ಬ್ರೇಕಿಂಗ್ ನ್ಯೂಸ್
28-08-21 02:31 pm Filmbeat: Shruthi GK ಸಿನಿಮಾ
ಚೀನಾದ ಖ್ಯಾತಿ ನಟಿ ಜೆಂಗ್ ಶುವಾಂಗ್ ಗೆ ತೆರಿಗೆ ವಂಚನೆ ಆರೋಪದ ಮೇಲೆ 299 ಮಿಲಿಯನ್ ಯುವಾನ್ (46 ಮಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ. ನಟಿ ಮನರಂಜನಾ ಕ್ಷೇತ್ರದಿಂದ ಭಾರಿ ಪ್ರಮಾಣದಲ್ಲಿ ಹಣ ಸಂಪಾದಿಸುತ್ತಿದ್ದರೂ ತೆರಿಗೆ ಕಟ್ಟದೆ ವಂಚನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ದೊಡ್ಡ ಮೊತ್ತದ ದಂಡ ವಿಧಿಸಿದೆ. ಅಷ್ಟೆಯಲ್ಲ ಎಲ್ಲಾ ವಿಧದ ಕಾರ್ಯಕ್ರಮಗಳಿಂದ ನಟಿ ಜಿಂಗ್ ಶುವಾಂಗ್ ಅವರಿಗೆ ನಿಷೇಧ ಹೇರಲಾಗಿದೆ.
ನ್ಯಾಷನಲ್ ರೇಡಿಯೋ ಮತ್ತು ಟೆಲಿವಿಷನ್ ಅಡ್ಮಿನಿಸ್ಟ್ರೇಷನ್ ಎಲ್ಲಾ ಪ್ರಸಾರಕರು ಮತ್ತು ವಿಡಿಯೋ ಪ್ಲಾಟ್ ಫಾರ್ಮ್ಸ ಗಳಲ್ಲಿ ಯಾವುದೇ ಪ್ರದರ್ಶನಗಳಲ್ಲಿ ಜಿಂಗ್ ಶುವಾಂಗ್ ಭಾಗಿ ನಿಷೇಧಿಸಲಾಗಿದೆ ಎಂದು ಚೀನಾದ ರಾಜ್ಯ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಜೊತೆಗೆ ಈಗಾಗಲೇ ನಟಿಸಿರುವ ಸಿನಿಮಾಗಳನ್ನು ಇನ್ಮುಂದೆ ಪ್ರಸಾರಮಾಡುವಂತ್ತಿಲ್ಲ ಎಂದು ಸೂಚಿಸಿದೆ.
ಶಾಂಘೈ ತೆರಿಗೆ ಪ್ರಾಧಿಕಾರ ಏಪ್ರಿಲ್ ತಿಂಗಳಿಂದ ಜೆಂಗ್ ಶುವಾಂಗ್ ಅವರನ್ನು ತೆರಿಗೆ ವಿಚಾರವಾಗಿ ಪ್ರಶ್ನೆ ಮಾಡುತ್ತಾ ಬಂದಿದೆ. ಆಕೆಯ ಮಾಜಿ ಪತಿ ಜಾಂಗ್ ಹೆಂಗ್ ಈ ಬಗ್ಗೆ ಬಹಿರಂಗ ಪಡಿಸಿದ ಬಳಿಕ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಅಧಿಕಾರಿಗಳು ಭಾರಿ ಪ್ರಮಾಣದ ದಂಡ ವಿಧಿಸಿದ್ದಾರೆ. 2019 ಮತ್ತು 2020 ಅವಧಿಯಲ್ಲಿ ತೆರಿಗೆ ಉಲ್ಲಂಘಸಿದ ಆರೋಪದಿಂದ 30 ವರ್ಷದ ನಟಿ ಜೆಂಗ್ ಶುವಾಂಗ್ ದಂಡತೆತ್ತಿದ್ದಾರೆ.
2009ರಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದ ಜೆಂಗ್ ಚೀನಾದಲ್ಲಿ ಭಾರಿ ಪ್ರಸಿದ್ಧಿ ಗಳಿಸಿದ್ದರು. ಬಳಿಕ ಜನಪ್ರಿಯ ಸರಣಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ಮುಂದೆ ಜಿಂಗ್ ಗೆ ಯಾವುದೇ ಅವಕಾಶ ನೀಡದಂತೆ ನಿರ್ಬಂಧ ಹೇರಲಾಗಿದೆ.
ಈ ಹಿಂದೆ ನಟಿ ಜೆಂಗ್ ಬಾಡಿಗೆ ತಾಯ್ತನದ ಹಗರಣದಿಂದಾಗಿ ಅಂತರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದ್ದರು. ಸಿಎನ್ ಎನ್ ವರದಿ ಪ್ರಕಾರ ಜೆಂಗ್ ಶುವಾಂಗ್ ಮತ್ತು ಮಾಜಿ ಪತಿ ಜಾಂಗ್ ಹೆಂಗ್ ಇಬ್ಬರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಇಬ್ಬರನ್ನು ನೇಮಕ ಮಾಡಿಕೊಂಡಿದ್ದರು. ಮಕ್ಕಳಾದ ಬಳಿಕ ನಟಿ ಜೆಂಗ್ ಶುವಾಂಗ್ ಪತಿ ಹಾಂಗ್ ಹೆಂಗ್ ಮತ್ತು ಇಬ್ಬರು ಮಕ್ಕಳನ್ನು ಯು ಎಸ್ ನಲ್ಲಿ ಬಿಟ್ಟಿದ್ದಾರೆ ಎಂದು ಮಾಜಿ ಪತಿ ಆರೋಪ ಮಾಡಿದ್ದರು.
ಚೀನಾದ ಹೊಸ ಸೈಬರ್ ನಿಯಂತ್ರಕ ನಿಯಾಮವಳಿಗಳನ್ನು ಶುಕ್ರವಾರ (ಆ.27) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸೆಲೆಬ್ರಿಟಿಗಳ ರ್ಯಾಂಕಿಂಗ್ ಪಟ್ಟಿಯನ್ನು ನಿಷೇಧಮಾಡಲಾಗಿದೆ. ಜೊತೆಗೆ ಸೆಲೆಬ್ರಿಟಿ ಫ್ಯಾನ್ ಕ್ಲಬ್ ಮತ್ತು ಮ್ಯಾನೇಜೆ ಮೆಂಟ್ ಏಜೆನ್ಸಿ ಗಳ ಮೇಲು ನಿಯಂತ್ರಣ ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ. ವಿಡಿಯೋ ಸ್ಟ್ರೀಮಿಂಗ iQiyi ಗುರುವಾರ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ.
(Kannada Copy of Filmbeat Kannada)
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 02:10 pm
Mangalore Correspondent
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm