ಬ್ರೇಕಿಂಗ್ ನ್ಯೂಸ್
19-08-23 01:49 pm Source: News18 Kannada ಸಿನಿಮಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಮಾರ್ಟಿನ್ ಸಿನಿಮಾದ ಹೊಸ ವಿಚಾರ ಹೊರ ಬಿದ್ದಿದೆ. ಆ್ಯಕ್ಷನ್ ಮಾಸ್ಟರ್ ರವಿ ವರ್ಮ ಈ ಒಂದು ವಿಷಯ ಹೇಳಿಕೊಂಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ಗಳನ್ನ ಬರೋಬ್ಬರಿ 30ಕ್ಕೂ ಹೆಚ್ಚು ದಿನ ಚಿತ್ರೀಕರಿಸಿರೋ ವಿಷಯ ಗೊತ್ತೇ ಇದೆ.
ಆದರೆ ಇದೇ ಸಿನಿಮಾದ ಕೊನೆಯ ದೃಶ್ಯಗಳಿಗೆ ಮೂವರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ. ಟಾಲಿವುಡ್ನ ರಾಮ್-ಲಕ್ಷ್ಮಣ್ ಒಂದಷ್ಟು ದೃಶ್ಯಗಳನ್ನ ಡೈರೆಕ್ಟರ್ ಮಾಡಿದ್ದಾರೆ. ಉಳಿದ ಎರಡು ಚೇಜಿಂಗ್ ದೃಶ್ಯಗಳನ್ನ ಕನ್ನಡದ ಸಾಹಸ ನಿರ್ದೇಶಕ ರವಿ ವರ್ಮ ಅವರೇ ಮಾಡಿದ್ದಾರೆ.

ಈ ಎರಡೂ ಚೇಜಿಂಗ್ ದೃಶ್ಯಗಳಲ್ಲಿ ಒಂದೇ ಒಂದು ದೃಶ್ಯಕ್ಕೆ ಹೆಚ್ಚು ಕಡಿಮೆ ೧೦ ಕೋಟಿ ಖರ್ಚಾಗಿದೆ. ಈ ಒಂದು ದೃಶ್ಯಕ್ಕೆ ದುಬಾರಿ ಕಾರುಗಳಾ ಬಳಕೆ ಆಗಿದೆ. ಟ್ರಕ್ಗಳ ಉಪಯೋಗಿಸಿದ್ದೇವೆ. ವಿಶೇಷ ಅನಿಸೋ ಸಾಹಸಗಳೆಲ್ಲವನ್ನೂ ಇಲ್ಲಿ ಮಾಡಿರೋದಾಗಿಯೂ ರವಿ ವರ್ಮ ಹೇಳಿಕೊಂಡಿದ್ದಾರೆ.

ಮಾರ್ಟಿನ್ ಸಿನಿಮಾದಲ್ಲಿ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯ
ಈ ಒಂದು ಮಾತನ್ನ ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ಒಪ್ಪಿಕೊಳ್ತಾರೆ. ತಮ್ಮ ಸಿನಿಮಾದ ಆ್ಯಕ್ಷನ್ ದೃಶ್ಯಗಳು ಬೇರೆ ಲೆವಲ್ಗೆ ಇವೆ ಅನ್ನೊದು ಇವರ ಅಭಿಪ್ರಾಯ ಅಂತಲೂ ಹೇಳಬಹುದು. ಮಾರ್ಟಿನ್ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಬಗ್ಗೆ ಇನ್ನಿಲ್ಲದಂತೆ ಕುತೂಹಲ ಇದೆ.
ಸಿನಿಮಾದ ಮೊದಲ ಟೀಸರ್ ಕೂಡ ಈ ಒಂದು ನಂಬಿಕೆಯನ್ನ ಈಗಾಗಲೇ ಹೆಚ್ಚು ಮಾಡಿದೆ. ಮೂರು ಸಾಹಸ ನಿರ್ದೇಶಕರ ಕೆಲಸದ ಈ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೇಜಾನ್ ಆ್ಯಕ್ಷನ್ ಮಾಡಿದ್ದಾರೆ. ಸಾಹಸ ನಿರ್ದೇಶಕ ರವಿ ವರ್ಮ ಅವರ ಸಾಹಸಗಳ ಖದರ್ ಬೇರೇನೆ ಇದೆ.

ಮಾರ್ಟಿನ್ ಲುಕ್ಗೆ ವಾಪಾಸ್ ಆದ ಆ್ಯಕ್ಷನ್ ಪ್ರಿನ್ಸ್
ಇವರ ವಿಶೇಷ ಸಾಹಸಗಳ ಜೊತೆಗೆ ಟಾಲಿವುಡ್ನ ರಾಮ್-ಲಕ್ಷ್ಮಣ್ ಅವರ ಸಾಹಗಳೂ ಸಾಥ್ ಕೊಟ್ಟಂತಿವೆ. ಹಾಗಾಗಿಯೇ ಮಾರ್ಟಿನ್ ಸಿನಿಮಾದಲ್ಲಿ ಹೈವೋಲ್ಟೇಜ್ ಸಾಹಸಗಳನ್ನ ನಿರೀಕ್ಷೆ ಮಾಡಬಹುದಾಗಿದೆ.
ಚಿತ್ರದ ಬಾಕಿ ಉಳಿದ ಹಾಡಿನ ಚಿತ್ರೀಕರಣ ಇನ್ನೇನು ಶುರು ಆಗಬೇಕಿದೆ. ನಾಯಕ ನಟ ಧ್ರುವ ಸರ್ಜಾ ಅವರು ವಾಪಸ್ ಮಾರ್ಟಿನ್ ಲುಕ್ಗೆ ಬಂದಿದ್ದಾರೆ.
ಇನ್ನೇನು ಉಳಿದಿರೋ ಪ್ಯಾಚ್ ವರ್ಕ್ ಕೂಡ ನಡೆಬೇಕಿದೆ. ಉಳಿದಂತೆ ಮಾರ್ಟಿನ್ ಸಿನಿಮಾ ಕನ್ನಡದ ಮತ್ತೊಂದು ಬಿಗ್ ಬಜೆಟ್ನ ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ. ನಿರೀಕ್ಷೆ ಕೂಡ ಡಬಲ್ ಟ್ರಿಪಲ್ ಆಗಿಯೇ ಇದೆ.
Sandalwood Action Prince Dhruva Sarja Acted Martin Latest Updates.
10-07-26 10:12 pm
HK News Staffer
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
10-07-26 10:46 pm
HK News Desk
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
10-07-26 05:25 pm
HK News Staffer
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
10-07-26 10:14 pm
HK News Staffer
ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮ...
10-07-26 08:22 pm
ರಿವರ್ಸ್ ಮಾಡುವಾಗ ನಿಯಂತ್ರಣ ತಪ್ಪಿ ತೋಡಿಗೆ ಉರುಳಿ ಬ...
10-07-26 05:29 pm
ರೆಡ್ ಅಲರ್ಟ್; ರಜೆ ಆದೇಶ ಪಾಲಿಸದ ಹತ್ತಕ್ಕೂ ಹೆಚ್ಚು...
10-07-26 03:25 pm
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾ...
10-07-26 02:22 pm