ಬ್ರೇಕಿಂಗ್ ನ್ಯೂಸ್
30-03-23 01:48 pm Source: news18 ಸಿನಿಮಾ
ರಾಮ್ ಚರಣ್ ತೇಜಾ ಸ್ಪೆಷಲ್ ಆಗಿದ್ದಾರೆ. ನಟನೆ ಅಂತ ಬಂದ್ರೆ ಡೆಡಿಕೇಷನ್ ಇರುತ್ತದೆ. ಟ್ರಿಪಲ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ತೇಜಾ ಕಿಚ್ಚು ಹಚ್ಚಿದ್ದಾರೆ. ಈ ಮೂಲಕ ಆಸ್ಕರ್ ಅಂಗಳದಲ್ಲೂ ರಾಮ್ ಚರಣ್ ತೇಜಾ ಬೇಜಾನ್ ಸೌಂಡ್ ಮಾಡಿದ್ದಾರೆ.
ನಾಟು ನಾಟು ಬಳಿಕ ರಾಮ್ ಚರಣ್ ಇಮೇಜ್ ಚೇಂಜ್!
ಟ್ರಿಪಲ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಬಂದ್ಮೇಲೆ ಟಾಲಿವುಡ್ನಲ್ಲಿ ಇಡೀ ಸಿನಿಮಾ ತಂಡವನ್ನ ವಿಭಿನ್ನವಾಗಿಯೇ ನೋಡಲಾಗುತ್ತಿದೆ. ಈ ಚಿತ್ರದಲ್ಲಿ ಅಭಿನಯಿಸಿರೋ ನಟರ ಇಮೇಜ್ ಕೂಡ ಚೇಂಜ್ ಆಗುತ್ತಿದೆ. ಈ ವಿಷಯದಲ್ಲಿ ರಾಮ್ ಚರಣ್ ತೇಜಾ ಕೂಡ ಹೊರತಾಗಿಲ್ಲ.
ರಾಮ್ ಚರಣ್ ತೇಜಾ ತಮ್ಮ ಚಿತ್ರ ಜೀವನದಲ್ಲಿ ಈ ಮಟ್ಟದ ಎತ್ತರಕ್ಕೆ ಹೋಗಿರಲಿಲ್ಲ. ಮಗಧೀರ ಮೂಲಕ ದಕ್ಷಿಣದಲ್ಲಿ ಹೊಸ ಅಲೆ ಎಬ್ಬಿಸಿರೋದು ಗೊತ್ತೇ ಇದೆ. ಟ್ರಿಪಲ್ ಆರ್ ಸಿನಿಮಾ ಆದ್ಮೇಲೆ ರಾಮ್ ಚರಣ್ ತೇಜಾ ಮತ್ತಷ್ಟು ಬ್ಯುಸಿ ಆಗಿದ್ದಾರೆ.

ಮಗಧೀರ ರಾಮ್ ಚರಣ್ ತೇಜಾ ಬಿಗ್ ಬ್ರೇಕ್ ಪ್ಲಾನ್ ಯಾಕೆ?
ಹೌದು, ರಾಮ್ ಚರಣ್ ತೇಜಾ ಹೊಸ ಹೊಸ ಪ್ರೋಜೆಕ್ಟ್ಗಳನ್ನ ಒಪ್ಪಿಕೊಳ್ಳಲು ಸಜ್ಜಾಗಿದ್ದಾರೆ. ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈಗಾಗಲೇ ತಮ್ಮ ಬಳಿ ಬರೋ ಸಿನಿಮಾಗಳನ್ನ ಮಾಡೋ ಮುಂಚೇ ಒಂದು ಬಿಗ್ ಬ್ರೇಕ್ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದಾರೆ.

ರಾಮ್ ಚರಣ್ ತೇಜಾ ಸಾಮಾನ್ಯವಾಗಿ ಸಿನಿಮಾ ಮಾಡಿದ್ರೂ ಕೂಡ ಫ್ಯಾಮಿಲಿಗೆ ಟೈಮ್ ಕೊಡ್ತಾರೆ. ಒಂದು ಚಿತ್ರ ಆದ್ಮೇಲೆ ಒಂದು ಬಿಗ್ ಬ್ರೇಕ್ ತೆಗೆದುಕೊಳ್ಳುತ್ತಾರೆ. ಇದು ರಾಮ್ ಚರಣ್ ತೇಜಾ ವಿಷಯದಲ್ಲಿ ಕಾಮನ್ ಆಗಿದೆ. ಆದರೆ ಈ ಸಲ 6 ತಿಂಗಳ ಬಿಗ್ ಬ್ರೇಕ್ ತೆಗೆದುಕೊಳ್ಳುವ ಪ್ಲಾನ್ನ್ನ ರಾಮ್ ಚರಣ್ ತೇಜಾ ಹಾಕಿಕೊಂಡಿದ್ದಾರೆ.
ರಾಮ್ ಚರಣ್ ತೇಜಾ ಬಿಗ್ ಬ್ರೇಕ್ ತೆಗೆದುಕೊಳ್ಳಲು ಏನು ಕಾರಣ?
ರಾಮ್ ಚರಣ್ ತೇಜಾ ಇಷ್ಟೊಂದು ದೊಡ್ಡ ಬ್ರೇಕ್ ತೆಗೆದುಕೊಳ್ಳಲು ಕಾರಣವೂ ಇದೆ. ನಿಜ, ಪತ್ನಿ ಉಪಾಸನಾ ಮತ್ತು ರಾಮ್ ಚರಣ್ ತೇಜಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್ ಚರಣ್ ತೇಜಾ ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ರಾಮ್ ಚರಣ್ ತೇಜಾ ಮೊದಲು ಗೇಮ್ ಚೇಂಜರ್ ಸಿನಿಮಾ ಮುಗಿಸುತ್ತಾರೆ. ಇದಾದ್ಮೇಲೆ ಫ್ಯಾಮಿಲಿಗೆ ಟೈಮ್ ಕೊಡ್ತಾರೆ. ಹಾಗೇನೆ ಈಗಾಗಲೇ ಒಪ್ಪಿಕೊಂಡಿರೋ RC-16 ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ. ಇದೆಲ್ಲ ಆದ್ಮೇಲೆ ಕನ್ನಡದ ಪ್ರಶಾಂತ್ ನೀಲ್ ಮತ್ತು ಮಫ್ತಿ ಡೈರೆಕ್ಟರ್ ನರ್ತನ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆ.
tollywood actor ram charan teja new movie latest update.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm