ಬ್ರೇಕಿಂಗ್ ನ್ಯೂಸ್
25-12-21 01:12 pm Mangalore Correspondent ಸಿನಿಮಾ
ಮಂಗಳೂರು, ಡಿ.25 : ಗುಳಿ ಕೆನ್ನೆಯ ಚೆಲುವೆ, ನಟಿ ರಚಿತಾ ರಾಮ್ ಮಂಗಳೂರಿನ ಪೊಲೀಸರಲ್ಲಿ ಮಿಂಚು ಹರಿಸಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಕರೆಯಂತೆ, ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ನಟಿ ರಚಿತಾ ಪೊಲೀಸರ ಜೊತೆಗೆ ಬೆರೆತು ಹರಟಿದ್ದಾರೆ.
ದೇವಸ್ಥಾನ ಭೇಟಿ ಸೇರಿದಂತೆ ಖಾಸಗಿ ಕಾರ್ಯಕ್ರಮಕ್ಕೆಂದು ರಚಿತಾ ಮಂಗಳೂರಿಗೆ ಆಗಮಿಸಿದ್ದರು. ಪಬ್ಬಾಸ್ ನಲ್ಲಿ ಐಸ್ ಕ್ರೀಮ್ ತಿಂದು ಹೋಗೋಣ ಎಂದು ಲಾಲ್ ಬಾಗ್ ಬಂದಿದ್ರಂತೆ. ಅಷ್ಟೊತ್ತಿಗೆ ಕಮಿಷನರ್ ಶಶಿಕುಮಾರ್ ಫೋನ್ ಮಾಡಿದ್ದು, ಕಚೇರಿಗೆ ಬರುವಂತೆ ಹೇಳಿದ್ದಾರೆ. ಅದರಂತೆ, ಕಚೇರಿಗೆ ಬಂದ ನಟಿಯನ್ನು ಪೊಲೀಸರು ಮುತ್ತಿಕೊಂಡಿದ್ದಾರೆ.


ಸಿನಿಮಾದಲ್ಲಿ ನೋಡಿದ್ದ ಪೊಲೀಸರು ನಟಿಯನ್ನು ಕಾಣುತ್ತಲೇ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ನಟಿಯ ಅಕ್ಕ ಪಕ್ಕದಲ್ಲಿ ನಿಂತು ಥರಹೇವಾರಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಮಹಿಳಾ ಪೊಲೀಸ್ ಪೇದೆಯರು, ಕಮಿಷನರ್ ಕಚೇರಿಯ ಉದ್ಯೋಗಸ್ಥ ಸಿಬಂದಿ, ಪೊಲೀಸ್ ಅಧಿಕಾರಿಗಳೆಲ್ಲ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಇದೇ ವೇಳೆ, ಪೊಲೀಸರ ವತಿಯಿಂದ ಕಮಿಷನರ್ ಶಶಿಕುಮಾರ್ ರಚಿತಾ ರಾಮ್ ಅವರನ್ನು ಸನ್ಮಾನಿಸಿದರು. ಕರಾವಳಿಯ ಯಕ್ಷಗಾನದ ಕಿರೀಟವುಳ್ಳ ಸ್ಮರಣಿಕೆ, ಶಾಲು ಹೊದೆಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.



ಇದೇ ವೇಳೆ, ಮಾತನಾಡಿದ ನಟಿ ತಮ್ಮ ಚೆಲ್ಲು ಚೆಲ್ಲು ಮಾತುಗಳಿಂದಲೇ ಪೊಲೀಸರನ್ನು ಆಕರ್ಷಿಸಿದರು. ಏನೋ ಆಕಸ್ಮಿಕವಾಗಿ ಬಂದಿದ್ದೇನೆ. ಯಾವುದೇ ಮೇಕಪ್ ಮಾಡಿಕೊಂಡಿಲ್ಲ ಎಂದು ನಗುತ್ತಾ ಇಲ್ಲಿ ಬರೋದಿಕ್ಕೆ ಶಶಿ ಸರ್ ಕಾರಣ ಎಂದು ಹೇಳಿದರು. ನನಗೂ ಸಣ್ಣಂದಿನಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಆದರೆ ಈಡೇರಲಿಲ್ಲ. ಬದಲಿಗೆ ನಟಿಯಾಗಿದ್ದೇನೆ. ನಟಿಯಾಗಿ ಸಾಧಾರಣ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಪೊಲೀಸ್ ಅಧಿಕಾರಿಯಾಗುವ ಪಾತ್ರ ಇನ್ನೂ ಸಿಕ್ಕಿಲ್ಲ. ಅಂಥ ಉತ್ತಮ ಚಿತ್ರಕತೆ ಸಿಕ್ಕಿದರೆ ಮಾಡಬೇಕೆಂದಿದ್ದೇನೆ ಎಂದು ಹೇಳಿದರು.



ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಎಲ್ಲರೂ ಖುಷಿಯಿಂದಿರಿ. ಖುಷಿಯಿಂದ ಜೀವನ ಎಂಜಾಯ್ ಮಾಡಿ. ಇವತ್ತು ಹೀಗಿದ್ದೇವೆ, ನಾಳೆ ಹೇಗಿರುತ್ತೇವೋ ಗೊತ್ತಿಲ್ಲ. ಅದಕ್ಕಾಗಿ ಪಾಸಿಟಿವ್ ಆಗಿ ಯೋಚಿಸುತ್ತಾ ಖುಷಿಯಿಂದಿರಬೇಕು ಎನ್ನುತ್ತಾ ಪುನೀತ್ ಹೆಸರೇಳದೆ, ಅಂದಿನ ಘಟನೆಯನ್ನು ಮೆಲುಕು ಹಾಕಿದರು. ಮುಂದಿನ ವಾರ ತನ್ನ ಹೊಸ ಫಿಲ್ಮ್ ಬರ್ತಿದೆ, ಎಲ್ಲರೂ ನೋಡಿ. ಸಪೋರ್ಟ್ ಮಾಡಿ ಎನ್ನುತ್ತಾ ಬೈ ಬೈ ಹೇಳಿದರು.
Actress Rachita Ram in Mangalore, facilitated by Police Commissioner Shahi Kumar and staffs. Police personals thronged for selfies. Also Rachita thanked the Mangalore police department for their overwhelm love and care.
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm