ಬ್ರೇಕಿಂಗ್ ನ್ಯೂಸ್
24-03-23 02:03 pm Source: news18 ಸಿನಿಮಾ
ಆದರೆ ಕಾಂತಾರ ಸಿನಿಮಾ ಯಾವ ರೀತಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತೋ ಅದೇ ರೀತಿ ಕೆಲವೊಂದು ನೆಗೆಟಿವ್ ಪರಿಣಾಮಗಳನ್ನೂ ಕಂಡಿದೆ. ಸಿನಿಮಾ ರಿಲೀಸ್ ಆಗಿ ದೈವಾರಾಧವನೆ ವಿಚಾರ ಎಲ್ಲರಿಗೂ ತಿಳಿಯಿತು. ಆದರೆ ಹಿಂದೆ ಮುಂದೆ ನೋಡದೆ ಜನರು ಇದನ್ನು ತಮಗೆ ಬೇಕಾದಲ್ಲಿ, ಬೇಕಾದಂತೆ ಬಳಸಲು ಪ್ರಾರಂಭಿಸಿದ್ದಾರೆ. ಸಿನಿಮಾ ರಿಲೀಸ್ ಆದ ಆರಂಭದಲ್ಲಿಯೇ ಬಹಳಷ್ಟು ಜನರು ದೈವದ ಕೂಗನನ್ನು ಇಮಿಟೇಟ್ ಮಾಡಿದ್ದರು. ಆಗಲೇ ರಿಷಬ್ ಶೆಟ್ಟಿ ಅವರು ಈ ಬಗ್ಗೆ ಎಚ್ಚರಿಕೆ ಕೊಟ್ಟು ಆಟಕ್ಕಾಗಿ, ರೀಲ್ಸ್ಗಾಗಿ ಇದನ್ನು ಮಾಡಬೇಡಿ ಎಂದು ಕೂಡಾ ಹೇಳಿದ್ದರು. ಆದರೆ ಕಾಂತಾರದ ಕ್ರೇಜ್ ಜನರನ್ನು ಬೇಕಾದಂತೆ ವರ್ತಿಸಲು ಪ್ರೇರೇಪಿಸುತ್ತಿದೆ.
ಬೆಂಗಳೂರಿಗೆ ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ
ಪ್ರತಿ ದೇವರಿಗೂ ಅಲಂಕಾರ ಮಾಡಲು ಆಯಾ ವಿಧಾನಗಳಿರುತ್ತವೆ. ಬಣ್ಣ, ಹೂಗಳು, ಬಟ್ಟೆ, ಆಭರಣ, ಆರತಿಗಳು ಎಲ್ಲರಲ್ಲೂ ಪ್ರತ್ಯೇಕತೆಗಳಿವೆ. ಹಾಗೆಯೇ ಕರಾವಳಿಯಲ್ಲಿ ದೈವದ ಅಲಂಕಾರವೂ ವಿಭಿನ್ನ. ಈ ಅಲಂಕಾರ ಪದ್ಧತಿಗಳು ಇಂದಿನದ್ದಲ್ಲ. ಹಿಂದಿನಿಂದಲೇ ನಡೆದುಕೊಂಡುಬಂದಿರುವುದು. ಅದನ್ನು ಬೇಕಾಬಿಟ್ಟಿ ಬಳಸುವ ಹಾಗಿಲ್ಲ. ಆದರೆ ಈ ಹಿಂದೆ ಈ ರೀತಿಯ ದೈವದ ಅಲಂಕಾರವನ್ನು ಬೇಕಾಬಿಟ್ಟಿಯಾಗಿ ಯಾರೂ ಮಾಡುತ್ತಿರಲಿಲ್ಲ. ಆದರೆ ಈಗ ಆ ಧೋರಣೆ ಬದಲಾಗಿದೆ.
ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ ಯಾಕೆ?
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ಗುಡಿಯಲ್ಲಿ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದ ಅಲಂಕಾರವನ್ನು ಮಾಡಲಾಗಿದೆ. ತೆಂಗಿನ ಎಳೆಯ ಗರಿಗಳಿಂದ ಮಾಡುವ ಅದೇ ಅಲಂಕಾರವನ್ನು ಇಲ್ಲಿ ಬಳಸಲಾಗಿದೆ. ಅಷ್ಟೇ ಅಲ್ಲದೆ ಕೈಯಲ್ಲಿ ದೀಟಿಗೆಯನ್ನೂ ಇಡಲಾಗಿದೆ. ತುಳುನಾಡಿನ ದೈವದ ಅದೇ ರೂಪವನ್ನು ಗಂಗಮ್ಮ ತಾಯಿಗೆ ಮಾಡಿದ್ದು ತೀವ್ರವಾಗಿ ಟೀಕೆ ಎದುರಾಗಿದೆ.
ರಿಷಬ್ ಶೆಟ್ಟಿ ಅವರೇ ಸಿನಿಮಾ ಮಾಡುವ ಮೊದಲು ಅನುಮತಿ ಪಡೆದಿದ್ದರು
ದೈವದ ಆಭರಣ ಮುಟ್ಟುವುಕ್ಕೂ, ಬಳಸುವುದಕ್ಕೂ, ಅಲಂಕಾರ ಮಾಡುವುದಕ್ಕೂ ವಿಧಾನಗಳಿವೆ. ಇನ್ನೂ ವಿಶೇಷವೆಂದರೆ ದೈವಗಳಿಗೆ ಮಾಡುವ ಅಲಂಕಾರ ದೈವಾರಾಧನೆ ಬಿಟ್ಟು ಬೇರೆ ಸಂದರ್ಭಗಳಲ್ಲಿ ಬಳಸುವ ಹಾಗಿಲ್ಲ.
ಹಾಗಾಗಿಯೇ ರಿಷಬ್ ಶೆಟ್ಟಿ ಈ ಬಗ್ಗೆ ಸಿನಿಮಾ ಮಾಡುವಾಗಲೂ ಧರ್ಮಸ್ಥಳಕ್ಕೆ ಹೋಗಿ ಅನುಮತಿ ಕೇಳಿಯೇ ಸಿನಿಮಾದಲ್ಲಿ ಕೂಡಾ ಬಳಸಿದ್ದರು. ಆದರೆ ಇದು ಬಹಳಷ್ಟು ಜನರಿಗೆ ಅರ್ಥವಾಗದೆ ತಮಗೆ ಬೇಕಾದಲ್ಲಿ ಬೇಕಾಬಿಟ್ಟಿಯಾಗಿ ಬಳಸುತ್ತಿರುವುದು ತುಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಿಷಬ್ ಶೆಟ್ಟಿ ಬಗ್ಗೆ ತುಳು ಜನರ ವಿರೋಧ
ಇದೀಗ ಸೋಷಿಯಲ್ ಮಿಡಿಯಾದಲ್ಲಿ ಗಂಗಮ್ಮ ತಾಯಿಯ ಪಂಜುರ್ಲಿ ಅಲಂಕಾರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕಾಂತಾರ ಸಿನಿಮಾದ ಹಾಡನ್ನೂ ಕೂಡಾ ಬಳಸಲಾಗಿದೆ. ರೋಶನ್ ರೆನಾಲ್ಡ್ ಎನ್ನುವವರು ಶೇರ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಪಂಜುರ್ಲಿ ಅಲಂಕಾರ, ಗಂಗಮ್ಮ ಗುಡಿ, ಮಲ್ಲೇಶ್ವರಂ. ನಿಮ್ಮ ಹಣದಾಸೆಗೆ ಇಡೀ ತುಳುನಾಡ ಆರಾಧನೆಯನ್ನು ಎಲ್ಲಿ ತಲುಪಿಸಿದಿರಿ ರಿಷಬ್ ಶೆಟ್ಟಿ ಅವರೇ (ಪಂಜುರ್ಲಿ ಅಲಂಕಾರ, ಗಂಗಮ್ಮ ಗುಡಿ, ಮಲ್ಲೇಶ್ವರಂ
Rishab Shetty Films ಇಡೀ ತುಳುನಾಡ ಆರಾಧನೆ ಒಡೆ ಎತ್ತಾಯ ಮಾರಾಯ ನಿನ್ನ ಕಾಸ್ದ ಆಸೆಗ್) ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ಇವರಿಗೆಲ್ಲ ಏನಾಗಿದೆ? ತಲೆ ಸರಿ ಇಲ್ವಾ? ಕಾಂತಾರ 2 ರಿಲೀಸ್ ಆಗಬಾರದು. ಸಿನಿಮಾ ರಿಲೀಸ್ ಆದರೆ ಫ್ಲಾಪ್ ಆಗಬೇಕು. ಇದನ್ನು ನೋಡಿಯೇ ಈ ರೀತಿ ಅಪಚಾರ ಮಾಡುವ ಜನರಿಗೆ ಏನೆಂದು ಹೇಳುವುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕಾಂತಾರ ಸಿನಿಮಾ ಮಾಡಿ ಇಷ್ಟೆಲ್ಲ ಮಾಡಿದರು. ಇನ್ನು ಕಾಂತಾರ 2 ಸಿನಿಮಾ ಬರಬೇಕೇ? ಇನ್ನಾದರೂ ತುಳುವ ಸಂಸ್ಕೃತಿಯನ್ನು ಉಳಿಸುವ ಎಂದಿದ್ದಾರೆ ನೆಟ್ಟಿಗರು.
ರಿಷಬ್ ಶೆಟ್ಟಿ ದೈವಕ್ಕೆ ಮರ್ಯಾದೆ ಇಲ್ಲದಂತೆ ಮಾಡಿದರು, ಇದಕ್ಕೆ ರಿಷಬ್ ಶೆಟ್ಟಿ ಅವರೇ ಟ್ವೀಟ್ ಮಾಡಿ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ನೆಟ್ಟಿಗರು. ವಿಡಿಯೋಗೆ ಕಮೆಂಟ್ ಮಾಡಿದ ಬಹಳಷ್ಟು ಜನರು ಕಾಂತಾರ 2 ಸಿನಿಮಾ ಬರಬಾರದು ಎಂದು ಹೇಳಿದ್ದಾರೆ.
kantara Rishab Shetty panjurli daiva look on gangamma devi malleshwaram bengaluru tulu people gives call to ban kantara 2.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am