ಬ್ರೇಕಿಂಗ್ ನ್ಯೂಸ್
25-07-23 11:54 am Source: News18 Kannada ಸಿನಿಮಾ
ಪ್ರಪಂಚದಾದ್ಯಂತದ ಅಲ್ಲು ಅರ್ಜುನ್ಗೆ ಅಭಿಮಾನಿಗಳಿದ್ದಾರೆ. ಪುಷ್ಪ ಸಿನಿಮಾ ಮೂಲಕ ಅಲ್ಲು ಅರ್ಜುನ್ ಫ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಬನ್ನಿ ಹವಾ ಜೋರಾಗಿದೆ.
ಸೋಶಿಯಲ್ ಮೀಡಿಯಾ ಮೂಲಕವೇ ಅಲ್ಲು ಅರ್ಜುನ್ ಅಭಿಮಾನಿಗಳ ಜೊತೆ ಟಚ್ನಲ್ಲಿದ್ದಾರೆ. ಎಲ್ಲಾ ಸಾಮಾಜಿಕ ತಾಣಗಳಲ್ಲೂ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಥ್ರೆಡ್ಸ್' ಅಪ್ಲಿಕೇಶನ್ನಲ್ಲಿ ಅಲ್ಲು ಅರ್ಜುನ್ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
'ಥ್ರೆಡ್ಸ್' ಅಪ್ಲಿಕೇಶನ್ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಸಿನಿಮಾ ನಟ ಎನ್ನುವ ಕೀರ್ತಿಗೆ ಅಲ್ಲು ಅರ್ಜುನ್ ಪಾತ್ರರಾಗಿದ್ದಾರೆ. ಉತ್ತಮ ಅಭಿಮಾನದ ಜೊತೆಗೆ ಮತ್ತು ವೈಯಕ್ತಿಕ ಜೀವನದಲ್ಲೂ ಉತ್ತಮ ವ್ಯಕ್ತಿತ್ವ ಹೊಂದಿರುವ ಬನ್ನಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
2021ರಲ್ಲಿ ತೆರೆಕಂಡ ‘ಪುಷ್ಪ’ ಚಿತ್ರದ ಮೂಲಕ ಅಲ್ಲು ಅರ್ಜುನ್ ಬಾಲಿವುಡ್ ಅಂಗಳದಲ್ಲೂ ಸದ್ದು ಮಾಡಿದ್ರು. ಪ್ಯಾನ್-ಇಂಡಿಯನ್ ಮಟ್ಟದಲ್ಲಿ ಬ್ಲಾಕ್ಬಸ್ಟರ್ ಆಗಿರುವ ಈ ಚಿತ್ರದ ಎರಡನೇ ಭಾಗಕ್ಕಾಗಿ ಪ್ರಪಂಚದಾದ್ಯಂತದ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಭಾರತದ ಅತ್ಯಂತ ಜನಪ್ರಿಯ ಸ್ಟಾರ್ಗಳಲ್ಲಿ ಬನ್ನಿ ಕೂಡ ಒಬ್ಬರಾಗಿದ್ದಾರೆ. ಅಲ್ಲು ಅರ್ಜುನ್ ತಮ್ಮ ಸರಳ ಜೀವನಶೈಲಿ, ನಡವಳಿಕೆಯಿಂದಲೇ ಅಭಿಮಾನಿಗಳ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲು ಅರ್ಜುನ್ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ‘ಪುಷ್ಪ 2’ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಪುಷ್ಪ ಚಿತ್ರದ ಸೀಕ್ವೆಲ್ ಆಗಿ ಬರುತ್ತಿರುವ ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಯಾವ ರೀತಿಯ ಪಂಚ್ ಡೈಲಾಗ್ ಕೊಡಲಿದ್ದಾರೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿರುವಾಗಲೇ ಚಿತ್ರದ ಡೈಲಾಗ್ ವೊಂದು ಲೀಕ್ ಆಗಿದೆ. ಸ್ವತಃ ಅಲ್ಲು ಅರ್ಜುನ್ ಡೈಲಾಗ್ ಲೀಕ್ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಬೇಬಿ ಸಕ್ಸಸ್ ಮೀಟ್ ನಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್, ಪುಷ್ಪ-2 ಚಿತ್ರದ ಡೈಲಾಗ್ ಲೀಕ್ ಮಾಡಿದ್ದಾರೆ. ಅಲ್ಲಿಗೆ ಬಂದಿದ್ದ ಅಭಿಮಾನಿಗಳೆಲ್ಲ ಪುಷ್ಪ-2 ಚಿತ್ರದ ಡೈಲಾಗ್ ಕೇಳಿದಾಗ ಅಲ್ಲು ಅರ್ಜುನ್ ಪಂಚ್ ಡೈಲಾಗ್ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ರು.
Allu Arjun clocks one million followers on Threads App.
10-05-24 06:48 pm
HK News Desk
Prajwal Revanna, CM Siddaramaiah: ಪ್ರಜ್ವಲ್ ಪ...
10-05-24 06:07 pm
Ayodhya rama temple, Pejawar Swamiji: ರಾಮಮಂದಿ...
10-05-24 02:32 pm
Hassan SSLC Exam: SSLC ಪರೀಕ್ಷೆಯಲ್ಲಿ ಮಗನ ಜೊತೆ...
10-05-24 10:11 am
Mandya SSLC Suicide, Student: SSLC ಪಾಸಾಗಿದ್ದರ...
09-05-24 11:03 pm
10-05-24 03:46 pm
HK News Desk
Kerala Arali Flower death: ಮೊಬೈಲ್ ನಲ್ಲಿ ಮಾತನಾ...
10-05-24 10:06 am
Hindu population in India: ಭಾರತದಲ್ಲಿ ಹಿಂದುಗಳ...
09-05-24 07:59 pm
Air India Express: ಏರ್ ಇಂಡಿಯಾ ಕ್ಯಾಬಿನ್ ಸಿಬಂದಿ...
09-05-24 11:56 am
ಸೈಡ್ ಇಫೆಕ್ಟ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ;...
08-05-24 11:59 am
10-05-24 09:22 pm
Mangalore Correspondent
Mangalore Accident, Thokottu: ತೊಕ್ಕೊಟ್ಟು ಹೆದ್...
10-05-24 12:39 pm
Accident in Mangalore, Naguri: ಹಾಡಹಗಲೇ ಟಿಪ್ಪರ...
09-05-24 11:06 pm
ಪರೀಕ್ಷೆ ಹಾಲ್ ಬಿಟ್ಟು ಕಣ್ಮರೆಯಾಗಿದ್ದ ಎಂಎಸ್ಸಿ ವಿದ...
09-05-24 10:04 pm
KMC, Mangalore News: ಮೆಡಿಕಲ್ ಕಾಲೇಜಿನ ಮಹಿಳಾ ಶೌ...
09-05-24 06:33 pm
10-05-24 05:04 pm
Bangalore Correspondent
Kalaburgi youth murdered: ಕಲಬುರಗಿ ; ಕಾಂಗ್ರೆಸ್...
10-05-24 02:04 pm
Cyber fraud Kodagu, Kerala, Sim card: ಸೈಬರ್ ವ...
10-05-24 12:44 pm
NIA arrests Mustafa Paichar, Praveen Nettaru...
10-05-24 11:53 am
Kodagu Murder, SSLC Student: ಕೊಡಗಿನಲ್ಲಿ SSLC...
10-05-24 10:16 am