ಬ್ರೇಕಿಂಗ್ ನ್ಯೂಸ್
28-10-22 01:14 pm Source: Vijayakarnataka ಸಿನಿಮಾ
ಸಹಜ ನಟನೆಯಿಂದ ಹೆಸರು ಮಾಡಿರುವ ಶ್ರುತಿ ಹರಿಹರನ್ ( Sruthi Hariharan ) ಮದುವೆ, ಮಗಳು ಎಂದು ಒಂದಷ್ಟು ದಿನಗಳ ಕಾಲ ಸಿನಿಮಾ ರಂಗದಿಂದ ದೂರವಿದ್ದರು. ನಟನೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಾಸ್ಸಾಗಿರುವ ಅವರು, ಈಗ ನಿರ್ದೇಶನದತ್ತಲೂ ಮುಖ ಮಾಡಿದ್ದಾರೆ. ‘ರಾಟೆ’, ‘ಬ್ಯೂಟಿಫುಲ್ ಮನಸುಗಳು’ ಸೇರಿದಂತೆ ಹಲವು ಸಿನಿಮಾಗಳಲ್ಲಿಅದ್ಭುತ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಶ್ರುತಿ ಹರಿಹರನ್, ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭಿಸಿ, ಒಂದು ಕಿರುಚಿತ್ರವನ್ನೂ ನಿರ್ಮಾಣ ಮಾಡಿದ್ದರು. ಈಗ ಡೈರೆಕ್ಟರ್ ಕ್ಯಾಪ್ ತೊಡಲು ಅವರು ಸಜ್ಜಾಗುತ್ತಿದ್ದು, ಅದಕ್ಕಿಂತ ಮುನ್ನ ಒಂದು ವಿಡಿಯೊ ಆಲ್ಬಂ ಹಾಡನ್ನು ನಿರ್ದೇಶನ ಮಾಡಿದ್ದಾರೆ.
‘ನನಗೆ ನಿರ್ದೇಶನ ಮತ್ತು ಬರವಣಿಗೆ ಮೊದಲಿನಿಂದಲೂ ಬಹಳ ಇಷ್ಟ. ಆದರೆ ಅವಕಾಶ ಸಿಕ್ಕಿರಲಿಲ್ಲ. ಒಮ್ಮೆ ನನ್ನ ಕಾಲೇಜಿನ ಜೂನಿಯರ್ ವಿನೀತ್ ವಿನ್ಸೆಂಟ್ ಎಂಬವರು ವಿಡಿಯೊ ಆಲ್ಬಂ ಐಡಿಯಾ ಕೊಟ್ಟರು. ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಸಂಗೀತಗಾರ. ಅವರ ವಿಡಿಯೋ ಆಲ್ಬಂನ್ನು ನಾನು ನಿರ್ದೇಶನ ಮಾಡಿದ್ದೇನೆ. ಇದು ಫುಟ್ಬಾಲ್ ಕುರಿತಾದ ಇಂಗ್ಲಿಷ್ ಹಾಡು’ ಎಂದಿದ್ದಾರೆ ಶ್ರುತಿ ಹರಿಹರನ್.
‘ಊರು, ಜಾತಿ, ಧರ್ಮ ಹೀಗೆ ಬೇರೆ ಬೇರೆಯಾಗಿ ಬದುಕುವ ನಾವು ಒಂದು ಹಾಡು ಕೇಳಿದಾಗ ಮತ್ತು ಆಟವಾಡುವಾಗ ಒಂದೇ ಆಗುತ್ತೇವೆ. ಇದೇ ಈ ಹಾಡಿನ ಕಾನ್ಸೆಪ್ಟ್. ಇದನ್ನು ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಫುಟ್ಬಾಲ್ ಗೀತೆಯನ್ನಾಗಿ ಬಳಸುತ್ತೇವೆ. ಈ ಹಾಡಿನಲ್ಲಿ ಹಲವು ಊರುಗಳ ಫುಟ್ಬಾಲ್ ಆಟಗಾರರು ಬಂದು ಹೋಗುತ್ತಾರೆ. ಇದರ ನಿರ್ದೇಶನ ಮಾಡಲು ನಾನು ಸಾಕಷ್ಟು ಹೋಮ್ವರ್ಕ್ ಮಾಡಿಕೊಂಡಿದ್ದೆ. ಒಂದಷ್ಟು ಸ್ಕ್ರೀನ್ ರೈಟಿಂಗ್ ವಿಡಿಯೊಗಳನ್ನು ನೋಡಲು ಆರಂಭಿಸಿದೆ. ಆನ್ಲೈನ್ನಲ್ಲಿ ಸಣ್ಣ ಕೋರ್ಸ್ ಮಾಡಿದೆ. ಅವೆಲ್ಲವೂ ನನಗೆ ಈ ಹಾಡನ್ನು ನಿರ್ದೇಶನ ಮಾಡಲು ಅನುಕೂಲವಾದವು. ಇದು ಮೂರು ನಿಮಿಷಗಳ ವಿಡಿಯೊ ಹಾಡು’ ಎಂದು ವಿವರಿಸಿದ್ದಾರೆ ಶ್ರುತಿ ಹರಿಹರನ್.
‘ಮುಂದಿನ ದಿನಗಳಲ್ಲಿಒಂದು ಅಂಥಾಲಜಿ ನಿರ್ದೇಶನ ಮಾಡುವ ಐಡಿಯಾ ಇದೆ. ಅದರ ಬಗೆಗಿನ ಕೆಲಸಗಳು ನಡೆಯುತ್ತಿವೆ. ಇದರ ಜತೆಗೆ ಒಂದು ಕಿರುಚಿತ್ರ ನಿರ್ದೇಶಿಸುವ ಪ್ರಯತ್ನದಲ್ಲಿದ್ದೇನೆ. ಬೆಂಗಳೂರಿನಂಥ ನಗರದಲ್ಲಿ ಹೇಗೆ ಹಲವು ಭಾಷೆಯವರು ಎಲ್ಲಾ ಭಾಷೆ ಮಾತನಾಡುತ್ತಾರೋ, ಅದೇ ರೀತಿ ಈ ಕಿರುಚಿತ್ರದಲ್ಲಿ ಬರುವ ಕಲಾವಿದರು ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ. ಹಾಗಾಗಿ ಇದು ಎಲ್ಲಭಾಷೆಗಳ ಕಿರುಚಿತ್ರ ಎನ್ನಬಹುದು’ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
"ನಾನೀಗ ನಿರ್ದೇಶನ ಮಾಡಿರುವ ವಿಡಿಯೊ ಆಲ್ಬಂ ಹೆಸರು ‘ಲೆಟ್ ಇಟ್ ಫ್ಲೈ’. ಚಿತ್ರರಂಗದಲ್ಲಿದಿನ ಕಳೆದಂತೆ ಹೊಸತನ್ನು ಮಾಡುವ ತುಡಿತ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿನಾನು ನಿರ್ದೇಶನ ಮತ್ತು ಬರವಣಿಗೆ ಎರಡರಲ್ಲೂ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ" ಎಂದಿದ್ದಾರೆ ಶ್ರುತಿ ಹರಿಹರನ್
Sruthi Hariharan Direct Video Album Let It Fly.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm