ಬ್ರೇಕಿಂಗ್ ನ್ಯೂಸ್
20-03-26 09:49 pm HK News Staffer ಸಿನಿಮಾ
ಬೆಂಗಳೂರು, ಮಾರ್ಚ್ 20: ಕಾಂತಾರ ಸಿನಿಮಾದಿಂದ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ನಟ ರಿಷಬ್ ಶೆಟ್ಟಿ ಯುಗಾದಿ ದಿನವೇ ಹೊಸ ಸುದ್ದಿ ಕೊಟ್ಟಿದ್ದಾರೆ. ‘ಚಾಪ್ಟರ್ 2’ ಎಂದು ಪೋಸ್ಟ್ ಮಾಡಿ ಅಚ್ಚರಿ ಸೃಷ್ಟಿಸಿದ್ದಾರೆ. ಇದೇ ವೇಳೆ, ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾ ಖಾತೆಯಿಂದ ಹೊಂಬಾಳೆ ಫಿಲ್ಮ್ಸ್ ಹೆಸರನ್ನು ಅನ್ಫಾಲೋ ಮಾಡಿ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ.
ಕಾಂತಾರ ಮೊದಲ ಚಿತ್ರ ಬಂದ ಬಳಿಕ 'ಕಾಂತಾರ: ಚಾಪ್ಟರ್ 1’ ಸಿನಿಮಾ ಮಾಡಿದ್ದು ಭಾರೀ ಹೆಸರು ಮತ್ತು ಗಳಿಕೆಯನ್ನೂ ಮಾಡಿತ್ತು. ಇದೀಗ ರಿಷಬ್ ಅವರು ಯುಗಾದಿ ದಿನವೇ ‘ಚಾಪ್ಟರ್ 2’ ಎಂದು ರಿಷಬ್ ಘೋಷಣೆ ಮಾಡಿದ್ದಲ್ಲದೆ ತನ್ನದೇ ಬ್ಯಾನರಿನಡಿ ಸಿನಿಮಾ ಮಾಡುತ್ತಾರೆಯೇ ಎಂಬ ಶಂಕೆಗೀಡು ಮಾಡಿದ್ದಾರೆ.
ಇಲ್ಲಿ ರಿಷಬ್ ‘ಚಾಪ್ಟರ್ 2’ ಘೋಷಣೆ ಮಾಡಿದ್ದಕ್ಕಿಂತಲೂ ಹೊಂಬಾಳೆ ಫಿಲಂಸನ್ನು ಅನ್ ಫಾಲೋ ಮಾಡಿದ್ದು ಹೆಚ್ಚು ಚರ್ಚೆ ಹುಟ್ಟುಹಾಕಿದೆ. ಯಾಕಂದ್ರೆ, ‘ಕಾಂತಾರ’ ಚಿತ್ರ ರಿಷಬ್ ಶೆಟ್ಟಿಯದ್ದಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದು ನಿರ್ಮಾಣ ಹೊಣೆ ಹೊತ್ತ ಹೊಂಬಾಳೆ ಫಿಲ್ಮ್ಸ್ ತಂಡ. ಆದರೆ, ಇದೀಗ ‘ಚಾಪ್ಟರ್ 2’ ಅಂತ ಸುಳಿವು ಕೊಟ್ಟು ಹೊಂಬಾಳೆ ತಂಡವನ್ನು ಅನ್ ಫಾಲೋ ಮಾಡಿದ್ದು ಹೊಸ ಚಿತ್ರಕ್ಕೆ ನಿರ್ಮಾಣದ ಹೊಣೆಯನ್ನು ಬೇರೆಯವರಿಗೆ ಕೊಡುತ್ತಾರಾ, ತಾವೇ ಮಾಡುತ್ತಾರೆಯೇ ಎಂಬ ಸಂಶಯ ಹುಟ್ಟಿಸಿದೆ.
ಆದರೆ ಪೋಸ್ಟ್ ನಲ್ಲಿ ಎಲ್ಲಿಯೂ ‘ಕಾಂತಾರ: ಚಾಪ್ಟರ್ 2’ ಎಂದು ಹೇಳಿಲ್ಲ. ಆದರೆ ಕಾಂತಾರ ಚಿತ್ರದ್ದೇ ಚಾಪ್ಟರ್ 2 ಎನ್ನುವ ಮಾತನ್ನು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೇ ವೇಳೆ, ರಿಷಬ್ ಅವರು ಇನ್ಸ್ಟಾದಲ್ಲಿ ‘ಕಾಂತಾರ’ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಖಾತೆಗಳನ್ನು ಅನ್ಫಾಲೋ ಮಾಡಿದ್ದಾರೆ. ಹೀಗಾಗಿ ರಿಷಬ್ ಯಾವ ಅರ್ಥದಲ್ಲಿ ಈ ಟಾಂಗ್ ಕೊಟ್ಟಿದ್ದಾರೆಂದು ಗೊಂದಲವೂ ಸೃಷ್ಟಿಯಾಗಿದೆ.
17-05-26 08:55 pm
HK News Staffer
ವಿಜಯಪುರದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯೇ ಸಮಾಧಿ...
15-05-26 10:30 pm
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
ಹಿಜಾಬ್ಗೆ ಗ್ರೀನ್ ಸಿಗ್ನಲ್; ಮತ್ತೆ ಭುಗಿಲೆದ್ದ ವಿವ...
14-05-26 10:19 am
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
16-05-26 10:13 pm
HK News Desk
ಗುಡುಗು - ಮಿಂಚಿನ ಬಿರುಗಾಳಿಗೆ ಉತ್ತರ ಪ್ರದೇಶದಲ್ಲಿ...
16-05-26 02:01 pm
ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ NEET ಪರೀಕ್ಷೆ...
15-05-26 04:16 pm
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ; ಮಿತವ್ಯ...
15-05-26 08:54 am
ಕೇರಳಕ್ಕೆ ವಿಡಿ ಸತೀಶನ್ ಹೊಸ ಮುಖ್ಯಮಂತ್ರಿ ; ರಾಹುಲ್...
14-05-26 12:36 pm
16-05-26 09:19 pm
HK News Staffer
ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ದೇಶದಲ್ಲೇ ಮೊದಲ...
16-05-26 09:16 pm
ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿ...
16-05-26 07:22 pm
ಮಂಗಳೂರು ಜೈಲಿನಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ...
16-05-26 01:13 pm
ಉಳ್ಳಾಲದಲ್ಲಿ ಫಿಶ್ ಮೀಲ್ ಕ್ಯಾಂಟರ್ ಆಟಾಟೋಪ ; ರಸ್ತೆ...
14-05-26 10:48 pm
17-05-26 09:10 pm
HK News Staffer
ಕೋಲಾರ; ಕೃಷಿ ಹೊಂಡದಲ್ಲಿ ಈಜಲು ಹೋಗಿ ತಂದೆ ಮತ್ತು ಇಬ...
17-05-26 08:41 pm
ಕೊಡಚಾದ್ರಿ ಬೆಟ್ಟದಿಂದ ಮರಳುತ್ತಿದ್ದ ಪ್ರವಾಸಿಗರ ಜೀಪ...
17-05-26 08:14 pm
ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ; ಎಸಿ ಕೋಚ...
17-05-26 05:51 pm
ಮಂಗಳೂರಿನಲ್ಲಿ ಭೀಕರ ಲಿಫ್ಟ್ ದುರಂತ; ಲಿಫ್ಟ್ ನಲ್ಲಿ...
17-05-26 05:49 pm