಕಳೆದುಕೊಳ್ಳಬೇಕು ಎಂದು ಬಯಸುತ್ತಿದ್ದರೆ ನಿಸ್ಸಂದೇಹವಾಗಿ ಕಡಲೆಕಾಯಿ ಬೀಜಗಳನ್ನು ನಿಮ್ಮ ಡಯಟ್ ಚಾರ್ಟ್ನಲ್ಲಿ ಸೇರಿಸಬಹುದು. ಇದು ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಏಕೆಂದರೆ ಕಡಲೆಕಾಯಿಯು ಹಸಿವಿನ ಕಡು ಬಯಕೆಯನ್ನು ನಿಗ್ರಹಿಸುತ್ತದೆ.
ಉತ್ತಮವಾದ ಕೊಬ್ಬು ಮತ್ತು ಕ್ಯಾಲೋರಿಗಳು ಕಡಲೆಕಾಯಿಯಲ್ಲಿ ಅಧಿಕವಾಗಿದ್ದರು ಕೂಡ ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ. ವಾಸ್ತವವಾಗಿ, ಕಡಲೆಕಾಯಿಯ ಸೇವನೆಯು ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಸ್ಥೂಲಕಾಯತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ.
ಕಡಲೆಕಾಯಿ ಕ್ಯಾಲೋರಿಯನ್ನು ಸುಡುತ್ತದೆ
ನೀವು ತೂಕವನ್ನು ಕಳೆದುಕೊಳ್ಳಬೇಕು ಎಂದು ಬಯಸುತ್ತಿದ್ದರೆ ನಿಸ್ಸಂದೇಹವಾಗಿ ಕಡಲೆಕಾಯಿ ಬೀಜಗಳನ್ನು ನಿಮ್ಮ ಡಯಟ್ ಚಾರ್ಟ್ನಲ್ಲಿ ಸೇರಿಸಬಹುದು. ಇದು ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಏಕೆಂದರೆ ಕಡಲೆಕಾಯಿಯು ಹಸಿವಿನ ಕಡು ಬಯಕೆಯನ್ನು ನಿಗ್ರಹಿಸುತ್ತದೆ.
ಉತ್ತಮವಾದ ಕೊಬ್ಬು ಮತ್ತು ಕ್ಯಾಲೋರಿಗಳು ಕಡಲೆಕಾಯಿಯಲ್ಲಿ ಅಧಿಕವಾಗಿದ್ದರು ಕೂಡ ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ. ವಾಸ್ತವವಾಗಿ, ಕಡಲೆಕಾಯಿಯ ಸೇವನೆಯು ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಸ್ಥೂಲಕಾಯತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ.
ಕಡಲೆಕಾಯಿ ಕ್ಯಾಲೋರಿಯನ್ನು ಸುಡುತ್ತದೆ
ಕಡಲೆಕಾಯಿಯಲ್ಲಿ ಪ್ರೋಟೀನ್ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನ ಹೆಚ್ಚಿನ ಅಂಶವು ಕ್ಯಾಲೋರಿ ಸುಡುವಿಕೆಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಕಡಲೆಕಾಯಿಗಳು ಕರಗದ ಆಹಾರದ ನಾರಿನ ಮೂಲವಾಗಿದೆ. ಇದು ತೂಕ ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ಕಡಲೆಕಾಯಿ ಸಂಜೆಯ ಕುರುಕಲು ತಿಂಡಿಗಳಲ್ಲಿ ಒಂದಾಗಿದೆ. ಇದು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುವ ವಿವಿಧ ಅಂಶಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವುದರಿಂದ, ನೀವು ಹೃದ್ರೋಗದ ಅಪಾಯವನ್ನು ಪಡೆಯುವುದಿಲ್ಲ.
ಕಡಲೆಕಾಯಿಯ ಬೀಜಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯ ತೊಂದರೆಗಳಿಂದ ಪಾರಾಗಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ವಿಶೇಷವಾಗಿ, ಕಡಲೆಕಾಯಿಯಲ್ಲಿ ಹಲವಾರು ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳಿವೆ. ಇವುಗಳಲ್ಲಿ ಮೆಗ್ನೀಸಿಯಮ್, ನಿಯಾಸಿನ್, ತಾಮ್ರ, ಒಲಿಕ್ ಆಮ್ಲಗಳಂತಹ ಉತ್ಕರ್ಷಣ ನಿರೋಧಕಗಳು ಸೇರಿವೆ.
ರಕ್ತದಲ್ಲಿನ ಸಕ್ಕರೆಯ ಮಟ್ಟ
ಕಡಲೆಕಾಯಿಯ ಬೀಜಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸಬಹುದು. ಏಕೆಂದರೆ, ಅವುಗಳ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ಮಧುಮೇಹಿಗಳಿಗೆ ಉತ್ತಮವಾದ ಆಯ್ಕೆಯಾಗಿದೆ. ಮಿತವಾಗಿ ಕಡಲೆಬೀಜಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು.
ಹಾಗೆಯೇ, 100 ಗ್ರಾಂ ಕಡಲೆಕಾಯಿಗಳಲ್ಲಿ 25.8 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದು ಉತ್ತಮ ಸಸ್ಯ ಆಧಾರಿತ ಪ್ರೋಟೀನ್ ಮೂಲವಾಗಿರುವುದರಿಂದ ಚಳಿಗಾಲದಲ್ಲಿ ಕಡಲೆಕಾಯಿ ಬೀಜಗಳನ್ನು ಸೇವನೆ ಮಾಡುವುದು ಸಾಕಷ್ಟು ಪ್ರಯೋಜನಕಾರಿಯಾಗಿದೆ.
Kadlekai Beeja Health Benefits In Kannada.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm