ಬ್ರೇಕಿಂಗ್ ನ್ಯೂಸ್
08-03-23 03:04 pm Source: news18 ಸಿನಿಮಾ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆ ಕನ್ನಡ ಸಿನಿಪ್ರೇಮಿಗಳು ಮತ್ತು ಸುದೀಪ್ ಅಭಿಮಾನಿಗಳಲ್ಲೂ ಮೂಡಿದೆ. ಇದಕ್ಕೆ ಸೂಕ್ತ ಉತ್ತರ ಇನ್ನು ಸಿಕ್ಕಿಲ್ಲ. ಆದರೆ ಈಗ ಹರಿದಾಡ್ತಿರೊ ಒಂದು ಸುದ್ದಿ ಭಾರಿ ವೈರಲ್ ಆಗುತ್ತಿದೆ. ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಬಿಲ್ ರಂಗಾ ಬಾದಷಾ ಚಿತ್ರ ಮಾಡ್ತಾರೆ ಅನ್ನುವ ಸುದ್ದಿ ಇದ್ದೇ ಇದೆ. ಅದೇ ಚಿತ್ರದ ಕೆಲಸದಲ್ಲಿಯೇ ಅನೂಪ್ ಭಂಡಾರಿ ಈಗ ಬ್ಯುಸಿ ಇದ್ದಾರೆ ಅನ್ನುವ ಸುದ್ದಿ ಕೂಡ ವೈರಲ್ ಆಗುತ್ತಿದೆ.
ಅನೂಪ್ ಭಂಡಾರಿ ಹಾಗೂ ಸುದೀಪ್ ಜೋಡಿಯ ಈ ಚಿತ್ರ 100 ಕೋಟಿ ಬಜೆಟ್ನ ಸಿನಿಮಾ ಅಂತಲೇ ಹೇಳಲಾಗುತ್ತಿದೆ. ಈ ಒಂದು ಅದ್ಭುತ ಕಥೆಯ ಚಿತ್ರ ಕಿಚ್ಚನ ಪ್ರೋಡಕ್ಷನ್ ಹೌಸ್ನಲ್ಲಿಯೇ ರೆಡಿ ಆಗುತ್ತದೆ ಅನ್ನುವ ಇನ್ನೂ ಒಂದು ಮಾಹಿತಿ ಕೂಡ ಇದೆ. ವಿಕ್ರಾಂತ್ ರೋಣ ಚಿತ್ರದ ಡೈರೆಕ್ಟರ್ ಅನೂಪ್ ಭಂಡಾರಿ ಈಗಾಗಲೇ ಕಿಚ್ಚನಿಗಾಗಿಯೇ ಕಥೆ ಮಾಡಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ಮುಂಚೇ ಈ ಚಿತ್ರಕ್ಕೆ ಸಾಕಷ್ಟು ತಯಾರಿ ಬೇಕಾಗುತ್ತದೆ. ಆ ಕೆಲಸದಲ್ಲಿಯೇ ಇದ್ದೇನೆ ಎಂದು ನ್ಯೂಸ್-18 ಕನ್ನಡ ಡಿಜಿಟಲ್ಗೂ ಹೇಳಿಕೊಂಡಿದ್ದಾರೆ.


ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಬಿಲ್ ರಂಗಾ ಬಾದಷಾ ಚಿತ್ರ ಮಾಡ್ತಾರೆ ಅನ್ನುವ ಸುದ್ದಿ ಇದ್ದೇ ಇದೆ. ಅದೇ ಚಿತ್ರದ ಕೆಲಸದಲ್ಲಿಯೇ ಅನೂಪ್ ಭಂಡಾರಿ ಈಗ ಬ್ಯುಸಿ ಇದ್ದಾರೆ ಅನ್ನುವ ಸುದ್ದಿ ಕೂಡ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ಗಾಗಿಯೇ ರನ್ನ ಚಿತ್ರದ ಡೈರೆಕ್ಟರ್ ನಂದ್ ಕಿಶೋರ್ ಅವರೂ ಕಥೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೊಂದು ಒಳ್ಳೆ ಸಿನಿಮಾ ಕೊಡೋ ಹುಮ್ಮಸ್ಸಿನಲ್ಲಿ ನಂದ್ ಕಿಶೋರ್ ಅವರು ಕಥೆ ಮಾಡ್ತಿದ್ದಾರೆ. ನಂದ್ ಕಿಶೋರ್ ಹೇಳಿದ ಒನ್ ಲೈನ್ ಸ್ಟೋರಿಯನ್ನ ಕೂಡ ಕಿಚ್ಚ ಈಗಾಗಲೇ ಕೇಳಿದ್ದು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.




ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದು ಅನ್ನುವುದಕ್ಕೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ತಮಿಳು ನಿರ್ದೇಶಕ ವೆಂಕಟ್ ಪ್ರಭು ಅವರ ಚಿತ್ರವನ್ನ ಕಿಚ್ಚ ಮಾಡ್ತಾರಾ? ಅನ್ನುವ ಕುತೂಹಲ ಇದೆ. ಇಲ್ಲವೇ ಕಬಾಲಿ ಚಿತ್ರದ ಡೈರೆಕ್ಟರ್ ಕಲೈಪುಲಿ ಎಸ್.ತನು ನಿರ್ದೇಶನದ ಚಿತ್ರವೇ ಮೊದಲು ಆರಂಭವಾಗುತ್ತದಯೇ ಅನ್ನೋದು ಕೂಡ ಈಗೀನ ಇನ್ನೂ ಒಂದು ಕುತೂಹಲವಾಗಿದೆ.
kichcha sudeepa new movie latest viral news.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 10:15 pm
Mangalore Correspondent
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm