ಬ್ರೇಕಿಂಗ್ ನ್ಯೂಸ್
04-08-21 11:36 am Headline Karnataka News Network ಸಿನಿಮಾ
ನವದೆಹಲಿ, ಆಗಸ್ಟ್ 4: ಖ್ಯಾತ ರ್ಯಾಪ್ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಅವರ ಪತ್ನಿ ಶಾಲಿನ ತಲ್ವಾರ್ ತಮ್ಮ ಪತಿ ಕೌಟುಂಬಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತಮ್ಮ ದೂರಿನಲ್ಲಿ ಹನಿ ಸಿಂಗ್ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 28 ರೊಳಗೆ ಉತ್ತರ ನೀಡುವಂತೆ ಕೋರ್ಟ್ ಹನಿ ಸಿಂಗ್ಗೆ ನೋಟಿಸ್ ನೀಡಿದೆ.
ಶಾಲಿನಿ ತಲ್ವಾರ್ ನೀಡಿರುವ ದೂರಿನಲ್ಲಿ ಹನಿ ಸಿಂಗ್ ವಿರುದ್ಧ ಸಾಕಷ್ಟು ಆರೋಪಗಳ ಪಟ್ಟಿಯೇ ಇದೆ. ನನ್ನ ಮೇಲೆ ಹನಿ ಸಿಂಗ್ ಹಲವಾರು ಬಾರಿ ದೈಹಿಕ ಹಲ್ಲೆ ಮಾಡಿದ್ದಾರೆ. ಮಾನಸಿಕ ಕಿರುಕುಳ ನೀಡಿದ್ದಾರೆ. ಹನಿ ಸಿಂಗ್ ಸಾಕಷ್ಟು ಹಣ ಸಂಪಾದಿಸಿದ್ದಾರೆ. ಹಾಡುಗಳು, ಶೋಗಳು, ರಾಯಲ್ಟಿ ರೂಪದಲ್ಲೇ ಅವರಿಗೆ ತಿಂಗಳಿಗೆ 4 ಕೋಟಿ ರೂ. ಸಂಪಾದನೆ ಆಗುತ್ತಿತ್ತು. ಆ ಸಮಯದಲ್ಲಿ ಅವರು ಡ್ರಗ್ಸ್, ಮದ್ಯಪಾನ, ಸಂವರ್ಧನ ಔಷಧಗಳಿಗೆ ದಾಸರಾಗಿದ್ದರು. ಹನಿ ಸಿಂಗ್ ದುರಾಹಂಕಾರಿ ಮತ್ತು ಕೆಟ್ಟದಾಗಿ ಬೈಯುತ್ತಿದ್ದರು. ಅನೇಕ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದರು' ಎಂದು ತಿಳಿಸಿದ್ದಾರೆ.





ಆಗಸ್ಟ್ 3ರಂದು ದೂರು ದಾಖಲಾಗಿದ್ದು, ಸದ್ಯ ಹನಿ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ, ಶಾಲಿನಿ ಅವರ ಜಂಟಿ ಖಾತೆಗಳಿರುವ ಯಾವುದೇ ಆಸ್ತಿಯನ್ನು ಹನಿ ಸಿಂಗ್ ಮಾರಾಟ ಮಾಡದಂತೆ ನ್ಯಾಯಾಲಯವು ಆದೇಶ ನೀಡಿದೆ ಎಂಬ ಮಾಹಿತಿಯೂ ಸಿಕ್ಕಿದೆ.
38ರ ಹರೆಯದ ಹನಿ ಸಿಂಗ್, ಯೋ ಯೋ ಹನಿ ಸಿಂಗ್ ಅಂತಲೇ ಫೇಮಸ್. 2011ರಲ್ಲಿ ಶಾಲಿನಿ ತಲ್ವಾರ್ ಅವರನ್ನು ಹನಿ ಸಿಂಗ್ ಮದುವೆ ಆಗಿದ್ದರು. 2006ರಲ್ಲಿ ವೃತ್ತಿ ಜೀವನ ಆರಂಭಿಸಿದ ಹನಿ ಸಿಂಗ್, ಆರಂಭದ 10 ವರ್ಷ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದರು. ಅವರ ಮ್ಯೂಸಿಕ್ ವಿಡಿಯೋ ಆಲ್ಭಂಗಳು ಸಖತ್ ಕ್ರೇಜ್ ಹುಟ್ಟುಹಾಕಿದ್ದವು. ತದನಂತರ ಅವರ ಖ್ಯಾತಿ ನಿಧಾನವಾಗಿ ಕಮ್ಮಿ ಆಗುತ್ತ ಹೋಯಿತು. ಆ ಸಂದರ್ಭದಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿಬಂದಿತ್ತು. ಸದ್ಯ ಪತ್ನಿಯಿಂದ ದಾಖಲಾಗಿರುವ ಈ ದೂರಿಗೆ ಹನಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು.
The wife of singer Hirdesh Singh, who goes by the stage name Yo Yo Honey Singh, has approached a Delhi court alleging physical, mental and emotional abuse at the hands of her husband.
09-04-26 03:37 pm
HK News Staffer
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 01:03 pm
HK News Staffer
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm