ಬ್ರೇಕಿಂಗ್ ನ್ಯೂಸ್
04-11-22 01:39 pm Source: Vijayakarnataka ಸಿನಿಮಾ
ರಮ್ಯಾ ಅವರು 8 ವರ್ಷದಿಂದ ನಟಿಸಿಲ್ಲ, ಈಗ ಅವರು ನಮ್ಮ ಸಿನಿಮಾದಲ್ಲಿ ನಟಿಸಬೇಕು. ರಮ್ಯಾ ( Ramya ) ನಮ್ಮ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರೆ ದೇಹದಲ್ಲಿರುವ ರಕ್ತ ಕೊಡ್ತೀನಿ, ರಮ್ಯಾ ನೋಡದಿರುವ ಕಣ್ಣುಗಳನ್ನು ಕತ್ತರಿಸಿಹಾಕಿಬಿಡ್ತೀನಿ, ಕೈಕಾಲು ಕಟ್ ಮಾಡಿಕೊಳ್ತೀವಿ ಅಂತ ಹಾಸ್ಟೆಲ್ ಹುಡುಗರು ಬೇಡಿಕೆಯಿಟ್ಟಿದ್ದಾರೆ. ಆ ನಂತರ ರಮ್ಯಾ ಅವರು ಓಕೆ ಎಂದಿದ್ದಾರೆ. ಏನಿದು ಈ ರೀತಿ ಅಂತ ಕೆಲವರಿಗೆ ಸಂದೇಹ ಬಂದಿರಬಹುದು.
ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಕೊನೆ ಕ್ಷಣದಲ್ಲಿ ರಮ್ಯಾ ಆ ಚಿತ್ರದಿಂದ ಹೊರ ಬಂದರು. ಈಗ ಅವರು ಇನ್ನೊಂದು ಚಿತ್ರದಲ್ಲಿಅತಿಥಿ ಪಾತ್ರದಲ್ಲಿ ನಟಿಸಿದ್ದಾರಂತೆ, ಅದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ( Hostel Hudugaru Bekagiddare ). ಆದರೆ ಚಿತ್ರತಂಡ, ರಮ್ಯ ಅವರು ನಟಿಸಿಲ್ಲ, ಬದಲಿಗೆ ಪ್ರೋಮೊದಲ್ಲಿ ಮಾತ್ರ ಇದ್ದಾರೆ ಎಂದಿದೆ.

ನಿತಿನ್ ಕೃಷ್ಣ ಮೂರ್ತಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಇವರು ಮನರಂಜನಾ ವಾಹಿನಿಯೊಂದರಲ್ಲಿ ಮುಖ್ಯ ಹುದ್ದೆಯಲ್ಲಿದ್ದರು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಫನ್ ಕಾಮಿಡಿ ಜಾನರ್ನ ಚಿತ್ರ. ಇದರಲ್ಲಿ 300 ಜನ ಹೊಸ ಕಲಾವಿದರು ನಟಿಸಿದ್ದಾರೆ. ಒಂದು ಹಾಸ್ಟೆಲ್ನಲ್ಲಿ ನಡೆಯುವ ಘಟನೆಗಳೇ ಈ ಸಿನಿಮಾಗೆ ಸ್ಪೂರ್ತಿ. ಒಂದಿಡೀ ಹಾಸ್ಟೆಲ್ ಹಲವು ತಮಾಷೆಗಳ ಆಗರವಾಗಿರುತ್ತದೆ. ಅದನ್ನು ಹೇಗೆ ನಡೆಯುತ್ತದೋ ಹಾಗೆ ಸೆರೆ ಹಿಡಿದರೆ ಹೇಗಿರುತ್ತದೆ ಎಂಬುದರ ಫಾರ್ಮಾಟ್ ಈ ಚಿತ್ರ. ಇದನ್ನು ಫೌಂಡ್ ಪುಟೇಜ್ ಕಾಮಿಡಿ ಎಂದು ಸಹ ಕರೆಯುತ್ತಾರೆ’ ಎಂದಿದ್ದಾರೆ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ.
‘ರಮ್ಯಾ ಅವರು ಸಿನಿಮಾದಲ್ಲಿ ನಟಿಸುತ್ತಾರಾ ಇಲ್ಲವಾ ಎಂಬುದನ್ನು ನಾವು ಹೇಳಿಲ್ಲ. ಆದರೆ ಈ ಪ್ರೋಮೊ ವಿಡಿಯೋದಲ್ಲಂತೂ ಅವರಿದ್ದಾರೆ. ಅಷ್ಟನ್ನು ಮಾತ್ರ ನಾನು ಹೇಳುತ್ತೇನೆ. ಹೊಸಬರಿಗೆ ರಮ್ಯಾ ಅವರಂತಹ ದೊಡ್ಡ ನಟಿಯ ಬೆಂಬಲ ಸಿಕ್ಕಿದ್ದು ನಮ್ಮ ಅದೃಷ್ಟ’ ಎಂದು ಅಡ್ಡ ಗೋಡೆಯ ಮೇಲೆ ದೀಪವನ್ನು ಇಟ್ಟಿದ್ದಾರೆ ನಿರ್ದೇಶಕರು. ಒಟ್ಟಾರೆ ರಮ್ಯಾ ಕಮ್ಬ್ಯಾಕ್ ಇನ್ನೂ ನಿರ್ಧಾರವಾಗಿಲ್ಲ. ಆದರೆ ಅವರ ನಟನೆಯ ಸಿನಿಮಾದ ಅಧಿಕೃತ ಅನೌನ್ಸ್ಮೆಂಟ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಎಲ್ಲದಕ್ಕೂ ರಮ್ಯ ಅವರೇ ಉತ್ತರಿಸಬೇಕಿದೆ.
Actress Ramya Act In Hostel Hudugaru Bekagiddare Movie Promotional Video.
15-12-25 02:23 pm
Bangalore Correspondent
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
15-12-25 08:12 pm
HK News Desk
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
15-12-25 05:40 pm
Mangalore Correspondent
Mangalore Reels, Arrest, Police: ತಲವಾರು ಹಿಡಿದ...
14-12-25 05:48 pm
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
15-12-25 10:26 pm
Mangalore Correspondent
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm