ಬ್ರೇಕಿಂಗ್ ನ್ಯೂಸ್
08-09-21 02:47 pm Shreeraksha, Boldsky ಡಾಕ್ಟರ್ಸ್ ನೋಟ್
ಮಸಾಲೆಯುಕ್ತ ಆಹಾರವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಆದರೆ ಅದಕ್ಕೆ ಸಂಬಂಧಿಸಿದ ತೊಂದರೆಗಳ ಬಗ್ಗೆಯೂ ನಿಮಗೆ ತಿಳಿದಿರುತ್ತದೆ. ಈ ಸ್ಪೈಸಿ ಆಹಾರವನ್ನು ಹೆಚ್ಚೆಚ್ಚು ತಿನ್ನುವುದರಿಂದ, ಸಾಮಾನ್ಯವಾಗಿ ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ. ಆದರೆ ನಿಮ್ಮ ಅಡಿಗೆಮನೆಗಳಲ್ಲಿರುವ ಇದೇ ಮಸಾಲೆಗಳು ಅಜೀರ್ಣ, ಅಸಿಡಿಟಿ, ವಾಯು ಮತ್ತು ಮಲಬದ್ಧತೆಯಂತಹ ವಿವಿಧ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು ಎಂಬುದು ನಿಮಗೆ ತಿಳಿದಿದೆಯಾ? ಅಂತಹ ಕೆಲವು ಪರಿಹಾರಗಳನ್ನು ನಾವಿಂದು ಹೇಳುತ್ತಿದ್ದೇವೆ, ಇದು ಮನೆಯಲ್ಲಿ ಕುಳಿತು ಈ ಸಮಸ್ಯೆಯಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.

1. ಜೀರಿಗೆ ಪುಡಿ:
ಇದನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಫೈಬರ್ ಸಮೃದ್ಧವಾಗಿರುವುದರಿಂದ ಜೀರಿಗೆ ಕೂಡ ಅಜೀರ್ಣವನ್ನು ನಿವಾರಿಸುತ್ತದೆ. ಜೀರಿಗೆಯನ್ನು ಹೇಗೆ ಸೇವಿಸುವುದು?: ಅಜೀರ್ಣದ ಪರಿಹಾರಕ್ಕಾಗಿ, ಒಂದು ಚಮಚ ಜೀರಿಗೆಯನ್ನು ಹುರಿದು, ತಣ್ಣಗಾಗಿಸಿ ಮತ್ತು ನುಣ್ಣಗೆ ರುಬ್ಬಿಕೊಳ್ಳಿ. ಪೇಸ್ಟ್ ಮಾಡಲು, ಅದಕ್ಕೆ ಜೇನುತುಪ್ಪ ಅಥವಾ ನೀರು ಸೇರಿಸಿ, ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

2. ಓಂಕಾಳು:
ದೊಡ್ಡಪತ್ರೆ ಅಜೀರ್ಣದಿಂದ ಉಂಟಾಗುವ ಗ್ಯಾಸ್ ಮತ್ತು ಅಸಿಡಿಟಿಗೆ ಚಿಕಿತ್ಸೆ ನೀಡುವ ಸಾಮಾನ್ಯ ಮತ್ತು ಜನಪ್ರಿಯ ಮನೆಮದ್ದುಗಳಲ್ಲಿ ಒಂದಾಗಿದೆ. ಹೊಟ್ಟೆ ನೋವು, ಕಿಬ್ಬೊಟ್ಟೆಯ ಸೆಳೆತ, ವಾಯುಭಾರವು ಡಿಸ್ಪೆಪ್ಸಿಯಾದ ಸಾಮಾನ್ಯ ಲಕ್ಷಣಗಳಾಗಿವೆ. ಆದ್ದರಿಂದ, ನೀವು ಊಟದ ನಡುವೆ ದೀರ್ಘ ಅಂತರವನ್ನು ಹೊಂದಿದ್ದರೆ, ಸಮಾರಂಭ ಅಥವಾ ಪಾರ್ಟಿಯಲ್ಲಿ ತಿನ್ನಲು ಸಾಧ್ಯವಾಗದಿದ್ದರೆ, ಈ ನೈಸರ್ಗಿಕ ಪರಿಹಾರವು ಅತ್ಯುತ್ತಮ ಆಯ್ಕೆಯಾಗಿದೆ.
ಸೇವನೆ ಹೇಗೆ?:
ಇದು ಥೈಮೋಲ್ ಎಂಬ ಸಾರಭೂತ ತೈಲವನ್ನು ಹೊಂದಿದ್ದು, ಇದು ಗ್ಯಾಸ್ಟ್ರಿಕ್ ರಸವನ್ನು ಬಿಡುಗಡೆ ಮಾಡುತ್ತದೆ ಮತ್ತು ಆ ಮೂಲಕ ಆಸಿಡಿಟಿಯನ್ನು ನಿವಾರಿಸುತ್ತದೆ. ಒಂದು ಕಪ್ ನೀರಿಗೆ ಒಂದು ಚಮಚ ಓಂಕಾಳು ಸೇರಿಸಿ, ನೀರಿನ ಪ್ರಮಾಣ ಅರ್ಧಕ್ಕೆ ಇಳಿಯುವವರೆಗೆ ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಆಸಿಡಿಟಿ ಉಂಟಾದಾಗ ಕುಡಿಯಿರಿ.

3. ಶುಂಠಿ:
ಅಸಿಡಿಟಿಯಿಂದಾಗಿ ನಿಮ್ಮ ಹೊಟ್ಟೆ ಉಬ್ಬಲು ಶುರುವಾಗಿದ್ದರೆ, ತಕ್ಷಣವೇ ಶುಂಠಿಯನ್ನು ಬಳಸಿ. ಶುಂಠಿಯ ಕಾರ್ಮಿನೇಟಿವ್ ಗುಣಲಕ್ಷಣಗಳು ಕರುಳಿನಲ್ಲಿರುವ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ವಾಯು ನಿವಾರಣೆಯನ್ನು ಮಾಡುತ್ತದೆ.
ಶುಂಠಿಯನ್ನು ಹೇಗೆ ಸೇವಿಸುವುದು?:
ಒಂದು ಸಣ್ಣ ತುಂಡು ಶುಂಠಿಯಿಂದ ರಸವನ್ನು ತೆಗೆದು, ಅದನ್ನು ಚಮಚದಲ್ಲಿ ಸೋಸಿಕೊಂಡು ಕುಡಿಯಿರಿ. ಇದು ನಿಮ್ಮ ಹೊಟ್ಟೆಯ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

4 ಏಲಕ್ಕಿ:
ಇದನ್ನು ನೈಸರ್ಗಿಕ ಬಾಯಿ ಫ್ರೆಶ್ನರ್ ಎಂದು ಕರೆಯಲಾಗುತ್ತದೆ. ಇದು ಸಾರಭೂತ ತೈಲಗಳನ್ನು ಹೊಂದಿದ್ದು, ಲವಣ ಗ್ರಂಥಿಗಳನ್ನು ಉತ್ತೇಜಿಸುತ್ತದೆ ಜೊತೆಗೆ ನಿಮ್ಮ ಹಸಿವನ್ನು ಸುಧಾರಿಸಿ, ಆಮ್ಲೀಯತೆಯಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ಸೇವನೆ ಹೇಗೆ?:
ನೀವು ಅಸಿಡಿಟಿ ಅನುಭವಿಸಿದಾಗಲೆಲ್ಲಾ ಎರಡು ಏಲಕ್ಕಿ ಕಾಳುಗಳನ್ನು ತೆಗೆದುಕೊಂಡು ಒರಟಾಗಿ ಪುಡಿಮಾಡಿ ನೀರಿನಲ್ಲಿ ಕುದಿಸಿ. ತಕ್ಷಣದ ಪರಿಹಾರ ಪಡೆಯಲು ಇದನ್ನು ತಣ್ಣಗಾಗಿಸಿ ಮತ್ತು ಕುಡಿಯಿರಿ.

5 ದಾಲ್ಚಿನ್ನಿ:
ದಾಲ್ಚಿನ್ನಿ ನೈಸರ್ಗಿಕ ಜೀರ್ಣಕಾರಿ ಸಾಧನವಾಗಿದೆ. ಇದನ್ನು ಸಾಮಾನ್ಯವಾಗಿ ಬಿರಿಯಾನಿ ಮತ್ತು ಕರಿಗಳಿಗೆ ರುಚಿಯನ್ನು ನೀಡಲು ಬಳಸುತ್ತೇವೆ. ಇದು ಅಜೀರ್ಣದಿಂದ ಉಂಟಾಗುವ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುವ ಮತ್ತು ಆಮ್ಲೀಯತೆಯನ್ನು ನಿವಾರಿಸುವ ಸಕ್ರಿಯ ಘಟಕಾಂಶವಾಗಿದೆ. ತಿಂದ ನಂತರ ನಿಮಗೆ ಅಸಿಡಿಟಿ ಸಮಸ್ಯೆ ಎದುರಾದರೆ, ದಾಲ್ಚಿನ್ನಿಯನ್ನು ಸೇವಿಸುವುದು ಜಾಣತನ.
ಸೇವನೆ ಹೇಗೆ?:
ಒಂದು ಕಪ್ ತಾಜಾ ದಾಲ್ಚಿನ್ನಿ ಚಹಾವನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ.

6. ಇಂಗು:
ಆಮ್ಲೀಯತೆ ಮತ್ತು ಹುಳಿ ತೇಗು ಚಿಕಿತ್ಸೆಗಾಗಿ ಇಂಗು ಬಳಸಿ. ಅಜೀರ್ಣವನ್ನು ತಪ್ಪಿಸಲು ಸುಲಭವಾದ ಮಾರ್ಗವೆಂದರೆ ನಿಮ್ಮ ಆಹಾರದಲ್ಲಿ ಅಸೆಫೆಟಿಡಾ ಅಂದರೆ ಇಂಗನ್ನು ಸೇರಿಸುವುದು. ಇದು ಆಹಾರಕ್ಕೆ ವಿಶಿಷ್ಟ ರುಚಿಯನ್ನು ನೀಡುವುದಲ್ಲದೆ, ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ಉರಿಯೂತ ನಿವಾರಕ, ಕಾರ್ಮಿನೇಟಿವ್ ಮತ್ತು ಜೀರ್ಣಕಾರಿ ಗುಣಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಗ್ಯಾಸ್ಟ್ರಿಕ್ ಜ್ಯೂಸ್ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಸೇವನೆ ಹೇಗೆ?:
ಶುಂಠಿ ಪುಡಿ ಮತ್ತು ಕಪ್ಪು ಉಪ್ಪನ್ನು ಒಂದು ಚಿಟಿಕೆ ಇಂಗಿನ ಜೊತೆ ಮಿಶ್ರಣ ಮಾಡಿ. ಊಟದ ನಂತರ ಒಂದು ಲೋಟ ನೀರಿನೊಂದಿಗೆ ಬೆರೆಸಿ, ಸೇವಿಸಿ, ಇದು ವಾಯು ಮತ್ತು ಅಜೀರ್ಣವನ್ನು ಕಡಿಮೆ ಮಾಡುತ್ತದೆ. ನೀವು ಒಂದು ಲೋಟ ಮಜ್ಜಿಗೆಯಲ್ಲಿ ಒಂದು ಚಿಟಿಕೆ ಇಂಗು ಬೆರೆಸಿ ಊಟದ ನಂತರ ಅದನ್ನು ಕುಡಿಯಬಹುದು.
30-08-26 10:09 pm
HK News Desk
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
31-08-26 01:28 pm
HK News Staffer
Mohan Bhagwat: ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಸ್ಲ...
30-08-26 02:41 pm
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
31-08-26 01:49 pm
HK News Staffer
ಮೊಬೈಲ್ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಜಗಳ ; ಕುಡಿ...
31-08-26 12:01 pm
ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತ...
31-08-26 09:51 am
ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರ...
29-08-26 01:02 pm
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am