ಬ್ರೇಕಿಂಗ್ ನ್ಯೂಸ್
08-05-23 11:56 am Source: news18 ಸಿನಿಮಾ
ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ಪ್ರಭುದೇವ ಅವರ ವೂಲ್ಫ್ ಚಿತ್ರದ ಇನ್ನೂ ಒಂದು ವಿಶೇಷ ಮಾಹಿತಿ ಹೊರ ಬಿದ್ದಿದೆ. ಚಿತ್ರದ ನಾಯಕಿಯ ಗೆಟಪ್ ಹೇಗಿದೆ ಅನ್ನೋರಿಗೆ ಈಗ ಉತ್ತರ ಸಿಕ್ಕಿದೆ. ಪ್ಯಾನ್ ಇಂಡಿಯಾ ವೂಲ್ಫ್ ಸಿನಿಮಾದಲ್ಲಿ ಬಹು ತಾರೆಯರು ಇದ್ದಾರೆ. ಆದರೆ ನಾಯಕಿ ಲಕ್ಷ್ಮಿ ರೈ ಪಾತ್ರದ ಒಂದೇ ಒಂದು ಪೋಸ್ಟರ್ ರಿಲೀಸ್ ಆಗಿರಲಿಲ್ಲ. ಆದರೆ ಈಗ ಸಿನಿಮಾ ಡೈರೆಕ್ಟರ್ ವಿನು ವೆಂಕಟೇಶ್ ಅದನ್ನ ರಿಲೀಸ್ ಮಾಡಿದ್ದಾರೆ.
ಬಹು ಭಾಷೆಯ ವೂಲ್ಫ್ ಚಿತ್ರದಲ್ಲಿ ಲಕ್ಷ್ಮೀ ರೈ ಸೂಪರ್ ಆಗಿಯೆ ಕಾಣಿಸುತ್ತಿದ್ದಾರೆ. ಸೂಪರ್ ವುಮೆನ್ ರೀತಿಯಲ್ಲಿಯೇ ಕಂಗೊಳಿಸುತ್ತಿದ್ದಾರೆ. ಹಾಲಿವುಡ್ ಸಿನಿಮಾ ಪೋಸ್ಟರ್ ನೋಡಿದ ಅನುಭವ ಈಗಲೇ ಆಗುತ್ತಿದೆ. ವೂಲ್ಪ್ ಸಿನಿಮಾದಲ್ಲಿ ಲಕ್ಷ್ಮಿ ರೈ ಯಾವ ರೀತಿ ಪಾತ್ರ ಮಾಡ್ತಿದ್ದಾರೆ ಅನ್ನುವ ಕುತೂಹಲ ಇತ್ತು. ಆದರೆ ಈಗ ಅದಕ್ಕೆ ತೆರೆ ಬಿದ್ದಿದ್ದು, ಲಕ್ಷ್ಮಿ ರೈ ಇಲ್ಲಿ ಬೇರೆ ರೀತಿಯಲ್ಲಿ ಹೊಳೆಯುತ್ತಿದ್ದಾರೆ.


ವೂಲ್ಫ್ ಸಿನಿಮಾದ ಬಹುತೇಕ ಎಲ್ಲ ಕೆಲಸ ಪೂರ್ಣಗೊಂಡಿದೆ. ಸಿನಿಮಾ ಪ್ರೇಮಿಗಳೂ ಈ ಚಿತ್ರಕ್ಕೆ ಕಾತರದಿಂದಲೇ ಕಾಯುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಆ ಒಂದು ನಿರೀಕ್ಷೆಯನ್ನ ಹುಟ್ಟುಹಾಕಿವೆ. ವೂಲ್ಫ್ ಚಿತ್ರಕ್ಕೆ ಕನ್ನಡದ ನಿರ್ಮಾಪಕ ಸಂದೇಶ್ ನಾಗರಾಜ್ ದುಡ್ಡುಹಾಕಿದ್ದಾರೆ. ಈ ಚಿತ್ರದ ಜೊತೆಗೆ ಸಂದೇಶ್ ನಾಗರಾಜ್ ಘೋಸ್ಟ್ ಚಿತ್ರಕ್ಕೂ ದುಡ್ಡು ಹಾಕಿದ್ದಾರೆ. ಎರಡೂ ಸಿನಿಮಾಗಳು ದೊಡ್ಡಮಟ್ಟದಲ್ಲಿಯೇ ತಯಾರಾಗುತ್ತಿವೆ. ದೊಡ್ಡಮಟ್ಟದಲ್ಲಿಯೇ ರಿಲೀಸ್ ಕೂಡ ಆಗುತ್ತಿವೆ.

ಚಿತ್ರದ ನಾಯಕ ಪ್ರಭುದೇವ ಪಾತ್ರದ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ನೋಡಿದ್ರೆ, ವೂಲ್ಫ್ ಚಿತ್ರ ಹಾಲಿವುಡ್ ಟಚ್ ಇದ್ದಂತೆ ಕಾಣುತ್ತದೆ. ಆದರೆ ಈ ಚಿತ್ರಕ್ಕೆ ಆ ರೀತಿಯ ಹಾಲಿವುಡ್ ಸ್ಪೂರ್ತಿ ಏನೂ ಇಲ್ಲ ಅಂತ ಡೈರೆಕ್ಟರ್ ವಿನು ವೆಂಕಟೇಶ್ ಈಗಾಗಲೇ ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
pan india wolf movie actress laxshmi raai first look release.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm