ಬ್ರೇಕಿಂಗ್ ನ್ಯೂಸ್
23-05-23 12:59 pm Source: news18 ಸಿನಿಮಾ
ಜೂನಿಯರ್ ಎನ್ಟಿಆರ್ ಅವರ ಒಂಭತ್ತು ಜನ ಅಭಿಮಾನಿಗಳನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ. ಜೂನಿಯರ್ ಎನ್ಟಿಆರ್ ಅವರ ಬರ್ತ್ಡೇ ಸಂದರ್ಭವೇ ಅವರ ಅಭಿಮಾನಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಡುಗಳನ್ನು ಬಲಿಕೊಟ್ಟು ನಟನ ಬ್ಯಾನರ್ಗೆ ರಕ್ತಾಭಿಷೇಕ ಮಾಡಿದ ಹಿನ್ನೆಲೆಯಲ್ಲಿ ನಟನ ಅಭಿಮಾನಿಗಳನ್ನು ಬಂಧಿಸಲಾಗಿದೆ. ಪ್ರಾಣಿಗಳ ಬಲಿ ನಿಷೇಧಿಸಲಾಗಿದ್ದು ಆ ಕೃತ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ಅಭಿಮಾನಿಗಳು ಅರೆಸ್ಟ್ ಆಗಿದ್ದಾರೆ.
ವಿಜಯವಾಡದಲ್ಲಿ ಘಟನೆ ನಡೆದಿದೆ. ನಟನ ಅಭಿಮಾನಿಗಳು ನಟನ ಬರ್ತ್ಡೇ ಆಚರಣೆ ಭಾಗವಾಗಿ ಥಿಯೇಟರ್ ಮುಂದೆ ಅವರ ಫ್ಲೆಕ್ಸಿ ಬ್ಯಾನರ್ಗೆ ಆಡುಗಳನ್ನು ಬಲಿ ಕೊಟ್ಟು ರಕ್ತ ಚಿಮ್ಮುವಂತೆ ಮಾಡಿದ್ದಾರೆ. ಅಭಿಮಾನಿಗಳು ಎರಡು ಆಡುಗಳನ್ನು ಸಾಯಿಸಿ ರಕ್ತಾಭಿಷೇಕ ಮಾಡಿದ್ದಾಗಿ ಆರೋಪಿಸಲಾಗಿದೆ. ನಟನ ಬರ್ತ್ಡೇ ಪ್ರಯುಕ್ತ ಅವರ ಹಳೆಯ ಸಿನಿಮಾ ಸಿಂಹಾದ್ರಿ ರಿ ರಿಲೀಸ್ ಆಗಿದೆ. ಈ ಸಂದರ್ಭ ಥಿಯೇಟರ್ ಮುಂದೆ ಈ ಘಟನೆ ನಡೆದಿದೆ.

ಪಿ. ಶಿವ ನಾಗ ರಾಜು, ಕೆ ಸಾಯಿ, ಜಿ ಸಾಯಿ, ಡಿ ನಾಗ ಭೂಷಣಂ, ವಿ ಸಾಯಿ, ಪಿ ನಾಗೇಶ್ವರ ರಾವ್, ವೈ. ಧರಣಿ, ಪಿ. ಶಿವ ಹಾಗೂ ಬಿ. ಅನಿಲ್ ಕುಮಾರ್ ಎಂಬವರನ್ನು ಈ ಘಟನೆಗೆ ಸಂಬಂಧಿಸಿ ಅರೆಸ್ಟ್ ಮಾಡಲಾಗಿದೆ. ಶಿವ ನಾಗ ರಾಜು ಹಾಗೂ ಅವರ ಸ್ನೇಹಿತರು ಸಿರಿ ಕೃಷ್ಣ ಹಾಗೂ ಸಿರಿ ವೆಂಕಟ ಥಿಯೇಟರ್ನಲ್ಲಿ ಮೇ 20ರಂದು ನಟನ ಬರ್ತ್ಡೇ ಆಚರಿಸಿದ್ದಾರೆ. ಈ ಸಂದರ್ಭದಲ್ಲಿಯೇ ಆಡನ್ನು ಬಲಿಕೊಟ್ಟ ಘಟನೆಯೂ ನಡೆದಿದೆ.

ನಟನ ಬರ್ತ್ಡೇ ಸಂದರ್ಭ ಇನ್ನೊಂದು ಘಟನೆಯಲ್ಲಿ ನಟ ಅಭಿಮಾನಿಗಳು ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿ ಚಿತ್ರಮಂದಿರದೊಳಗೆ ಬೆಂಕಿ ಅವಘಡ ಸಂಭವಿಸುವಂತೆ ಮಾಡಿದ್ದಾರೆ. ಥಿಯೇಟರ್ನಲ್ಲಿ ಸೀಟುಗಳಿಗೂ ಹಾನಿಯಾಗಿದೆ. ಎಲ್ಲಾ ಕಡೆಗಳಲ್ಲಿ ಸಿನಿಮಾ ರಿ-ರಿಲೀಸ್ ಸಂಭ್ರಮ ತುಂಬಿದ್ದ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದೆ. ಘಟನೆಯ ಫೊಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ಶೋ ಕ್ಯಾನ್ಸಲ್ ಮಾಡಲಾಯಿತು.
nine fans of jr ntr arrested for sacrificing goats.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
04-03-26 11:13 pm
HK News Desk
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
04-03-26 09:31 pm
HK News Staffer
ಉಡುಪಿ; ಲವ್ ಮ್ಯಾಟರ್ ರಾಜಿ ವೇಳೆ ಮೀನುಗಾರ ಮುಖಂಡನಿಗ...
04-03-26 10:54 am
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm