ಬ್ರೇಕಿಂಗ್ ನ್ಯೂಸ್
17-08-23 03:08 pm Source: News18 Kannada ಸಿನಿಮಾ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಇತ್ತೀಚೆಗೆ ಕೆಬಿಸಿ 15ನಲ್ಲಿ ಹೊಸ ವಿಚಾರವೊಂದನ್ನು ಶೇರ್ ಮಾಡಿದ್ದಾರೆ. ಕೌನ್ ಬನೇಗಾ ಕರೋಡ್ಪತಿ 15ರಲ್ಲಿ ಅಮಿತಾಭ್ ಬಚ್ಚನ್ ಅವರು ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿಕೊಂಡರು. ಬುಧವಾರ ರಾತ್ರಿ ಪ್ರಸಾರವಾದ ಎಪಿಸೋಡ್ನಲ್ಲಿ ಅಮಿತಾಭ್ ಬಚ್ಚನ್ ಅವರು ಕಪಿಲ್ ದೇವ್ ಎಂಬ ಸ್ಪರ್ಧಿ ಜೊತೆಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರು ಸ್ಪರ್ಧಿಯಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.
ಇದರ ಮಧ್ಯೆ ಮೈ ಲೈಫ್ ಇನ್ ಡಿಸೈನ್ ಎನ್ನುವುದು ಯಾರ ಪತ್ನಿ ಬರೆದ ಪುಸ್ತಕ ಎಂದು ಕೇಳಿದ್ದಾರೆ. ಉತ್ತರದಲ್ಲಿ ಸಚಿನ್ ತೆಂಡುಲ್ಕರ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಚೇತನ್ ಭಗತ್ ಆಗಿತ್ತು. ಸ್ಪರ್ಧಿ ತಕ್ಷಣದೇ ಶಾರುಖ್ ಖಾನ್ ಎಂದು ಉತ್ತರಿಸಿದ್ದಾರೆ. ಅದನ್ನು ಮೆಚ್ಚಿದ ಅಮಿತಾಭ್ ಬಚ್ಚನ್ ಅವರು ಈ ಪುಸ್ತಕದ ಬಗ್ಗೆ ವಿವರಿಸಿದರು. ನಂತರ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದರು. ನಾನು ಗೌರಿ ಖಾನ್ ಅವರ ಇಂಟೀರಿಯರ್ ಡಿಸೈನ್ಗಳನ್ನು ನೋಡಿದ್ದೇನೆ. ಇತ್ತೀಚೆಗೆ ನಾನು ಶಾರುಖ್ ಖಾನ್ ಅವರೊಂದಿಗೆ ಶೂಟಿಂಗ್ ಮಾಡುತ್ತಿದ್ದೆ. ಮಾತನಾಡುತ್ತಾ ನಾನು ಶಾರುಖ್ ಅವರ ವ್ಯಾನಿಟಿ ವ್ಯಾನ್ ಒಳಗೆ ಹೋದೆ.


ಅದನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಲಾಗಿತ್ತು. ಅಲ್ಲಿ ಟಿವಿ, ಸ್ಲೈಡಿಂಗ್ ಸೋಫಾ, ಕಿಚನ್, ಹಾಗೂ ಇತರ ಎಲ್ಲ ವ್ಯವಸ್ಥೆಗಳಿದ್ದವು. ಈ ವ್ಯಾನ್ ಗೌರಿ ಡಿಸೈನ್ ಮಾಡಿದ್ದು ಎಂದಿದ್ದರು ಶಾರುಖ್ ಖಾನ್. ನಾನು ನಿಮಗಾಗಿ ಒಂದು ಡಿಸೈನ್ ಮಾಡಲು ಹೇಳುತ್ತೇನೆ ಎಂದು ಶಾರುಖ್ ನನಗೆ ಹೇಳಿದ್ದರು. ಆದರೆ ಇನ್ನೂ ಬಂದಿಲ್ಲ ಎಂದು ಜೋರಾಗಿ ನಕ್ಕಿದ್ದಾರೆ ಬಿಗ್ ಬಿ. ಗೌರಿ ಖಾನ್ ಅವರ ಪುಸ್ತಕ ಈ ವರ್ಷ ಆರಂಭದಲ್ಲಿ ಬಿಡುಗಡೆಯಾಯಿತು.


ಈ ಪುಸ್ತಕದಲ್ಲಿ ಶಾರುಖ್ ಅವರ ಮನೆಯ ಸಮೀಪದ ಚಿತ್ರಣವನ್ನು ಕೊಡಲಾಗಿದೆ. ವೋಗ್ ಇಂಡಿಯಾ ಜೊತೆ ಮಾತನಾಡಿದ ಗೌರಿ ಖಾನ್, ಓದುಗರು ಅವರಿಗೆ ಇಷ್ಟವಾದ ವಿಚಾರ ಯಾವುದು ಎನ್ನುವುದನ್ನು ಹೇಳಬೇಕು. ಇದರಲ್ಲಿ ಹಲವಾರು ಚಿತ್ರಗಳಿವೆ ಎಂದಿದ್ದರು.
KBC 15 Amitabh Bachchan says SRK Offered to ask Gauri to Revamp his Vanity Van.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am