ಬ್ರೇಕಿಂಗ್ ನ್ಯೂಸ್
26-05-23 01:03 pm Source: news18 ಸಿನಿಮಾ
ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಗುರುತಿಸಿಕೊಂಡ ನಟ ಕಬೀರ್ ಬೇಡಿ ತಮ್ಮ ಮೊದಲ ದಕ್ಷಿಣ ಭಾರತದ ಚಿತ್ರೀಕರಣ ಮುಗಿಸಿ ಮುಂಬೈಗೆ ಹೋಗಿದ್ದಾರೆ. ಕರಿ ಹೈದ ಕರಿ ಅಜ್ಜ ಸಿನಿಮಾ ಮೂಲಕ ಈ ಕಡೆಗೆ ಬಂದ ಕಬೀರ್ ಬೇಡಿ ಈಗ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಕಬೀರ್ ಬೇಡಿ ಅವರ ಕಂಠಸಿರಿ ಅದ್ಭುತವಾಗಿಯೇ ಇದೆ. ಸಾಕ್ಷ್ಯ ಚಿತ್ರಗಳಿಗೂ ಧ್ವನಿ ಕೊಡ್ತಾರೆ ಕಬೀರ್ ಬೇಡಿ. ಹೀಗಿರೋವಾಗ ತಮ್ಮ ಮೊದಲ ದಕ್ಷಿಣ ಭಾರತದ ಸಿನಿಮಾಕ್ಕೆ ಡಬ್ಬಿಂಗ್ ಮಾಡದೇ ಇರ್ತಾರಾ ? ಇಲ್ಲ ಬಿಡಿ, ಕರಿ ಹೈದ ಕರಿ ಅಜ್ಜ ಸಿನಿಮಾದ ಆರಂಭದಲ್ಲಿಯೇ ಈ ಚಿತ್ರಕ್ಕೆ ನಾನೇ ಡಬ್ ಮಾಡುತ್ತೇನೆ ಅಂತೇ ಹೇಳಿದ್ದರು.
ಚಿತ್ರದ ಡೈರೆಕ್ಟರ್ ಸುಧೀರ್ ಅತ್ತಾವರ್ ಈ ಮಾತನ್ನ ಅಂದು ಕೇಳಿ ಸುಮ್ಮನಾಗಿದ್ದರು. ಆದರೆ ಕಬೀರ್ ಬೇಡಿ ಅದನ್ನ ಅಷ್ಟಕ್ಕೆ ಬಿಟ್ಟಿಲ್ಲ ನೋಡಿ. ಮುಂಬೈನ ಪ್ರತಿಷ್ಠಿತ ಸ್ಟುಡಿಯೋದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ. ಕಬೀರ್ ಬೇಡಿ ಅವರಿಗೆ ಹಿಂದಿ ಚೆನ್ನಾಗಿ ಗೊತ್ತಿದೆ. ಇಂಗ್ಲೀಷ್ ಭಾಷೆ ಮೇಲೆ ಹಿಡಿತವಿದೆ. ಯುರೋಪಿಯನ್ ಭಾಷೆಯನ್ನ ಕೂಡ ಕಬೀರ್ ಬೇಡಿ ತಿಳಿದುಕೊಂಡಿದ್ದಾರೆ.



ಕಬೀರ್ ಬೇಡಿ ಇದೀಗ ಕರಿ ಹೈದ ಕರಿ ಅಜ್ಜ ಸಿನಿಮಾದ ಮೂಲಕ ಕನ್ನಡ, ಮಲೆಯಾಳಂ ಹಾಗೂ ತುಳು ಭಾಷೆಯನ್ನೂ ಕಲಿತಿದ್ದಾರೆ. ಈ ಕಲಿಕೆ ಮೂಲಕ ಕರಿ ಹೈದ ಕರಿ ಅಜ್ಜ ಚಿತ್ರಕ್ಕೆ ಡಬ್ಬಿಂಗ್ ಕೂಡ ಮಾಡಿದ್ದಾರೆ. ಕಬೀರ್ ಬೇಡಿ ಈ ಸಿನಿಮಾದಲ್ಲಿ ಉದ್ಯಾವರ ಅರಸರ ಪಾತ್ರವನ್ನ ನಿರ್ವಹಿಸಿದ್ದಾರೆ. ಆ ಪಾತ್ರಕ್ಕೇನೆ ಕಬೀರ್ ಬೇಡಿ ಈಗ ಡಬ್ಬಿಂಗ್ ಈಗ ಮಾಡುತ್ತಿದ್ದಾರೆ. ಪ್ರತಿ ದಿನ ಎರಡೋ ಇಲ್ಲವೇ ಮೂರೋ ಡೈಲಾಗ್ಗಳನ್ನ ಡಬ್ಬಿಂಗ್ ಮಾಡುತ್ತಲೇ, ಕಬೀರ್ ಬೇಡಿ ತಮ್ಮ ಈ ಪಾತ್ರದ ಡಬ್ಬಿಂಗ್ ಕೆಲಸವನ್ನ ಮುಗಿಸಿಕೊಡ್ತಿದ್ದಾರೆ. ಈ ಮೂಲಕ ಕಬೀರ್ ಬೇಡಿ ತಮ್ಮ ಧ್ವನಿಯಲ್ಲಿಯೇ ಉದ್ಯಾವರ ಅರಸರ ಪಾತ್ರಕ್ಕೆ ನೈಜತೆ ತಂದುಕೊಡುತ್ತಿದ್ದಾರೆ.
bollywood actor kabir bedi dubbed for kannada movie at mumbai.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 12:46 pm
HK News Staffer
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm