ಬ್ರೇಕಿಂಗ್ ನ್ಯೂಸ್
04-09-21 11:43 am Source: News 18 Kannada ಸಿನಿಮಾ
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗನಿಗೆ ನಿನ್ನೆ ಅದ್ದೂರಿಯಾಗಿ ನಾಮಕರಣ ಮಾಡಲಾಯಿತು. ಮೊದಲಿಗೆ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಂತರ ಹೋಟೆಲ್ನಲ್ಲಿ ಹಿಂದೂ ಸಂಪ್ರದಾಯದಂತೆ ನಾಮಕರಣ ಶಾಶ್ತ್ರ ನೆರವೇರಿತು. ಚಿರು ಮಗನ ನಾಮಕರಣದಲ್ಲಿ ಅವರ ಸ್ನೇಹಿತರ ದಂಡೇ ಹರಿದು ಬಂದಿತ್ತು.
ಮಗು ಹುಟ್ಟಿ 10 ತಿಂಗಳ ನಂತರ ಮೇಘನಾ ರಾಜ್ ಕುಟುಂಬ ಹಾಗೂ ಚಿರು ಮನೆಯವರು ಸೇರಿ ಅದ್ದೂರಿಯಾಗಿ ನಾಮಕರಣ ಮಾಡಿದ್ದಾರೆ. ಹೌದು, ಚಿರು ಹಾಗೂ ಮೇಘನಾ ರಾಜ್ ಮಗನಿಗೆ ನಿನ್ನೆಯಿಂದ ಅಧಿಕೃತ ಹೆಸರು ಸಿಕ್ಕಿದೆ.


ಮೇಘನಾ-ಚಿರು ಮುದ್ದಿನ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಚಿರು ಮನೆಯಲ್ಲಿ ರಾಜನಂತೆ ಇದ್ದರಂತೆ. ಅದಕ್ಕೆ ಆ ರಾಜನ ಮಗನಿಗೆ ಯುವರಾಜ ಎಂಬ ಅರ್ಥ ಕೊಡುವ ರಾಯನ್ ಹೆಸರನ್ನು ಇಡಲಾಗಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.
ಮಗುವಿನ ರೂಪದಲ್ಲಿ ಅಣ್ಣನೇ ಬಂದ ಎಂದು ನಂಬಿರುವ ಧ್ರುವ ಸರ್ಜಾ ಹಾಗೂ ಕುಟುಂಬದವರೂ ಖುಷಿಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಗು ಹುಟ್ಟಿದ ಕೂಡಲೇ ಧ್ರುವಾ ಸರ್ಜಾ ದುಬಾರಿ ಬೆಲೆಯ ತೊಟ್ಟಿಲನ್ನು ಖರೀದಿಸಿದ್ದರು.

ಇನ್ನು ಸ್ಯಾಂಡಲ್ವುಡ್ನಲ್ಲಿ ಚಿರು ಸರ್ಜಾ ಅವರಿಗೆ ತಮ್ಮದೇ ಆದ ಸ್ನೇಹಿತರ ಬಳವಿತ್ತು. ಒಳ್ಳೆಯದಿರಲಿ, ಕೆಟ್ಟದಿರಲಿ ಈ ಎಲ್ಲ ಸ್ನೇಹಿತರು ಇದರಲ್ಲಿ ಭಾಗಿಯಾಗಿರುತ್ತಿದ್ದರು.
ನಿನ್ನೆಯಯೂ ಸಹ ಚಿರು ಅವರ ಸ್ನೇಹಿತರು ಅವರ ಮಗನ ನಾಮಕರಣದಲ್ಲಿ ಭಾಗಿಯಾಗಿ, ರಾಯನ್ಗೆ ಆಶೀರ್ವದಿಸಿದ್ದಾರೆ. ಇದಲ್ಲಿ ಪನ್ನಾಗಭರಣ ಸಹ ಒಬ್ಬರು.


ಮಗನಿಗೆ ರಾಯನ್ ಎಂದು ಹೆಸರು ಇಡಲೇಬೇಕೆಂದು ಮನಸ್ಸಿನಲ್ಲಿ ಇತ್ತು. ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥ ಎಂದು ಮೇಘನಾ ರಾಜ್ ನಿನ್ನೆ ನಾಮಕರಣದ ನಂತರ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 01:03 pm
HK News Staffer
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm